ಹುಣಸೂರು: ಕುಡಿತದ ಚಟದಿಂದ ಸರಣಿ ಸಾವು ಸಂಭವಿಸಿರುವ ಹುಣಸೂರು ತಾಲೂಕಿನ ಕೊಟ್ಟಿಗೆ ಕಾವಲ್ ಹಾಡಿ ಬಳಿಯ ಬಾರನ್ನು ತೆರವುಗೊಳಿಸುವುದಾಗಿ ಅಬಕಾರಿ ಉಪ ಅಧೀಕ್ಷಕ ಗಂಗಾಧರ ಮುದಣ್ಣೆವರ್ ಭರವಸೆ ನೀಡಿದ್ದಾರೆ.
ಅಬಕಾರಿ ಇಲಾಖೆಯಿಂದ ಹಾಡಿಯಲ್ಲಿ ಬುಧವಾರ ನಡೆದ ಜನ ಜಾಗೃತಿ ಸಭೆಯಲ್ಲಿ ಆದಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘‘ಕುಡಿತ ಒಂದು ಕೆಟ್ಟ ಚಟ, ವಿಷಕಾರಿಯೂ ಹೌದು. ಜೀವಕ್ಕೆ ಅಪಾಯ ತಂದೊಡ್ಡುವ ಕುಡಿತವನ್ನು ಬಿಡಿ, ಮನುಷ್ಯನಿಗೆ ಆರೋಗ್ಯ ಮುಖ್ಯ, ಅದೇ ರೀತಿ ಮಕ್ಕಳ ಭವಿಷ್ಯವೂ ಪ್ರಮುಖ.
ಈ ನಿಟ್ಟಿನಲ್ಲಿ ಶ್ರಮಜೀವಿ ಗಿರಿಜನರು ದಿನವಿಡೀ ಕಷ್ಟಪಟ್ಟು ದುಡಿಯುವ ಸಂಪಾದನೆಯನ್ನು ಕುಡಿತಕ್ಕೆ ಮೀಸಲಿಟ್ಟು, ಇಡೀ ಜೀವಮಾನವನ್ನೇ ಸಾಯಿಸುತ್ತಿದ್ದೀರಿ. ಇದನ್ನು ಬಿಟ್ಟು ಪರಿವರ್ತನೆ ಮಾಡಿಕೊಳ್ಳಿ, ಎಲ್ಲ ಸರಕಾರಿ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ. ನಿಮ್ಮ ಅಕ್ಕಪಕ್ಕ ಹಳ್ಳಿಯ ಜನರಂತೆ ನೀವು ಕೂಡ ಉತ್ತಮ ಸ್ಥಿತಿಯಲ್ಲಿ ಬದುಕಿರಿ ಎಂದು ಮನವಿ ಮಾಡಿದರು.
ಹುಣಸೂರು ವೃತ್ತದ ನಿರೀಕ್ಷಕ ಧರಣಿಕುಮಾರ್ ಮಾತನಾಡಿ, ಜನರ ಒಳಿತಿಗಾಗಿ, ಮಹಿಳಾ ಸಂಘಟನೆಗಳ ಒತ್ತಾಯದ ಮೇರೆಗೆ ಸಾರಾಯಿಯನ್ನು ಸರಕಾರ ನಿಷೇಧ ಮಾಡಿತ್ತು. ಜನರು ಕುಡಿತ ಬಿಡುತ್ತಾರೆಂಬ ಸರಕಾರದ ಆಶಯ ಮರೀಚಿಕೆಯಾಯಿತು. ಆನಂತರದಲ್ಲಿ ಹಳ್ಳಿ-ಹಾಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಆರಂಭಗೊಂಡಿತು. ಕುಡಿತದ ಚಟವೂ ಹೆಚ್ಚಾಯಿತು. ಇದರಿಂದ ಹಾಡಿಗಳಲ್ಲಿ ಗಲಾಟೆ, ಸರಣಿ ಸಾವು ಸಂಭವಿಸಿದವು.
ಹಾಡಿಗಳಲ್ಲಂತೂ ಗಂಡು ಹೆಣ್ಣೆಂಬ ಭೇದ ಭಾವವಿಲ್ಲದೆ ಕುಡಿತಕ್ಕೆ ಅಂಟಿಕೊಂಡರು. ಸರಕಾರಕ್ಕೆ ಪ್ರತಿವರ್ಷ 17 ಸಾವಿರ ಕೋಟಿ ರೂ. ಆದಾಯ ಬರುತ್ತಿದೆಯಾದರೂ ಇಲ್ಲಿ ಪ್ರತಿಯೊಬ್ಬ ಮನುಷ್ಯನ ಜೀವ ಮುಖ್ಯವೆಂದು ತಿಳಿಯಿರಿ. ಇನ್ನಾದರೂ ಕುಡಿತ ಬಿಟ್ಟು ಮುಖ್ಯವಾಹಿನಿಗೆ ಬನ್ನಿ. ಕುಡಿತ ಬಿಟ್ಟ ಮಹಿಳೆಯರಿಗೆ ಆದರ್ಶ ಮಹಿಳೆ ಎಂದು ಇಲಾಖೆ ವತಿಯಿಂದ ಗೌರವಿಸಲಾಗುವುದು. ಎಲ್ಲೇ ಅಕ್ರಮ ಮದ್ಯ ಮಾರಾಟ ಕಂಡುಬಂದಲ್ಲಿ ಇಲಾಖೆಗೆ ಮಾಹಿತಿ ನೀಡಿರೆಂದು ಕೋರಿದರು.
ಹಾಡಿಯ ಮಹಿಳೆಯರು ಸೇರಿದಂತೆ ಎಲ್ಲರೂ ಗಿರಿಜನರ ಬದುಕನ್ನು ಹಾಳು ಮಾಡುತ್ತಿರುವ ಬಾರನ್ನು ಮೊದಲು ಮುಚ್ಚಿಸಿ, ನಮ್ಮ-ಮಕ್ಕಳ ಬದುಕನ್ನು ಹಾಳು ಮಾಡಬೇಡಿರೆಂದು ಹಕ್ಕೊತ್ತಾಯ ಮಂಡಿಸಿದರು.
ಅಬಕಾರಿ ನಿರೀಕ್ಷಕ ಶ್ರೀನಿವಾಸ್, ಆನಂದ್ ಕುಮಾರ್, ಉಪ ನಿರೀಕ್ಷಕ ಮಾನಸ, ಜಯಕೃಷ್ಣ, ಲೋಕೇಶ್ ಹಾಗೂ ಹಾಡಿಯ ಮೃತ ಕುಳ್ಳಯ್ಯನ ಪತ್ನಿ ಪಾಪಮ್ಮ, ಮುಖಂಡ ಮನು, ಉಮೇಶ, ಮಣಿ ಮತ್ತಿತರರು ಭಾಗವಹಿಸಿದ್ದರು.
ಅಬಕಾರಿ ಇಲಾಖೆಯಿಂದ ಹಾಡಿಯಲ್ಲಿ ಬುಧವಾರ ನಡೆದ ಜನ ಜಾಗೃತಿ ಸಭೆಯಲ್ಲಿ ಆದಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘‘ಕುಡಿತ ಒಂದು ಕೆಟ್ಟ ಚಟ, ವಿಷಕಾರಿಯೂ ಹೌದು. ಜೀವಕ್ಕೆ ಅಪಾಯ ತಂದೊಡ್ಡುವ ಕುಡಿತವನ್ನು ಬಿಡಿ, ಮನುಷ್ಯನಿಗೆ ಆರೋಗ್ಯ ಮುಖ್ಯ, ಅದೇ ರೀತಿ ಮಕ್ಕಳ ಭವಿಷ್ಯವೂ ಪ್ರಮುಖ.
ಈ ನಿಟ್ಟಿನಲ್ಲಿ ಶ್ರಮಜೀವಿ ಗಿರಿಜನರು ದಿನವಿಡೀ ಕಷ್ಟಪಟ್ಟು ದುಡಿಯುವ ಸಂಪಾದನೆಯನ್ನು ಕುಡಿತಕ್ಕೆ ಮೀಸಲಿಟ್ಟು, ಇಡೀ ಜೀವಮಾನವನ್ನೇ ಸಾಯಿಸುತ್ತಿದ್ದೀರಿ. ಇದನ್ನು ಬಿಟ್ಟು ಪರಿವರ್ತನೆ ಮಾಡಿಕೊಳ್ಳಿ, ಎಲ್ಲ ಸರಕಾರಿ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ. ನಿಮ್ಮ ಅಕ್ಕಪಕ್ಕ ಹಳ್ಳಿಯ ಜನರಂತೆ ನೀವು ಕೂಡ ಉತ್ತಮ ಸ್ಥಿತಿಯಲ್ಲಿ ಬದುಕಿರಿ ಎಂದು ಮನವಿ ಮಾಡಿದರು.
ಹುಣಸೂರು ವೃತ್ತದ ನಿರೀಕ್ಷಕ ಧರಣಿಕುಮಾರ್ ಮಾತನಾಡಿ, ಜನರ ಒಳಿತಿಗಾಗಿ, ಮಹಿಳಾ ಸಂಘಟನೆಗಳ ಒತ್ತಾಯದ ಮೇರೆಗೆ ಸಾರಾಯಿಯನ್ನು ಸರಕಾರ ನಿಷೇಧ ಮಾಡಿತ್ತು. ಜನರು ಕುಡಿತ ಬಿಡುತ್ತಾರೆಂಬ ಸರಕಾರದ ಆಶಯ ಮರೀಚಿಕೆಯಾಯಿತು. ಆನಂತರದಲ್ಲಿ ಹಳ್ಳಿ-ಹಾಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಆರಂಭಗೊಂಡಿತು. ಕುಡಿತದ ಚಟವೂ ಹೆಚ್ಚಾಯಿತು. ಇದರಿಂದ ಹಾಡಿಗಳಲ್ಲಿ ಗಲಾಟೆ, ಸರಣಿ ಸಾವು ಸಂಭವಿಸಿದವು.
ಹಾಡಿಗಳಲ್ಲಂತೂ ಗಂಡು ಹೆಣ್ಣೆಂಬ ಭೇದ ಭಾವವಿಲ್ಲದೆ ಕುಡಿತಕ್ಕೆ ಅಂಟಿಕೊಂಡರು. ಸರಕಾರಕ್ಕೆ ಪ್ರತಿವರ್ಷ 17 ಸಾವಿರ ಕೋಟಿ ರೂ. ಆದಾಯ ಬರುತ್ತಿದೆಯಾದರೂ ಇಲ್ಲಿ ಪ್ರತಿಯೊಬ್ಬ ಮನುಷ್ಯನ ಜೀವ ಮುಖ್ಯವೆಂದು ತಿಳಿಯಿರಿ. ಇನ್ನಾದರೂ ಕುಡಿತ ಬಿಟ್ಟು ಮುಖ್ಯವಾಹಿನಿಗೆ ಬನ್ನಿ. ಕುಡಿತ ಬಿಟ್ಟ ಮಹಿಳೆಯರಿಗೆ ಆದರ್ಶ ಮಹಿಳೆ ಎಂದು ಇಲಾಖೆ ವತಿಯಿಂದ ಗೌರವಿಸಲಾಗುವುದು. ಎಲ್ಲೇ ಅಕ್ರಮ ಮದ್ಯ ಮಾರಾಟ ಕಂಡುಬಂದಲ್ಲಿ ಇಲಾಖೆಗೆ ಮಾಹಿತಿ ನೀಡಿರೆಂದು ಕೋರಿದರು.
ಹಾಡಿಯ ಮಹಿಳೆಯರು ಸೇರಿದಂತೆ ಎಲ್ಲರೂ ಗಿರಿಜನರ ಬದುಕನ್ನು ಹಾಳು ಮಾಡುತ್ತಿರುವ ಬಾರನ್ನು ಮೊದಲು ಮುಚ್ಚಿಸಿ, ನಮ್ಮ-ಮಕ್ಕಳ ಬದುಕನ್ನು ಹಾಳು ಮಾಡಬೇಡಿರೆಂದು ಹಕ್ಕೊತ್ತಾಯ ಮಂಡಿಸಿದರು.
ಅಬಕಾರಿ ನಿರೀಕ್ಷಕ ಶ್ರೀನಿವಾಸ್, ಆನಂದ್ ಕುಮಾರ್, ಉಪ ನಿರೀಕ್ಷಕ ಮಾನಸ, ಜಯಕೃಷ್ಣ, ಲೋಕೇಶ್ ಹಾಗೂ ಹಾಡಿಯ ಮೃತ ಕುಳ್ಳಯ್ಯನ ಪತ್ನಿ ಪಾಪಮ್ಮ, ಮುಖಂಡ ಮನು, ಉಮೇಶ, ಮಣಿ ಮತ್ತಿತರರು ಭಾಗವಹಿಸಿದ್ದರು.