ಆ್ಯಪ್ನಗರ

ಆಷಾಢ ಶುಕ್ರವಾರ: ಚಾಮುಂಡೇಶ್ವರಿ ದೇಗುಲದಲ್ಲಿ 1.5 ಕೋಟಿ ರೂ ಸಂಗ್ರಹ

ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಿ ದೇಗುಲದಲ್ಲಿ ಈ ಬಾರಿಯ ಆಷಾಢ ಶುಕ್ರವಾರದಲ್ಲಿ ವಿಶೇಷ ದರ್ಶನ ಟಿಕೆಟ್‌ನಿಂದಲೇ ಒಟ್ಟು ಒಂದೂವರೆ ಕೋಟಿ ರೂ. ಸಂಗ್ರಹವಾಗಿದೆ. ಕಳೆದ ಬಾರಿಗೆ ಹೋಲಿಸಿದರೆ 50 ಲಕ್ಷ ರೂ. ಆದಾಯ ಹೆಚ್ಚಾಗಿದೆ.

Vijaya Karnataka 28 Jul 2019, 3:20 pm
ಮೈಸೂರು : ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಿ ದೇಗುಲದಲ್ಲಿ ಈ ಬಾರಿಯ ಆಷಾಢ ಶುಕ್ರವಾರದಲ್ಲಿ ವಿಶೇಷ ದರ್ಶನ ಟಿಕೆಟ್‌ನಿಂದಲೇ ಒಟ್ಟು ಒಂದೂವರೆ ಕೋಟಿ ರೂ. ಸಂಗ್ರಹವಾಗಿದೆ. ಕಳೆದ ಬಾರಿಗೆ ಹೋಲಿಸಿದರೆ 50 ಲಕ್ಷ ರೂ. ಆದಾಯ ಹೆಚ್ಚಾಗಿದೆ.
Vijaya Karnataka Web Mysuru Chamundeshwari Temple


ನಾಲ್ಕು ಆಷಾಢ ಶುಕ್ರವಾರದಂದು ನಿಗದಿಪಡಿಸಿದ ಪ್ರವೇಶ ದರ 50 ರೂ. ಮತ್ತು 300 ರೂ. ಹಾಗೂ ದೇವಿ ವರ್ಧಂತಿಯಿಂದ ಒಟ್ಟು 1,50,15,870 ರೂ. ಆದಾಯ ಸಂಗ್ರಹವಾಗಿದೆ. ಕಳೆದ ವರ್ಷ ನಾಲ್ಕು ಆಷಾಢ ಶುಕ್ರವಾರ ಹಾಗೂ ದೇವಿ ವರ್ಧಂತಿಯಿಂದ ಒಟ್ಟು 1,02,17,200 ರೂ. ಸಂಗ್ರಹ ಆಗಿತ್ತು. ಈ ವರ್ಷ 50 ರೂ. ಪ್ರವೇಶ ಟಿಕೆಟ್‌ ಮೂಲಕ 19,45,620 ರೂ. ಸಂಗ್ರಹವಾಗಿದ್ದರೆ, 300 ರೂ. ಪ್ರವೇಶ ಟಿಕೆಟ್‌ ಮೂಲಕ 1,30,70,250 ರೂ. ಸಂಗ್ರಹವಾಗಿದೆ.

ಮೊದಲ ಆಷಾಢದಂದು 50 ರೂ. ಪ್ರವೇಶದ ಮೂಲಕ 4,39,100 ರೂ., 300 ರೂ. ಪ್ರವೇಶದ ಮೂಲಕ 22,98,900 ರೂ., ಎರಡನೇ ಆಷಾಢ ಶುಕ್ರವಾರದಂದು 50 ರೂ. ಪ್ರವೇಶದ ಮೂಲಕ 4,91,870 ರೂ., 300 ರೂ. ಪ್ರವೇಶದ ಮೂಲಕ 31,05,000 ರೂ., 3ನೇ ಆಷಾಢ ಶುಕ್ರವಾರದಂದು 50 ರೂ. ಪ್ರವೇಶದ ಮೂಲಕ 4,60,630 ರೂ., 300 ರೂ. ಪ್ರವೇಶದ ಮೂಲಕ 33,74,800 ರೂ., 4ನೇ ಶುಕ್ರವಾರದಂದು 50 ರೂ. ಪ್ರವೇಶದ ಮೂಲಕ 4,78,960 ರೂ., 300 ರೂ. ಪ್ರವೇಶದ ಮೂಲಕ 33,15,500 ರೂ. ಸಂಗ್ರಹ ಆಗಿದೆ. ವರ್ಧಂತಿಯಂದು 50 ರೂ. ಪ್ರವೇಶದ ಮೂಲಕ 75,060 ಹಾಗೂ 300 ರೂ. ಪ್ರವೇಶದ ಮೂಲಕ 9,76,050 ರೂ. ಸಂಗ್ರಹವಾಗಿತ್ತು.

ಆಷಾಢ ಶುಕ್ರವಾರ ಮತ್ತು ವರ್ಧಂತಿ ಸಂದರ್ಭ 2015ರಲ್ಲಿ 29,67,550 ರೂ., 2016ರಲ್ಲಿ 38,73,300 ರೂ., 2017ರಲ್ಲಿ 1,03,83,030 ರೂ., 2018ರಲ್ಲಿ 1,02,17,200 ರೂ. ಆದಾಯ ಸಂಗ್ರಹ ಆಗಿತ್ತು ಎಂದು ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ