ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಹಾಡಿಯೊಂದರ ಮನೆ ಹಿತ್ತಲಿನಲ್ಲಿ ಬೆಳೆದಿದ್ದ 6.5 ಕೆಜಿ ಗಾಂಜಾ ಗಿಡವನ್ನು ಅಬಕಾರಿ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಹನಗೋಡು ಹೋಬಳಿಯ ದೊಡ್ಡ ಹೆಜ್ಜೂರು ಗ್ರಾ.ಪಂ. ವ್ಯಾಪ್ತಿಯ ಕಪ್ಪನಕಟ್ಟೆ ಗಿರಿಜನ ಹಾಡಿಯ ಗಪ್ಪು ಎಂಬಾತ ತನ್ನ ಜಮೀನಿನಲ್ಲಿ ಬೆಳೆದಿದ್ದ ಗಾಂಜಾಗಿಡವನ್ನು ವಶಕ್ಕೆ ಪಡೆದಿದ್ದು, ಆರೋಪಿ ಪರಾರಿಯಾಗಿದ್ದಾನೆ.
ಖಚಿತ ಮಾಹಿತಿ ಮೇರೆಗೆ ಹುಣಸೂರು ಉಪ ವಿಭಾಗದ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಗಾಂಜಾಗಿಡವನ್ನು ವಶಕ್ಕೆ ಪಡೆದಿದ್ದು, ಪರಾರಿಯಾಗಿರುವ ಗಪ್ಪು ವಿರುದ್ಧ ಪ್ರಕರಣ ದಾಖಲಿಸಿಧಿದ್ದಾಧಿರೆ. ಆರೋಪಿ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ಅಬಕಾರಿ ಡಿವೈ.ಎಸ್.ಪಿ.ಶ್ರೀನಿವಾಸ್ ತಿಳಿಸಿದ್ದಾರೆ.
ಕಾರ್ಯಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ನಟರಾಜ್, ಧರ್ಮರಾಜ್, ಅಬಕಾರಿ ರಕ್ಷಕರಾದ ಅಜಯ್, ಕುಮಾರ್, ಶಮೀಲ್ಅಹಮದ್, ಶ್ರೀಧರ್ ಇತರರು ಭಾಗವಹಿಸಿದ್ದರು.
ವೀರಪ್ಪನ್ ಅಬ್ಬರಿಸಿದ್ದ ಕಾಡಿನಲ್ಲಿ ಅರಣ್ಯ ಅಪರಾಧ ಹೆಚ್ಚಳ..! ಕೊರೊನಾ ಎಫೆಕ್ಟ್..?
ಅತ್ಯಾಚಾರಿಗೆ 20 ವರ್ಷ ಜೈಲು:
ಹುಣಸೂರು: ಸಂಬಂಧಿಕರ ಮನೆಯಲ್ಲಿ ಟಿ.ವಿ. ನೋಡುತ್ತಿದ್ದ ಬಾಲಕಿಯನ್ನು ಮನೆಗೆ ಬಿಡುವ ನೆಪದಲ್ಲಿ ಕರೆದೊಯ್ದು ಅತ್ಯಾಚಾರ ನಡೆಸಿದ್ದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಎಸ್.ಸಿ ಎಸ್.ಟಿ-1 ಅಧಿಕ ಜಿಲ್ಲಾಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಕೊಡಗಿನಲ್ಲೂ ಮಾದಕ ಜಾಲ: ಜಿಲ್ಲೆಯಲ್ಲಿ ನಡೆದಿದ್ದ ರೇವ್ ಮತ್ತಿತರ ಪಾರ್ಟಿಗಳಿಗೆ ಡ್ರಗ್ಸ್ ಲಿಂಕ್?!
ಹುಣಸೂರು ಉಪ ವಿಭಾಗದ ಎಚ್.ಡಿ.ಕೋಟೆ ತಾಲೂಕಿನ ಚಂದ್ರು ಶಿಕ್ಷೆಗೊಳಗಾದವನು. 2018 ಜೂ.14ರಂದು ರಾತ್ರಿ 8.30ರ ವೇಳೆಯಲ್ಲಿ ತನ್ನ ಪರಿಚಯಸ್ಥರ ಮನೆಯಲ್ಲಿ ಟಿ.ವಿ.ವೀಕ್ಷಿಸುತ್ತಿದ್ದ ಬಾಲಕಿ ಯನ್ನು ಮನೆಗೆ ಬಿಡುವುದಾಗಿ ನಂಬಿಸಿ, ಆಕೆಯ ಮನೆ ಹಿಂಭಾಗಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಈ ಸಂಬಂಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು. ಅಂದಿನ ಡಿ.ವೈಎಸ್.ಪಿ. ಯು.ಭಾಸ್ಕರ ರೈ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ್ದ ವೃತ್ತ ನಿರೀಕ್ಷಕ ಹರೀಶ್ಕುಮಾರ್ ಆರೋಪಿ ವಿರುದ್ಧ ನ್ಯಾಯಾ ಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.
ಡಮಕ್ಕಳನ್ನು ಕಿತ್ತು ತಿನ್ನುತ್ತಿದೆ ಮಾದಕ ವ್ಯಸನ: ಬಾಲಮಂದಿರದ ಅನಾಥ ಮಕ್ಕಳಿಗೂ ಡ್ರಗ್ ಚಟ!
ಸುದೀರ್ಘ ವಿಚಾರಣೆ ನಡೆಸಿದ ಎಫ್ .ಟಿ, ಎಸ್.ಸಿ-1 ಅಧಿಕ ಜಿಲ್ಲಾಮತ್ತು ಸತ್ರ ನ್ಯಾಯಾ ಲಯದ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀಯವರು ಸಾಕ್ಷ್ಯಾಧಾರದ ಮೇಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಚಂದ್ರುಗೆ 20 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ದಂಡ, ತಪ್ಪಿದ್ದಲ್ಲಿಮತ್ತೆ 6 ತಿಂಗಳು ಸೆರೆವಾಸ ವಿಧಿಸಿ ತೀರ್ಪು ನೀಡಿದ್ದಾರೆ. ನೊಂದ ಬಾಲಕಿಗೆ ಪರಿಹಾರವಾಗಿ 7 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಸರಕಾರಿ ವಕೀಲರಾದ ಬಿ.ಎಸ್.ಮಂಜುಳ ತಿಳಿಸಿದ್ದಾರೆ. ಸರಕಾರದ ಪರ ವಕೀಲರಾದ ಶಿವರುದ್ರ ಸ್ವಾಮಿ ಹಾಗೂ ಬಿ.ಎಸ್.ಮಂಜುಳ ವಾದ ಮಂಡಿಸಿದ್ದರು.
ಖಚಿತ ಮಾಹಿತಿ ಮೇರೆಗೆ ಹುಣಸೂರು ಉಪ ವಿಭಾಗದ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಗಾಂಜಾಗಿಡವನ್ನು ವಶಕ್ಕೆ ಪಡೆದಿದ್ದು, ಪರಾರಿಯಾಗಿರುವ ಗಪ್ಪು ವಿರುದ್ಧ ಪ್ರಕರಣ ದಾಖಲಿಸಿಧಿದ್ದಾಧಿರೆ. ಆರೋಪಿ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ಅಬಕಾರಿ ಡಿವೈ.ಎಸ್.ಪಿ.ಶ್ರೀನಿವಾಸ್ ತಿಳಿಸಿದ್ದಾರೆ.
ಕಾರ್ಯಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ನಟರಾಜ್, ಧರ್ಮರಾಜ್, ಅಬಕಾರಿ ರಕ್ಷಕರಾದ ಅಜಯ್, ಕುಮಾರ್, ಶಮೀಲ್ಅಹಮದ್, ಶ್ರೀಧರ್ ಇತರರು ಭಾಗವಹಿಸಿದ್ದರು.
ವೀರಪ್ಪನ್ ಅಬ್ಬರಿಸಿದ್ದ ಕಾಡಿನಲ್ಲಿ ಅರಣ್ಯ ಅಪರಾಧ ಹೆಚ್ಚಳ..! ಕೊರೊನಾ ಎಫೆಕ್ಟ್..?
ಅತ್ಯಾಚಾರಿಗೆ 20 ವರ್ಷ ಜೈಲು:
ಹುಣಸೂರು: ಸಂಬಂಧಿಕರ ಮನೆಯಲ್ಲಿ ಟಿ.ವಿ. ನೋಡುತ್ತಿದ್ದ ಬಾಲಕಿಯನ್ನು ಮನೆಗೆ ಬಿಡುವ ನೆಪದಲ್ಲಿ ಕರೆದೊಯ್ದು ಅತ್ಯಾಚಾರ ನಡೆಸಿದ್ದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಎಸ್.ಸಿ ಎಸ್.ಟಿ-1 ಅಧಿಕ ಜಿಲ್ಲಾಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಕೊಡಗಿನಲ್ಲೂ ಮಾದಕ ಜಾಲ: ಜಿಲ್ಲೆಯಲ್ಲಿ ನಡೆದಿದ್ದ ರೇವ್ ಮತ್ತಿತರ ಪಾರ್ಟಿಗಳಿಗೆ ಡ್ರಗ್ಸ್ ಲಿಂಕ್?!
ಹುಣಸೂರು ಉಪ ವಿಭಾಗದ ಎಚ್.ಡಿ.ಕೋಟೆ ತಾಲೂಕಿನ ಚಂದ್ರು ಶಿಕ್ಷೆಗೊಳಗಾದವನು. 2018 ಜೂ.14ರಂದು ರಾತ್ರಿ 8.30ರ ವೇಳೆಯಲ್ಲಿ ತನ್ನ ಪರಿಚಯಸ್ಥರ ಮನೆಯಲ್ಲಿ ಟಿ.ವಿ.ವೀಕ್ಷಿಸುತ್ತಿದ್ದ ಬಾಲಕಿ ಯನ್ನು ಮನೆಗೆ ಬಿಡುವುದಾಗಿ ನಂಬಿಸಿ, ಆಕೆಯ ಮನೆ ಹಿಂಭಾಗಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಈ ಸಂಬಂಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು. ಅಂದಿನ ಡಿ.ವೈಎಸ್.ಪಿ. ಯು.ಭಾಸ್ಕರ ರೈ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ್ದ ವೃತ್ತ ನಿರೀಕ್ಷಕ ಹರೀಶ್ಕುಮಾರ್ ಆರೋಪಿ ವಿರುದ್ಧ ನ್ಯಾಯಾ ಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.
ಡಮಕ್ಕಳನ್ನು ಕಿತ್ತು ತಿನ್ನುತ್ತಿದೆ ಮಾದಕ ವ್ಯಸನ: ಬಾಲಮಂದಿರದ ಅನಾಥ ಮಕ್ಕಳಿಗೂ ಡ್ರಗ್ ಚಟ!
ಸುದೀರ್ಘ ವಿಚಾರಣೆ ನಡೆಸಿದ ಎಫ್ .ಟಿ, ಎಸ್.ಸಿ-1 ಅಧಿಕ ಜಿಲ್ಲಾಮತ್ತು ಸತ್ರ ನ್ಯಾಯಾ ಲಯದ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀಯವರು ಸಾಕ್ಷ್ಯಾಧಾರದ ಮೇಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಚಂದ್ರುಗೆ 20 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ದಂಡ, ತಪ್ಪಿದ್ದಲ್ಲಿಮತ್ತೆ 6 ತಿಂಗಳು ಸೆರೆವಾಸ ವಿಧಿಸಿ ತೀರ್ಪು ನೀಡಿದ್ದಾರೆ. ನೊಂದ ಬಾಲಕಿಗೆ ಪರಿಹಾರವಾಗಿ 7 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಸರಕಾರಿ ವಕೀಲರಾದ ಬಿ.ಎಸ್.ಮಂಜುಳ ತಿಳಿಸಿದ್ದಾರೆ. ಸರಕಾರದ ಪರ ವಕೀಲರಾದ ಶಿವರುದ್ರ ಸ್ವಾಮಿ ಹಾಗೂ ಬಿ.ಎಸ್.ಮಂಜುಳ ವಾದ ಮಂಡಿಸಿದ್ದರು.