ಆ್ಯಪ್ನಗರ

ಮಿರ್ಲೆಯಲ್ಲಿ ನೈರ್ಮಲ್ಯ ಮರೀಚಿಕೆ

ಸ್ವಚ್ಛತೆಯ ಕಡೆ ಒಂದು ಹೆಜ್ಜೆ ಎನ್ನುವ ದಿನಗಳಲ್ಲಿ ಅಶುಚಿತ್ವದ ಕಡೆ ಒಂದು ಹೆಜ್ಜೆ ಎಂಬಂತೆ ತಾಲೂಕಿನ ಪ್ರಮುಖ ಗ್ರಾಮಗಳಲ್ಲಿ ಒಂದಾದ ಮಿರ್ಲೆ ಗ್ರಾಮದದಲ್ಲಿ ನೈರ್ಮಲ್ಯ ಮರೀಚಿಕೆಯಾಗಿದೆ.

ವಿಕ ಸುದ್ದಿಲೋಕ 29 Mar 2016, 5:30 am
ಕಷ್ಣರಾಜನಗರ: ಸ್ವಚ್ಛತೆಯ ಕಡೆ ಒಂದು ಹೆಜ್ಜೆ ಎನ್ನುವ ದಿನಗಳಲ್ಲಿ ಅಶುಚಿತ್ವದ ಕಡೆ ಒಂದು ಹೆಜ್ಜೆ ಎಂಬಂತೆ ತಾಲೂಕಿನ ಪ್ರಮುಖ ಗ್ರಾಮಗಳಲ್ಲಿ ಒಂದಾದ ಮಿರ್ಲೆ ಗ್ರಾಮದದಲ್ಲಿ ನೈರ್ಮಲ್ಯ ಮರೀಚಿಕೆಯಾಗಿದೆ.
Vijaya Karnataka Web
ಮಿರ್ಲೆಯಲ್ಲಿ ನೈರ್ಮಲ್ಯ ಮರೀಚಿಕೆ

ಗ್ರಾಮದಲ್ಲಿ ಎಲ್ಲೆಂದರಲ್ಲಿ ಕಸ ಹಾಕುವ ಪರಿಪಾಟ, ಕೋಳಿ ತ್ಯಾಜ್ಯ, ಅಂಗಡಿ ಮುಂಗಟ್ಟು, ಮನೆಗಳಿಂದ ವಿಲೇವಾರಿ ಯಾಗದ ವ್ಯವಸ್ಥೆಯಿಂದ ಅಶುಚಿತ್ವ ಗ್ರಾಮದಲ್ಲಿ ರಾಚುತ್ತಿದೆ.

ಹೆದ್ದಾರಿಯಲ್ಲೂ ತ್ಯಾಜ್ಯ: ಇಲ್ಲಿನ ಗ್ರಾಮ ಪಂಚಾಯಿತಿಯ ಆಡಳಿತ ಅವ್ಯವಸ್ಥೆಯಿಂದ ಗ್ರಾಮದ ರಾಜ್ಯ ಹೆದ್ದಾರಿ, ಗ್ರಾಮ ಪಂಚಾಯಿತಿ ಕಚೇರಿ ಇರುವ ಕಡೆಯೇ ತ್ಯಾಜ್ಯ ತಾಂಡವ ವಾಡುತ್ತಿದೆ. ಇದು ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಸಾಲಿಗ್ರಾಮ ದಿಂದ ಕಷ್ಣರಾಜನಗರದ ಕಡೆ ಬರುವ ರಾಜ್ಯ ಹೆದ್ದಾರಿ ಬಳಿಯೇ ನೀರಾವರಿ ಇಲಾಖೆ ನಾಲೆ ಹರಿದುಹೋಗಿದ್ದು , ಈ ನಾಲೆ ಇಲ್ಲಿ ಹಾಕುವ ಎಲ್ಲಾ ತ್ಯಾಜ್ಯಗಳನ್ನು ನುಂಗಿ ಕಲುಷಿತಗೊಳಿಸಿ ನಂತರ ಗ್ರಾಮದ ದೊಡ್ಡಕೆರೆ ಸೇರುತ್ತಿದೆ. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಭಯ ಗ್ರಾಮಸ್ಥರಲ್ಲಿದೆ.

ದುರ್ವಾಸನೆ: ಗ್ರಾಮದ ಬಸ್‌ನಿಲ್ದಾಣದ ಸ್ಥಳದಿಂದ ಕೆರೆಯವರೆಗೆ ಇರುವ ನಾಲೆಗೆ ಸಾರ್ವಜನಿಕರು ಕಾಗದ, ಪ್ಲಾಸ್ಟಿಕ್, ಕೋಳಿ ತ್ಯಾಜ್ಯ, ಅಂಗಡಿ ಮುಂಗಟ್ಟುಗಳ ತ್ಯಾಜ್ಯ ಸೇರಿಸುತ್ತಿದ್ದಾರೆ. ಇದರಿಂದ ನಾಲೆಯೊಂದಿಗೆ ಇಡೀ ಕೆರೆ ಕಲುಷಿತಗೊಂಡು ದುರ್ವಾಸನೆ ಬೀರಲು ಕಾರಣವಾಗಿದೆ. ಜತೆಗೆ ಸೊಳ್ಳೆ, ನೊಣ, ಕ್ರಿಮಿ, ಕೀಟಗಳ ಆವಾಸ ತಾಣವಾಗಿ ಮಾರ್ಪಟ್ಟಿದೆ.

ಪ್ರಯಾಣಿಕರ ಪರದಾಟ: ಅನೈರ್ಮಲ್ಯದಿಂದಾಗಿ ಬಸ್ಸಿನಗೆ ಕಾಯುವ ಪ್ರಯಾಣಿಕರಿಗೆ ನುಂಗಲಾರದ ತುತ್ತಾಗಿದೆ. ಮೂಗು ಮುಚ್ಚಿಕೊಂಡು ನಿಲ್ಲುವ, ಕೂರವ ಪರಿಸ್ಥಿತಿ ಉಂಟಾಗಿದೆ. ಇನ್ನಾದರೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಆಡಳಿತ ಕ್ರಮ ಕೈಗೊಂಡು ಸ್ವಚ್ಛತೆಯ ಕಡೆ ಗಮನ ಹರಿಸಬೇಕಿದೆ. ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ನೈರ್ಮಲ್ಯತೆ ಕಾಪಾಡುವ ಮೂಲಕ ಜನತೆ ಆರೋಗ್ಯದ ಕಡೆ ಗಮನಹರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ