ಆ್ಯಪ್ನಗರ

ಕ್ಯಾಲಿಫೋರ್ನಿಯಾದಲ್ಲಿ ಕಿಡಿಗೇಡಿಗಳ ಗುಂಡಿಗೆ ಬಲಿಯಾದ ಮೈಸೂರಿನ ಯುವಕ

ಅಮೆರಿಕದ ಹೋಟೆಲ್‌ ವೊಂದರಲ್ಲಿ ರಿಸೆಪ್ಷನಿಸ್ಟ್‌ ಆಗಿ ಕೆಲಸ ಮಾಡಿಕೊಂಡು ಎಂಎಸ್‌ ಅಧ್ಯಯನ ಮಾಡುತ್ತಿದ್ದ ಮೈಸೂರಿನ ಯುವಕ ಗುಂಡಿಗೆ ಬಲಿಯಾಗಿದ್ದಾರೆ. ಮೈಸೂರಿನ ಕುವೆಂಪುನಗರ ಮನುಜ ಪಥ ರಸ್ತೆ ನಿವಾಸಿ ಸುರೇಶ್‌ ಚಂದ್‌ ಪುತ್ರ ಅಭಿಷೇಕ್‌ (25) ಮೃತರು.

Vijaya Karnataka 30 Nov 2019, 12:30 pm
ಮೈಸೂರು : ಅಮೆರಿಕದ ಹೋಟೆಲ್‌ ವೊಂದರಲ್ಲಿ ರಿಸೆಪ್ಷನಿಸ್ಟ್‌ ಆಗಿ ಕೆಲಸ ಮಾಡಿಕೊಂಡು ಎಂಎಸ್‌ ಅಧ್ಯಯನ ಮಾಡುತ್ತಿದ್ದ ಮೈಸೂರಿನ ಯುವಕ ಗುಂಡಿಗೆ ಬಲಿಯಾಗಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೈಸೂರಿನ ಕುವೆಂಪುನಗರ ಮನುಜ ಪಥ ರಸ್ತೆ ನಿವಾಸಿ ಸುರೇಶ್‌ ಚಂದ್‌ ಪುತ್ರ ಅಭಿಷೇಕ್‌ (25) ಮೃತರು.
Vijaya Karnataka Web abhishek
ಅಭಿಷೇಕ್‌


ಅಭಿಷೇಕ್‌ ಮೈಸೂರಿನ ವಿದ್ಯಾ ವಿಕಾಸ್‌ ಕಾಲೇಜಿನಲ್ಲಿಕಂಪ್ಯೂಟರ್‌ ಸೈನ್ಸ್‌ ವಿಷಯದಲ್ಲಿಎಂಜಿನಿಯರಿಂಗ್‌ ಪೂರೈಸಿ, ಉನ್ನತ ಶಿಕ್ಷಣಕ್ಕಾಗಿ (ಕಂಪ್ಯೂಟರ್‌ ಸೈನ್ಸ್‌ ನಲ್ಲಿಎಂಎಸ್‌ ಮಾಡಲು) ಒಂದೂವರೆ ವರ್ಷದ ಹಿಂದೆಯೇ ಅಮೆರಿಕಗೆ ತೆರಳಿದ್ದರು. ಅಲ್ಲಿನ ಸ್ಯಾನ್‌ ಬರ್ನಾಡಿಯೋದಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯದಲ್ಲಿಎಂಎಸ್‌ ವ್ಯಾಸಂಗ ಮಾಡುತ್ತಿದ್ದರು. ಈತ ವ್ಯಾಸಂಗದ ಅವಧಿಯ ಬಿಡುವಿನ ವೇಳೆಯಲ್ಲಿಹೋಟೆಲ್‌ನಲ್ಲಿಕೆಲಸ ಮಾಡುತ್ತಿದ್ದು , ನ. 28ರಂದು ಮಧ್ಯರಾತ್ರಿ 11.30 ರಿಂದ 12.15ರ ಸಮಯದಲ್ಲಿತಾನು ಕೆಲಸ ಮಾಡುವ ಹೋಟೆಲ್‌ನ ಬಾಡಿಗೆಗೆ ನೀಡಿದ್ದ ಕೊಠಡಿಯ ಮುಂಭಾಗದಲ್ಲಿಗುಂಡೇಟಿಗೆ ಮೃತಪಟ್ಟಿದ್ದಾರೆ.

ಅಮೆರಿಕದ ಪೊಲೀಸರು ಪರಿಶೀಲನೆ ಮಾಡಿದ್ದು , ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ, ಗುಂಡೇಟು ಹೇಗಾಯಿತು ಎಂಬ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲಎಂದು ಕುಟುಂಬದ ಮೂಲಗಳು ತಿಳಿಸಿವೆ. ಘಟನೆಯಿಂದ ಆತಂಕಗೊಂಡ ಮೈಸೂರಿನಲ್ಲಿರುವ ಅಭಿಷೇಕ್‌ ಪೋಷಕರು ಹೆಚ್ಚಿನ ಮಾಹಿತಿಗಾಗಿ ಅಮೆರಿಕ ಮತ್ತು ಭಾರತದ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದ್ದಾರೆ. ಆದರೆ ಸಾವಿಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಅಭಿಷೇಕ್‌ ಅಂತ್ಯಕ್ರಿಯೆಯನ್ನು ಅಮೆರಿಕದಲ್ಲೇ ಮಾಡಲು ಅಭಿಷೇಕ್‌ ಪೋಷಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ