ಆ್ಯಪ್ನಗರ

ಭೂ, ಜಲ ಸಂರಕ್ಷಣೆ ಅವಶ್ಯ

ಭೂಮಿ ಮತ್ತು ಜಲ ಸಂರಕ್ಷಣೆಗೆ ಮುಂದಾಗದಿದ್ದಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತ ಎಂದು ಭೌಗೋಳ ಶಾಸ್ತ್ರದ ಸ್ನಾತ ಕೋತ್ತರ ವಿಭಾಗದ ನಿವತ್ತ ಪ್ರಾಧ್ಯಾಪಕ ಡಾ.ರಂಗನಾಥ್ ಎಚ್ಚರಿಸಿದರು.

Vijaya Karnataka Web 11 Apr 2016, 5:32 am
ಹುಣಸೂರು: ಭೂಮಿ ಮತ್ತು ಜಲ ಸಂರಕ್ಷಣೆಗೆ ಮುಂದಾಗದಿದ್ದಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತ ಎಂದು ಭೌಗೋಳ ಶಾಸ್ತ್ರದ ಸ್ನಾತ ಕೋತ್ತರ ವಿಭಾಗದ ನಿವತ್ತ ಪ್ರಾಧ್ಯಾಪಕ ಡಾ.ರಂಗನಾಥ್ ಎಚ್ಚರಿಸಿದರು. ಹುಣಸೂರಿನ ಡಿ.ಡಿ.ಅರಸ್ ಕಾಲೇಜಿನ ಭೌಗೋಳ ಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ‘ಈ ಭೂಮಿ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಹವಾಮಾನ ವೈಪರಿತ್ಯ: ನಾಗರೀಕತೆ ಹೆಚ್ಚಿದಂತೆಲ್ಲ ಭೂಮಿ, ನೀರು, ಗಾಳಿಗೆ ವಿಷ ಉಣಿಸಿದ್ದೇವೆ, ಪರಿಸರವನ್ನು ಹಾಳು ಮಾಡಿದ್ದೇವೆ. ಅಂತರ್ಜಲವನ್ನು ಬಸಿಯುತ್ತಲೇ ಇದ್ದೇವೆ. ಹೀಗಾಗಿ ಭೂಮಿಯ ತಾಪಮಾನ ಹೆಚ್ಚುತ್ತಿದ್ದು, ಹವಾಮಾನ ವೆಪರಿತ್ಯ ಉಂಟಾಗು ತ್ತಿದೆ.
Vijaya Karnataka Web
ಭೂ, ಜಲ ಸಂರಕ್ಷಣೆ ಅವಶ್ಯ


ಚೆನೆನಲ್ಲಿ ನಡೆದ ಸುನಾಮಿ, ಉತ್ತರ ಭಾರತದಲ್ಲಿ ಜಲ ಪ್ರಳಯ, ಭೂಕಂಪ,ಇತ್ತೀಚೆಗೆ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಬಿರು ಬೇಸಿಗೆ ಗೋಚರಿಸುತ್ತಿರುವುದು, ಜನರು ಬಿಸಿಲಿನ ಝಳಕ್ಕೆ ಬಲಿಯಾಗುತ್ತಿರುವುದು ಇದರಿಂದಲೇ. ಸಾಕಷ್ಟು ಕಡೆ ನೀರಿಗೆ ಆಹಾಕಾರ ಉಂಟಾಗಿದೆ. ಜಲ ಸಂರಕ್ಷಣೆ ಉಪಾಯ ಕಂಡುಕೊಳ್ಳದಿದ್ದಲ್ಲಿ ಇನ್ನು ಹತ್ತು ವರ್ಷಗಳಲ್ಲಿ ಅಪಾಯ ಬಂದೊದಗಿ ನೀರಿಗಾಗಿ ಯುದ್ದ ನಡೆದರೂ ಆಶ್ಚರ್ಯವೆನಿಸದು ಎಂದರು. ನೀರು ಬತ್ತುವಿಕೆ, ವಾಯು ಮಾಲಿನ್ಯ, ಉಷ್ಣಾಂಶ ಹೆಚ್ಚಳದಿಂದ ನಾಗರೀಕತೆಯೇ ನಾಶವಾಗುತ್ತಿದೆ. ಇತ್ತೀಚೆಗೆ ನದಿಗಳಿಂದ ಕೆರೆಗೆ ನೀರು ತುಂಬಿಸುವ ಪರಿ ಹೆಚ್ಚುತ್ತಿದೆ. ಆದರೆ ನದಿಗಳೇ ಬತ್ತಿಹೋದರೆ ಏನುಮಾಡುವುದೆಂಬ ಚಿಂತನೆ ನಡೆಯಬೇಕಿದೆ. ಪ್ರತಿಯೊಬ್ಬರು ಮಳೆ ಕುಯ್ಲು ಮೂಲಕ ಮಳೆ ನೀರು ಶೇಖರಿಸಿಡುವ ಜಾಣ್ಮೆ ಪ್ರದರ್ಶಿಸಬೇಕು. ಚೀನಾ ದೇಶ ಜನಸಂಖ್ಯೆ ನಿಯಂತ್ರಣದಿಂದ ಯುವ ಜನಾಂಗ ಕಡಿಮೆಯಾಗಿ ಅಭಿವದ್ಧಿಗೆ ತೊಡಕಾಗಿದೆ. ದೇಶದಲ್ಲಿ ಇನ್ನು ಹತ್ತು ವರ್ಷಗಳಲ್ಲಿ ಯುವ ಜನಾಂಗದ ಸಂಖ್ಯೆ ಕಡಿಮೆಯಾಗಿ ಸಮಾಜ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.

ವಿದ್ಯಾರ್ಥಿಗಳು ಭೂಮಿ, ಜೀವಿಗಳ ಹುಟ್ಟುವಿಕೆ ಸೇರಿದಂತೆ ಅನೇಕ ಅನುಮಾನಗಳ ಬಗ್ಗೆ ಸಂವಾದ ನಡೆಸಿದರು.

ಪ್ರಾಂಶುಪಾಲ ವೆಂಕಟೇಶಯ್ಯ, ಭೂಗೋಳ ಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀನಿವಾಸ್ ಮಾತನಾಡಿದರು. ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ ಡಾ.ಆನಂದ್, ಪ್ರಾಧ್ಯಾಪಕರಾದ ಕಷ್ಣಮೂರ್ತಿಮಯ್ಯ, ಪ್ರಕಾಶ್ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ