ಆ್ಯಪ್ನಗರ

ಖಿನ್ನತೆ: ಗೃಹಿಣಿ ಆತ್ಮಹತ್ಯೆ

ಮೈಸೂರು ತಾಯಿ ಮತ್ತು ಸಹೋದರ ಸಾವಿನಿಂದ ಮನನೊಂದ ಗೃಹಿಣಿ ಮಂಗಳವಾರ ಬೆಳಗ್ಗೆ ನೇಣಿಗೆ ಶರಣಾಗಿದ್ದಾರೆ...

Vijaya Karnataka Web 17 Nov 2016, 9:00 am

ಮೈಸೂರು: ತಾಯಿ ಮತ್ತು ಸಹೋದರ ಸಾವಿನಿಂದ ಮನನೊಂದ ಗೃಹಿಣಿ ಮಂಗಳವಾರ ಬೆಳಗ್ಗೆ ನೇಣಿಗೆ ಶರಣಾಗಿದ್ದಾರೆ.

ಜ್ಯೋತಿ ನಗರದ ಬಳಿಯ ಸಿಪಿಡಬ್ಲೂ ಕ್ವಾಟ್ರಸ್‌ ನಿವಾಸಿ ಆದಿ ನಾರಾಯಣ ಅವರ ಪತ್ನಿ ಶ್ರೀ ಲಕ್ಷ್ಮೇ(36) ಮೃತರು.

ಎರಡು ವರ್ಷಗಳ ಹಿಂದೆ ಇದೇ ಕಾರ್ತಿಕ ಮಾಸದ ಸೋಮವಾರದಂದು ಆಂಧ್ರದಲ್ಲಿರುವ ದೇವಸ್ಥಾನದಕ್ಕೆ ತೆರಳಿದ್ದ ಶ್ರೀ ಲಕ್ಷ್ಮೇ ಅವರ ತಾಯಿ ಮತ್ತು ಸಹೋದರ ಹೊಳೆಯಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದರು. ಈ ಘಟನೆ ನಂತರ ಶ್ರೀ ಲಕ್ಷ್ಮೇ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಕಳೆದ ಸೋಮವಾರ ನಡೆದ ಪುಣ್ಮಸ್ಮರಣೆ ವೇಳೆ ಇಬ್ಬರನ್ನು ನೆನೆಸಿಕೊಂಡು ದುಃಖ ತಪ್ತರಾಗಿದ್ದರು. ಮಂಗಳವಾರ ಬೆಳಗ್ಗೆ ಪತಿ ಕೆಲಸಕ್ಕೆ ಮತ್ತು ಮಕ್ಕಳು ಶಾಲೆಗೆ ತೆರಳಿದ ಬಳಿಕ ಮನೆಯಲ್ಲಿ ಒಬ್ಬರೇ ಇದ್ದ ಶ್ರೀ ಲಕ್ಷ್ಮೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ನಜರ್‌ಬಾದ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ