ಆ್ಯಪ್ನಗರ

ಶಿಕ್ಷಣ ಎಲ್ಲರಿಗೂ ಸಿಗಲಿ

ಯಾರೂ ಕೂಡ ಅಕ್ಷರದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಕರೀಮುದ್ದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ್ ಹೇಳಿದರು.

ವಿಕ ಸುದ್ದಿಲೋಕ 14 Mar 2016, 5:50 am
ಹುಣಸೂರು: ಯಾರೂ ಕೂಡ ಅಕ್ಷರದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಕರೀಮುದ್ದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ್ ಹೇಳಿದರು.
Vijaya Karnataka Web
ಶಿಕ್ಷಣ ಎಲ್ಲರಿಗೂ ಸಿಗಲಿ


ಜಿಲ್ಲಾ ಸಾಕ್ಷಾರತಾ ಸಮಿತಿ, ರಾಜ್ಯ ಸಂಪನ್ಮೂಲ ಕೇಂದ್ರ ಜನಶಿಕ್ಷಣ ಕೇಂದ್ರ ಆಶ್ರಯದಲ್ಲಿ ಸಂಸದರ ಆದರ್ಶ ಗ್ರಾಮಕ್ಕೆ ಆಯ್ಕೆಯಾಗಿರುವ ಕರಿಮುದ್ದನ ಹಳ್ಳಿಯಲ್ಲಿ ನಡೆದ ಸಾಕ್ಷರತಾ ಕಲಿಕಾ ಜಾಥಾ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ವಿದ್ಯೆಯೂ ಮನುಷ್ಯನ ವ್ಯಕ್ತಿತ್ವ ವಿಕಸನಗೊಳಿಸಲಿದೆ. ಮಹಿಳೆಯರು ಕಲಿಕೆಯಲ್ಲಿ ಭಾಗವಹಿಸಿ, ಹೊಸ ಬದಲಾವಣೆಗೆ ನಾಂದಿ ಹಾಡಬೇಕು. ಅಲ್ಲದೇ ಸಿಕ್ಕ ಅವಕಾಶ ಬಳಸಿಕೊಂಡು ಸಬಲರಾಗಬೇಕು ಎಂದರು. ಜಿಲ್ಲಾ ಸಾಕ್ಷಾರತಾ ಸಮಿತಿಯ ತೇ.ಸಿ. ವಿಶ್ವೇಶ್ವರಯ್ಯ, ಜನ ಶಿಕ್ಷಣ ಸಂಸ್ಥೆ ನಿರ್ದೇಶಕ ರಮೇಶ್ ಮಾತನಾಡಿದರು.

ರಾಜ್ಯ ಸಂಪನ್ಮೂಲ ಕೇಂದ್ರದ ಅಧಿಕಾರಿ ಮಮತಾ ಎಲ್ಲರೂ ಕಲಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಮುಖ್ಯ ವಾಹಿನಿಗೆ ಬರಬೇಕು. ಸಂಸದರ ಆದರ್ಶ ಗ್ರಾಮ ಪೂರ್ಣ ಸಾಕ್ಷಾರತಾ ಗ್ರಾಮವಾಗಲು ಸಹಕಾರ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ವತ್ತಿ ಕೌಶಲ್ಯ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಅರ್ಹತಾ ಪತ್ರ ವಿತರಿಸಲಾಯಿತು.

ಅಕ್ಷರ ಜಾಥಾದಲ್ಲಿ ನವಸಾಕ್ಷರರು, ಸ್ವಯಂ ಸೇವಕರು, ಮಹಿಳೆಯರು, ಸದಸ್ಯ ಕಾರ್ಯದರ್ಶಿ ನಂಜುಂಡಯ್ಯ, ತಾ.ಪಂ. ಸಹಾಯಕ ನಿರ್ದೇಶಕರಾದ ಕಷ್ಣಮೂರ್ತಿ, ಪಿಡಿಒ ಸಣ್ಣೇಗೌಡ, ತಾ.ಸಂಯೋಜಕರಾದ ಶಶಿಕುಮಾರ್, ವಸಂತ್‌ಕುಮಾರ್, ಪಂಚಾಯಿತಿ ಪ್ರೇರಕ ಕಷ್ಣ, ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ