ಆ್ಯಪ್ನಗರ

ಪಿಯು ವಾಣಿಜ್ಯ ವಿಭಾಗದಲ್ಲಿ 2ನೇ ಸ್ಥಾನ: ಸಿಎ ಕನಸು ಹೊತ್ತಿರುವ ಗ್ರಾಮೀಣ ಪ್ರತಿಭೆ..!

ಮಗಳ ಸಾಧನೆಗೆ ಹೆತ್ತವರು ತುಂಬಾನೇ ಸಂತಸಗೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೇ 2ನೇ ಸ್ಥಾನ ಪಡೆದಿರುವ ಈಕೆ, ಮುಂದೆ ಚಾರ್ಟೆಡ್‌ ಅಕೌಂಟೆಂಟ್‌ ಆಗುವ ಕನಸು ಹೊತ್ತಿದ್ಧಾರೆ. ಅವರ ಸಾಧನೆಗೆ ಎಲ್ಲರೂ ಶುಭ ಕೋರುತ್ತಿದ್ದಾರೆ.

Vijaya Karnataka Web 15 Jul 2020, 12:17 am

ಹೈಲೈಟ್ಸ್‌:

  • 600ಕ್ಕೆ 596 ಅಂಕ ಗಳಿಸಿರುವ ಬೃಂದಾ
  • ರಾಜ್ಯಕ್ಕೇ ಫಸ್ಟ್‌ ಬರುತ್ತೇನೆ ಎಂದುಕೊಂಡಿದ್ದ ಬೃಂದಾ
  • ಮುಂದೆ ಸಿಎ ಮಾಡಬೇಕೆಂಬ ಬಯಕೆ ಹೊಂದಿರುವ ಬೃಂದಾ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web mys puc rank
ಪಿಯು ವಾಣಿಜ್ಯ ವಿಭಾಗದಲ್ಲಿ 2ನೇ ಸ್ಥಾನ: ಸಿಎ ಕನಸು ಹೊತ್ತಿರುವ ಗ್ರಾಮೀಣ ಪ್ರತಿಭೆ..!
ಮೈಸೂರು: ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಹೊರಬಿದ್ದಿದೆ. ಮೈಸೂರು ಜಿಲ್ಲೆಗೆ ಉತ್ತಮ ಫಲಿತಾಂಶ ಸಿಕ್ಕಿದೆ. ಅದರಲ್ಲೂ ಗ್ರಾಮಾಂತರ ಭಾಗದ ವಿದ್ಯಾರ್ಥಿನಿ ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲೇ ದ್ವಿತೀಯ ಸ್ಥಾನ ಪಡೆಯುವ ಮೂಲಕ ಕೀರ್ತಿ ತಂದಿದ್ದಾಳೆ.
ಚನ್ನಪಟ್ಟಣ ತಾಲೂಕಿನ ಕೊಡಂಬಹಳ್ಳಿ ಹೋಬಳಿಯ ಜಗದಾಪುರ ಗ್ರಾಮದ ವಿದ್ಯಾರ್ಥಿನಿ ಬೃಂದಾ ಜೆ ಎನ್ ಮೈಸೂರಿನ ಬಿಜಿಎಸ್ ಕಾಲೇಜು ವಿದ್ಯಾರ್ಥಿನಿಯಾಗಿದ್ದರು. 600ಕ್ಕೆ ಒಟ್ಟು 596 ಅಂಕಗಳನ್ನು ಅವರು ಗಳಿಸಿದ್ದಾರೆ.
ಕನ್ನಡ 100, ಇಂಗ್ಲಿಷ್ 96, ಅರ್ಥಶಾಸ್ತ್ರ 100, ಕಂಪ್ಯೂಟರ್ ಸೈನ್ಸ್ 100, ಬ್ಯುಸಿನೆಸ್ ಸ್ಟಡೀಸ್ 100, ಅಕೌಂಟ್ಸ್ 100 ಅಂಕಗಳನ್ನು ಪಡೆದಿದ್ದಾಳೆ. ದ್ವಿತೀಯ ಪಿಯು ಫೇಲ್ ಆದವರು ಪೂರಕ ಪರೀಕ್ಷೆ ದಿನಾಂಕ, ಶುಲ್ಕ, ಇತರೆ ಮಾಹಿತಿ ಇಲ್ಲಿ ತಿಳಿಯಿರಿ

ಈ ಬಗ್ಗೆ ವಿಜಯ ಕರ್ನಾಟಕ ವೆಬ್‌ನೊಂದಿಗೆ ಮಾತನಾಡಿದ ಬೃಂದಾ, ನಾನು ಸ್ಟೇಟ್ ಫಸ್ಟ್ ಟಾಪರ್ ಆಗಿ ಬರ್ತಿನಿ ಅಂದ್ಕೊಂಡಿದ್ದೆ. ರಾಜ್ಯಕ್ಕೆ ಸೆಕೆಂಡ್ ಟಾಪರ್ ಆಗಿದ್ದೀನಿ. ಆದರೂ ನನಗೆ ಸಂತೋಷವಾಗುತ್ತಿದೆ. ನನ್ನ ವಿದ್ಯಾಭ್ಯಾಸಕ್ಕೆ ಸಹಕಾರ ಕೊಟ್ಟ ತಂದೆ, ತಾಯಿ, ಶಿಕ್ಷಕ ವೃಂದಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ನಾನು ಸರ್ಕಾರಿ ಶಾಲೆಯಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದೆ. ಬಳಿಕ ನವೋದಯ ಶಾಲೆಯಲ್ಲಿ ಅಭ್ಯಾಸ ಮಾಡಿದೆ ಎಂದು ಬಾಲ್ಯದ ದಿನವನ್ನು ಮೆಲುಕು ಹಾಕಿದರು ಬೃಂದಾ.

ಕರ್ನಾಟಕ ದ್ವಿತೀಯ ಪಿಯು ಜಿಲ್ಲಾವಾರು ಫಲಿತಾಂಶ ರ‍್ಯಾಂಕ್ ಲಿಸ್ಟ್‌ ರಿಲೀಸ್‌

ಬಿಜಿಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಅಭ್ಯಾಸ ಮಾಡಿದ್ದು, ಮುಂದೆ ಸಿಎ ಮಾಡಬೇಕು ಎಂಬ ಆಸೆ ಇದೆ. ಸತತ ಪರಿಶ್ರಮವೇ ನನ್ನ ಇಂದಿನ ಈ ಫಲಿತಾಂಶಕ್ಕೆ ಕಾರಣ ಎಂದರು.

ಇನ್ನು ಮಗಳ ಸಾಧನೆಯ ಬಗ್ಗೆ ಮೆಚ್ಚುಗೆ ಪಡಿಸಿದ ಬೃಂದಾ ತಂದೆ ನಾಗೇಶ್, ಮೊದಲಿನಿಂದಲೂ ನನ್ನ ಮಗಳು ಚನ್ನಾಗಿ ಓದುತಿದ್ದಳು. ಸದ್ಯ ರಾಜ್ಯದಲ್ಲಿ ಎರಡನೇ ಸ್ಥಾನ ಬಂದಿರೋದಕ್ಕೆ ಖುಷಿ ಆಗುತ್ತಿದೆ. ನಮ್ಮ ಮಗಳಿಗೆ ಹೊರಗಡೆಯೇ ಇದ್ದು ವಿದ್ಯಾಭ್ಯಾಸ ಮಾಡೋದು ಇಷ್ಟ. ನಾವು ಅವಳ ವಿದ್ಯಾಭ್ಯಾಸಕ್ಕೆ ಸಂಪೂರ್ಣ ಸಹಕಾರ ಕೊಡುತ್ತೇವೆ. ಮುಂದೆ ಏನು ಓದಲು ಇಷ್ಟ ಪಡುತ್ತಾಳೋ ಅದನ್ನು ಓದಿಸುತ್ತೇವೆ ಎಂದು ಸಂತಸಪಟ್ಟರು.

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಚೆಕ್‌ ಮಾಡಲು ಲಿಂಕ್‌ ಇಲ್ಲಿದೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ