ಆ್ಯಪ್ನಗರ

ಹುತಾತ್ಮ ಪೊಲೀಸರ ಸ್ಮರಣೆ ಎಲ್ಲರ ಕರ್ತವ್ಯ

ಸಮಾಜದ ರಕ್ಷಣೆಗೆ ಜೀವದ ಹಂಗು ತೊರೆದು ಹೋರಾಡಿ ಹುತಾತ್ಮರಾಗುವ ಪೊಲೀಸರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಮೈಸೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್‌.ಕೆ.ವಂಟಿಗೋಡಿ ಹೇಳಿದರು.

Vijaya Karnataka 22 Oct 2018, 5:00 am
ಮೈಸೂರು : ಸಮಾಜದ ರಕ್ಷಣೆಗೆ ಜೀವದ ಹಂಗು ತೊರೆದು ಹೋರಾಡಿ ಹುತಾತ್ಮರಾಗುವ ಪೊಲೀಸರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಮೈಸೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್‌.ಕೆ.ವಂಟಿಗೋಡಿ ಹೇಳಿದರು.
Vijaya Karnataka Web
ಹುತಾತ್ಮ ಪೊಲೀಸರ ಸ್ಮರಣೆ ಎಲ್ಲರ ಕರ್ತವ್ಯ


ನಗರದ ನಜರ್‌ಬಾದ್‌ನಲ್ಲಿನ ಎಸ್ಪಿ ಕಚೇರಿ ಆವರಣದಲ್ಲಿರುವ ಹುತಾತ್ಮರ ಉದ್ಯಾನದಲ್ಲಿ ಭಾನುವಾರ ಬೆಳಗ್ಗೆ ನಡೆದ ಪೊಲೀಸ್‌ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೊಲೀಸರು 24 ಗಂಟೆಯೂ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಸಮಾಜದಲ್ಲಿನ ಜನರನ್ನು ರಕ್ಷಣೆ ಮಾಡುತ್ತಾರೆ. ಅದಕ್ಕಾಗಿ ಕೆಲವೊಮ್ಮೆ ತಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತಾರೆ. ಅಂತಹ ಮಹನೀಯರನ್ನು ಸ್ಮರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ನ್ಯಾಯಾಧೀಶರು ಉದ್ಯಾನದಲ್ಲಿನ ಸ್ಮಾರಕಕ್ಕೆ ಹೂಗುಚ್ಛಗಳನ್ನಿಟ್ಟು ಗೌರವ ಸಲ್ಲಿಸಿದರು. ನಂತರ ಪೊಲೀಸರು ವಾಲಿ ಫೈರಿಂಗ್‌ ನಡೆಸುವ ಮೂಲಕ ಅಗಲಿದ ಪೊಲೀಸರಿಗೆ ಗೌರವ ವಂದನೆ ಸಲ್ಲಿಸಿದರು.

ರಾಜ್ಯದ ಹುತಾತ್ಮ ಪೊಲೀಸ್‌ ಅಧಿಕಾರಿಗಳಾದ ಬಾಳೇಗೌಡ, ಶಿವಸ್ವಾಮಿ, ರಮೇಶ್ಪರನಾಯಕ, ಕೆ.ವಿ.ಸೋಮಶೇಖರ್‌, ಪರಸಪ್ಪ ಕಾಸಪ್ಪ ಗೌಹಾರಿ, ಯಶವಂತಕುರ್ಮಾ, ವಿ.ಅಪ್ಪಾಜಿ, ಎ.ಟಿ.ನಾಗರಾಜು, ಎಂ.ಹನುಮಂತ, ಎಸ್‌.ಮಹಾಲಿಂಗಯ್ಯ, ಸುಭಾಷ್‌ ಮಲ್ಲನಗೌಡ ಪಾಟೀಲ, ಎಸ್‌.ಎ.ರವಿಶಂಕರ್‌, ಸಿದ್ದಪ್ಪ, ಮಾನಸಾ, ಮೃದುಲಾ ಆಹಾರ್ಯ ಸೇರಿದಂತೆ ದೇಶಾದ್ಯಂತ ಕರ್ತವ್ಯದ ವೇಳೆ ಹುತಾತ್ಮರಾದ 414 ಮಂದಿ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಸರನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮಿತ್‌ ಸಿಂಗ್‌ ಸ್ಮರಿಸಿದರು.

ಮೈಸೂರು ನಗರ ಪೊಲೀಸ್‌ ಆಯುಕ್ತ ಡಾ.ಎ.ಸುಬ್ರಹಣ್ಯೇಶ್ವರರಾವ್‌, ಡಿಸಿಪಿಗಳಾದ ವಿಷ್ಣುವರ್ಧನ್‌, ಡಾ.ವಿಕ್ರಮ್‌ ಅಮಟೆ, ಕೆಎಸ್‌ಆರ್‌ಪಿ ಕಮಾಂಡೆಂಟ್‌ ಕೃಷ್ಣಪ್ಪ, ಕರ್ನಾಟಕ ಪೊಲೀಸ್‌ ಅಕಾಡೆಮಿ ನಿರ್ದೇಶಕ ವಿಫುಲ್‌ಕುಮಾರ್‌, ಉಪ ನಿರ್ದೇಶಕ ವಂಶಿಕೃಷ್ಣ, ಕೆಎಸ್‌ಆರ್‌ಪಿ 5ನೇ ಕಮಾಂಡೆಂಟ್‌ ಕೆ.ಎಸ್‌.ರಘುನಾಥ್‌, ರಾಜ್ಯ ಗುಪ್ತ ವಾರ್ತೆ ಅಧೀಕ್ಷ ಕಿ ಬಿ.ಟಿ.ಕವಿತಾ, ಸಹಾಯಕ ಪೊಲೀಸ್‌ ಆಯುಕ್ತ ಧರ್ಮಪ್ಪ, ಹೆಚ್ಚುವರಿ ಪೊಲೀಸ್‌ ಅಧೀಕ್ಷ ಕಿ ಪಿ.ವಿ.ಸ್ನೇಹಾ ಹಾಗೂ ಇನ್ನಿತರರು ಪುಷ್ಪಗುಚ್ಛಗಳನ್ನಿಟ್ಟು ಹುತಾತ್ಮರಿಗೆ ನಮನ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ