ಆ್ಯಪ್ನಗರ

ಲಾರಿಗೆ ಆಂಬ್ಯುಲೆನ್ಸ್‌ ಡಿಕ್ಕಿ: ಚಾಲಕ ಸಾವು

ಚಾಲಕ ಸಾವು ವಿಕ ಸುದ್ದಿಲೋಕ ಹುಣಸೂರು ಹುಣಸೂರು-ಮೈಸೂರು ರಸ್ತೆಯ ಡ್ರೀಮ್‌ ಲ್ಯಾಂಡ್‌ ಬಳಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ 108 ಆಂಬ್ಯುಲೆನ್ಸ್‌ ಡಿಕ್ಕಿ ಹೊಡೆದ ಪರಿಣಾಮ ...

ವಿಕ ಸುದ್ದಿಲೋಕ 31 May 2017, 9:00 am

ಹುಣಸೂರು: ಹುಣಸೂರು-ಮೈಸೂರು ರಸ್ತೆಯ ಡ್ರೀಮ್‌ ಲ್ಯಾಂಡ್‌ ಬಳಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ 108 ಆಂಬ್ಯುಲೆನ್ಸ್‌ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟು, ಸ್ಟಾಫ್‌ನರ್ಸ್‌ ತೀವ್ರ ಗಾಯಗೊಂಡರು.

ಮೂಲತಃ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಚನ್ನಮ್ಮಗೆರೆಯ ಕೃಷಿಕ ಶಿವಲಿಂಗಾರಾಧ್ಯರ ಏಕೈಕ ಪುತ್ರ, ಚಾಲಕ ಲೋಕೇಶಾರಾಧ್ಯ(30) ಮೃತ. ಇದೇ ವಾಹನದಲ್ಲಿದ್ದ ಸ್ಟಾಫ್‌ನರ್ಸ್‌ ಆನಂದ ತೀವ್ರಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೈಸೂರಿನಿಂದ ಹುಣಸೂರು ನಗರಕ್ಕೆ ಬರುತ್ತಿದ್ದ ಸಿಮೆಂಟ್‌ ತುಂಬಿದ್ದ ಲಾರಿ ಡೀಸೆಲ್‌ ಖಾಲಿಯಾಗಿದ್ದರಿಂದ ನಗರದ ಡ್ರೀಮ್‌ಲ್ಯಾಂಡ್‌ ಹೋಟೆಲ್‌ ಬಳಿ ರಸ್ತೆಯಲ್ಲೇ ನಿಲ್ಲಿಸಿದ್ದರು. ಮಂಗಳವಾರ ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಮೈಸೂರಿನಿಂದ ಹುಣಸೂರಿನತ್ತ 108 ವಾಹನ ಬರುತ್ತಿದ್ದ ವೇಳೆ ಕತ್ತಲೆಯಲ್ಲಿ ಲಾರಿ ನಿಂತಿದ್ದು ಗೋಚರಿಸದೆ, ಹಿಂಬದಿಯಿಂದ ಡಿಕ್ಕಿ ಹೊಡೆದ ರಭಸಕ್ಕೆ ಚಾಲಕ ಲೋಕೇಶಾರಾಧ್ಯ ಸ್ಥಳದಲ್ಲೇ ಮೃತಪಟ್ಟರು. ಸ್ಥಳಕ್ಕಾಗಮಿಸಿದ ಪೊಲೀಸರು, ಅದೇ ಮಾರ್ಗದಲ್ಲಿ ರಾವಂದೂರು ಕಡೆಯಿಂದ ಮೈಸೂರಿಗೆ ತೆರಳುತ್ತಿದ್ದ ಮತ್ತೊಂದು 108 ವಾಹನದಲ್ಲಿ ಗಾಯಾಳು ಆನಂದನನ್ನು ಮೈಸೂರಿಗೆ ಕರೆದೊಯ್ದು ಕೆ.ಆರ್‌.ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್‌ಐ ಷಣ್ಮುಗಂ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ