ಆ್ಯಪ್ನಗರ

ಚೆಂಡು ಹೂ ಕೃಷಿ: ಬೆಳೆಗಾರರಿಗೆ ಸನ್ಮಾನ

ತಾಲೂಕಿನ ಬೀಚನಹಳ್ಳಿ ಗ್ರಾಮದ ಪ್ರವಾಸಿ ಮಂದಿರದಲ್ಲಿ ಎಚ್.ಡಿ.ಕೋಟೆ ಮತ್ತು ಗುಂಡ್ಲುಪೇಟೆ ತಾಲೂಕಿನಲ್ಲಿ ಚೆಂಡು ಹೂವು ಹೆಚ್ಚು ಬೆಳೆದ ರೈತರಿಗೆ ಸಿಂಥೈಟ್ ಕಂಪನಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.

Vijaya Karnataka Web 20 Mar 2016, 8:06 pm
ಎಚ್.ಡಿ.ಕೋಟೆ : ತಾಲೂಕಿನ ಬೀಚನಹಳ್ಳಿ ಗ್ರಾಮದ ಪ್ರವಾಸಿ ಮಂದಿರದಲ್ಲಿ ಎಚ್.ಡಿ.ಕೋಟೆ ಮತ್ತು ಗುಂಡ್ಲುಪೇಟೆ ತಾಲೂಕಿನಲ್ಲಿ ಚೆಂಡು ಹೂವು ಹೆಚ್ಚು ಬೆಳೆದ ರೈತರಿಗೆ ಸಿಂಥೈಟ್ ಕಂಪನಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.
Vijaya Karnataka Web
ಚೆಂಡು ಹೂ ಕೃಷಿ: ಬೆಳೆಗಾರರಿಗೆ ಸನ್ಮಾನ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಂಥೈಟ್ ಕಂಪನಿಯ ವ್ಯವಸ್ಥಾಪಕ ಶಿವಪ್ರಕಾಶ್, ರೈತರು ಚೆಂಡು ಹೂವು ಬೆಳೆಯುವ ವಿಧಾನಗಳನ್ನು ಮೊದಲು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಬೆೆಳೆಗೆ ಗೊಬ್ಬರ ಮತ್ತು ಔಷಧಿ ಕೊಡುವ ಬಗ್ಗೆ ರೈತರು ಗಮನ ವಹಿಸಬೇಕು. ಜತೆಗೆ ಸಮಯ ಪಾಲಿಸಬೇಕು ಎಂದರು. ಕಳೆದ ಬಾರಿ ಮಳೆ ಹೆಚ್ಚಾದ ಪರಿಣಾಮ ರೈತರು ಬೆಳೆ ನಷ್ಟ ಅನುಭವಿಸಿದರು. ಆದರೆ ಈ ಬಾರಿ ಹದವಾಗಿ ಮಳೆಯಾದರೆ ಇಳುವರಿ ಉತ್ತಮವಾಗಿದ್ದರೆ ಉತ್ತಮ ಬೆಲೆಯೂ ಸಿಗಲಿದೆ ಎಂದರು. ಇದೇ ಸಂದರ್ಭದಲ್ಲಿ ಉತ್ತಮ ಬೆಳೆ ತೆಗೆದ 8 ಮಂದಿ ರೈತರು ಪ್ರಶಸ್ತಿ ಪತ್ರ ಮತ್ತು ಪ್ರೋತ್ಸಾಹ ಧನ ವಿತರಿಸಲಾಯಿತು. ಉದಯಕಿರಣ್, ಸೋಜನ್, ಸಂದೀಪ್, ಭಾಸ್ಕರ್, ಮಹೇಂದ್ರ, ವೆಂಕಟೇಶ್ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ