ಆ್ಯಪ್ನಗರ

ರವಿಸಿದ್ದೇಶ್ವರ, ಗವಿಸಿದ್ದೇಶ್ವರ ಜಾತ್ರೆ ಸಂಭ್ರಮ

ಸರಗೂರು: ತಾಲೂಕಿನ ಕಿತ್ತೂರು ಗ್ರಾಮದಲ್ಲಿರವಿಸಿದ್ದೇಶ್ವರ, ಗವಿಸಿದ್ದೇಶ್ವರ ದೇವರ ಮೂರನೇ ವರ್ಷದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು...

Vijaya Karnataka 7 Nov 2019, 5:00 am
ಸರಗೂರು: ತಾಲೂಕಿನ ಕಿತ್ತೂರು ಗ್ರಾಮದಲ್ಲಿರವಿಸಿದ್ದೇಶ್ವರ, ಗವಿಸಿದ್ದೇಶ್ವರ ದೇವರ ಮೂರನೇ ವರ್ಷದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
Vijaya Karnataka Web
ರವಿಸಿದ್ದೇಶ್ವರ, ಗವಿಸಿದ್ದೇಶ್ವರ ಜಾತ್ರೆ ಸಂಭ್ರಮ

ಜಾತ್ರೆ ಅಂಗವಾಗಿ ಕಬಿನಿ ಜಲಾಶಯದಿಂದ ಕಳಶ ಹೊತ್ತು ತಂದು ನಂತರ ಎರಡು ದೇವರ ವಿಗ್ರಹಗಳನ್ನು ದೇಗುಲದಲ್ಲಿಪ್ರತಿಷ್ಠಾಪಿಸಲಾಯಿತು. ಗ್ರಾಮಸ್ಥರು ದೇವರಿಗೆ ನಾನಾ ಅಭಿಷೇಕಗಳನ್ನು ನೆರವೇರಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ವಾದ್ಯಗೋಷ್ಠಿಗಳು ಮೊಳಗಿದವು. ನಾನಾ ಕಲಾತಂಡಗಳು ಕಲೆ ಪ್ರದರ್ಶಿಸಿದವು.
ದೇವರ ವಿಗ್ರಹವನ್ನು ಇದೇ ಮೊದಲ ಬಾರಿಗೆ ಜೋಡಿ ಲಿಂಗ, ಬಸವಗಳನ್ನು ಪ್ರತಿಷ್ಠಾಪಿಸಿದ ಹಿನ್ನೆಲೆಯಲ್ಲಿಸಹಸ್ರಾರು ಭಕ್ತರು ದೇವರ ದರ್ಶನ ಪಡೆದರು. ಅನ್ನ ಸಂತರ್ಪಣೆ ನಡೆಯಿತು. ಗವಿಸಿದ್ದೇಶ್ವರ ಗೆಳೆಯರ ಬಳಗದ ಅಧ್ಯಕ್ಷ ರಾಜನಾಯ್ಕ, ಉಪಾಧ್ಯಕ್ಷ ವೆಂಕಟರಾಜು, ಗೌರವಾಧ್ಯಕ್ಷ ಶಿವರಾಜನಾಯಕ, ಕಾರ್ಯದರ್ಶಿ ಎಸ್‌.ರವಿ, ಖಜಾಂಚಿ ಕಾಳಸ್ವಾಮಿ, ಯೂತ್‌ ಕಾಂಗ್ರೆಸ್‌ನ ಜಿಲ್ಲಾಪ್ರಧಾನ ಕಾರ್ಯದರ್ಶಿ ರವಿಕುಮಾರ್‌, ಚಿಕ್ಕನಾಯ್ಕ, ಮಹಾದೇವ, ಅಂಕಪ್ಪ, ನಿಂಗರಾಜು, ಪುಟ್ಟನಿಂಗ, ಸಣ್ಣಸ್ವಾಮಿನಾಯಕ, ಕಾಳಸ್ವಾಮಿ, ಸಿದ್ದು, ವೆಂಟಕರಾಜು, ಇಂದ್ರನಾಯ್ಕ, ತಿರುಪತಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಕಿತ್ತೂರು, ತೆಲುಗುಮಸಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ