ಆ್ಯಪ್ನಗರ

ದಿಬ್ಬಣದ ಬಸ್‌ ಅಪಘಾತ: 3 ಸಾವು

ನಿಂತಿದ್ದ ಲಾರಿಗೆ ದಿಬ್ಬಣದ ಬಸ್‌ ಡಿಕ್ಕಿಯಾಗಿ 9 ವರ್ಷದ ಬಾಲಕ ಸೇರಿ ಮೂವರು ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ.

Vijaya Karnataka 21 Aug 2019, 5:00 am
ತಿ.ನರಸೀಪುರ: ನಿಂತಿದ್ದ ಲಾರಿಗೆ ದಿಬ್ಬಣದ ಬಸ್‌ ಡಿಕ್ಕಿಯಾಗಿ 9 ವರ್ಷದ ಬಾಲಕ ಸೇರಿ ಮೂವರು ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ.
Vijaya Karnataka Web 3 killed in bus accident
ದಿಬ್ಬಣದ ಬಸ್‌ ಅಪಘಾತ: 3 ಸಾವು


ತಿ.ನರಸೀಪುರ -ಮೈಸೂರು ರಸ್ತೆಯ ಎಡದೊರೆ -ಇಂಡುವಾಳು ಮಧ್ಯೆ ಇರುವ ಟೋಲ್‌ಗೇಟ್‌ ಸಮೀಪ ಮಂಗಳವಾರ ರಾತ್ರಿ ಈ ಅಪಘಾತ ಸಂಭವಿಸಿದೆ.

ಬಸ್‌ನಲ್ಲಿದ್ದ ಮೈಸೂರು ತಾಲೂಕು ಚೋರನಹಳ್ಳಿ ಗ್ರಾಮದ ರಾಜೇಶ್‌ (30), ಪ್ರಜ್ವಲ್‌ (22), ಬಾಲಕ ವಿನಯ್‌ (9) ಮೃತರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಿ.ನರಸೀಪುರದ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಮದುವೆ ಸಮಾರಂಭ ಮುಗಿಸಿಕೊಂಡು ಸ್ವಗ್ರಾಮಕ್ಕೆ ವಾಪಸಾಗುತ್ತಿದ್ದಾಗ ತಾಲೂಕಿನ ಎಡದೊರೆ ಸಮೀಪದ ಟೋಲ್‌ಗೇಟ್‌ ಬಳಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಲಾರಿಯ ಹಿಂಭಾಗಕ್ಕೆ ಡಿಕ್ಕಿಹೊಡೆದು ಅಪಘಡ ಸಂಭವಿಸಿದೆ. ಪೊಲೀಸ್‌ ಇನ್ಸ್‌ಪೆಕ್ಟರ್‌ ಎಂ.ಪಿ.ಲವ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು. ತಿ.ನರಸೀಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ