ರವಿ ಡಿ.ಗಾಯನಹಳ್ಳಿ ಮೈಸೂರು
ದಸರಾ ಹಿನ್ನೆಲೆಯಲ್ಲಿ ಅರಮನೆ ಆವರಣ ಸೇರಿದಂತೆ ಜಂಬೂಸವಾರಿ ಸಾಗಿದ ಮಾರ್ಗದುದ್ದಕ್ಕೂ ಹರಡಿದ್ದ ರಾಶಿ, ರಾಶಿ ತ್ಯಾಜ್ಯವನ್ನು ಪೌರಕಾರ್ಮಿಕರು ತೆರವುಗೊಳಿಸಿ ಸುಮಾರು 7 ಟನ್ಗೂ ಅಧಿಕ ಕಸವನ್ನು ವಿಲೇವಾರಿ ಮಾಡಿದರು.
ನಾಡಹಬ್ಬ ದಸರಾದ ಕೇಂದ್ರಬಿಂದು ಜಂಬೂಸವಾರಿ ಮೆರವಣಿಗೆಯು ಅರಮನೆ ಆವರಣದಿಂದ ಮುಂದೆ ಸಾಗುತ್ತಿದ್ದಂತೆ ಜನಜಂಗುಳಿ ಅದರ ಹಿಂದೆಯೇ ಸಾಗರೋಪಾದಿಯಲ್ಲಿ ತೆರಳಿತು. ಹೀಗೆ ದಟ್ಟಣೆ ಕಡಿಮೆಯಾಗುತ್ತಿದ್ದಂತೆ ಮಂಗಳವಾರ ರಾತ್ರಿ 10ರಿಂದಲೇ ಸ್ವಚ್ಛತಾ ಕಾರ್ಯಕ್ಕೆ ಇಳಿದ 350ಕ್ಕೂ ಹೆಚ್ಚು ಪೌರಕಾರ್ಮಿಕರು ಬುಧವಾರ ಬೆಳಗಿನ ಜಾವ 4.30ರವರೆಗೂ ಕರ್ತವ್ಯ ನಿರ್ವಹಿಸಿ ಶುಚಿಗೊಳಿಸಿದರು.
ನಾಡಹಬ್ಬ ಪ್ರಯುಕ್ತ ನಗರದ ಹಲವೆಡೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ, ಆಹಾರ ಮೇಳ, ಕ್ರೀಡೆ, ಫಲಪುಷ್ಪ ಪ್ರದರ್ಶನದಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಪಾಲಿಕೆಯು ಸೂಕ್ತ ಯೋಜನೆ ಸಿದ್ಧಪಡಿಸಿ ಅದರಂತೆ ನಡೆದು ಯಶಸ್ವಿಯಾಗಿದೆ. ದಸರಾ ಆರಂಭದಿಂದಲೇ 3 ಪಾಳಿಯಲ್ಲಿ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದರು.
ಮೂರು ಪಾಳಿಯಲ್ಲಿಕಾರ್ಯ ನಿರ್ವಹಣೆ: ಬೆಳಗ್ಗೆಯಿಂದ ಸಂಜೆ, ಸಂಜೆಯಿಂದ ಮಧ್ಯರಾತ್ರಿ, ಮಧ್ಯರಾತ್ರಿಯಿಂದ ಬೆಳಗಿನವರೆಗೆ ಹೀಗೆ ಮೂರು ಪಾಳಿಯಲ್ಲಿ ಪೌರಕಾರ್ಮಿಕರು ಸತತ 10 ದಿನ ಶ್ರಮಿಸಿದ ಪರಿಣಾಮ ಆಹಾರ ಮೇಳ, ಯುವಸಂಭ್ರಮ, ಯುವದಸರಾ ಸೇರಿದಂತೆ ಯಾವುದೇ ವೇದಿಕೆಗಳಲ್ಲೂ ಸ್ವಚ್ಛತೆಗೆ ಸಂಬಂಧಿಸಿದಂತೆ ದೂರು ಕೇಳಿಬರಲಿಲ್ಲ. ಪ್ರವಾಸಿಗರಿಗೆ ಕಿರಿಕಿರಿಯಾಗದಂತೆ ಅರಮನೆ ಆವರಣ ಒಳಗೊಂಡಂತೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಬನ್ನಿಮಂಟಪದವರೆಗೂ ಹರಡಿದ ಪ್ಲಾಸ್ಟಿಕ್ ತ್ಯಾಜ್ಯಗಳು, ಸೌತೆಕಾಯಿ ಸೇರಿದಂತೆ ಹಣ್ಣಿನ ಹಸಿ ಕಸವನ್ನು ಸ್ವಚ್ಛಗೊಳಿಸಿದ್ದಾರೆ ಎಂದು ನಗರಪಾಲಿಕೆ ಆರೋಗ್ಯಾಧಿಕಾರಿ ನಾಗರಾಜ್ ತಿಳಿಸಿದರು.
ಆಹಾರ ಮೇಳದಲ್ಲಿದಿನಕ್ಕೆ 4 ಟನ್ ತ್ಯಾಜ್ಯ: ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ನಡೆದ ಆಹಾರ ಮೇಳದಲ್ಲಿ ನಿತ್ಯ 4 ಟನ್ನಷ್ಟು ತ್ಯಾಜ್ಯ ಸಂಗ್ರಹಿಸಲಾಗುತ್ತಿತ್ತು. ಅದನ್ನು ಒಣ, ಹಸಿ ಎಂದು ಪ್ರತ್ಯೇಕಿಸಿ ತೆಗೆದುಕೊಂಡು ಹೋಗಲಾಗುತ್ತಿತ್ತು. ಒಟ್ಟಾರೆ 40ಕ್ಕೂ ಹೆಚ್ಚು ಟನ್ ತ್ಯಾಜ್ಯ ಆಹಾರ ಮೇಳದಲ್ಲಿಯೇ ಸಂಗ್ರಹಗೊಂಡಿದೆ. ಫಲಪುಷ್ಪ ಪ್ರದರ್ಶನದಲ್ಲಿ ನಿತ್ಯ 4 ಆಟೋಗಳಷ್ಟು ತ್ಯಾಜ್ಯ ಸಂಗ್ರಹಣೆಯಾಗುತ್ತಿದೆ.
100, 200 ಮೀಟರ್ಗೆ ಡಸ್ಟ್ಬಿನ್: ದಸರಾ ಮಹೋತ್ಸವಕ್ಕೆ ಜನಸಾಗರ ಹರಿದು ಬರುವುದರಿಂದ ತ್ಯಾಜ್ಯ ಹೆಚ್ಚು ಉತ್ಪಾದನೆಯಾಗುವಂತಹ ಸ್ಥಳಗಳಲ್ಲಿ 100, 200 ಮೀಟರ್ಗೆ ಒಂದೊಂದು ತ್ಯಾಜ್ಯ ಸಂಗ್ರಹ ಬಾಕ್ಸ್ಗಳನ್ನು ಇಡಲಾಗಿತ್ತು. ಅದರ ಮೇಲುಗಡೆ ಒಣ, ಹಸಿ ಕಸ ಹಾಕುವಂತೆ ಸ್ಟಿಕರ್ಗಳನ್ನು ಅಂಟಿಸಲಾಗಿತ್ತು. ಅಲ್ಲದೇ, ತ್ಯಾಜ್ಯ ಸಂಗ್ರಹ ವೀಡಿಯೋ ತುಣುಕುಗಳನ್ನು ಪಾಲಿಕೆಯ ವಾಹನದಲ್ಲಿ ಪರದೆ ಅಳವಡಿಸಿ ಕಿರುಚಿತ್ರವನ್ನು ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗಿತ್ತು.
ಆರಮನೆ ಆವರಣ, ಪಂಜಿನ ಕವಾಯತು ಮೈದಾನದಲ್ಲಿ ತಲಾ ಒಂದು ಟನ್ ತ್ಯಾಜ್ಯ
ಜಂಬೂಸವಾರಿ ಕಣ್ತುಂಬಿಕೊಳ್ಳಲು ಅರಮನೆ ಆವರಣದೊಳಗೆ ಜಮಾವಣೆಗೊಂಡಿದ್ದ ಸಾವಿರಾರು ಮಂದಿ ಕುಡಿದು ಬಿಸಾಕಿದ ನೀರಿನ ಪ್ಲಾಸ್ಟಿಕ್ ಬಾಟಲಿಗಳು, ತಿಂಡಿ, ತಿನಿಸುಗಳ ಪ್ಲಾಸ್ಟಿಕ್ ಕವರ್ಗಳು, ಐಸ್ಕ್ರೀಂ, ಬಿಸ್ಕೆಟ್ ಪ್ಯಾಕೆಟ್ಗಳು ಸೇರಿದಂತೆ ಒಟ್ಟಾರೆ ಒಂದು ಟನ್ಗೂ ಹೆಚ್ಚು ತ್ಯಾಜ್ಯ ಹಾಗೂ ಪಂಜಿನ ಕವಾಯತು ಮೈದಾನದಲ್ಲೂಒಂದು ಟನ್ಗೂ ಹೆಚ್ಚು ತ್ಯಾಜ್ಯವನ್ನು ಸಂಗ್ರಹ ಮಾಡಲಾಗಿದೆ. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಬನ್ನಿಮಂಟಪದವರೆಗೆ 5 ಟನ್ ತ್ಯಾಜ್ಯ ಸಂಗ್ರಹಿಸಲಾಗಿದೆ.
ಫುಟ್ಪಾತ್ಗಳಿಂದ ಪೆಂಡಾಲ್ ತೆರವು: ಅರಮನೆ ಆವರಣ ಸೇರಿದಂತೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಬನ್ನಿಮಂಟಪದವರೆಗೆ ಹಲವು ಇಲಾಖೆಗಳು ಹಾಗೂ ಸಂಘ, ಸಂಸ್ಥೆಗಳು ಜಂಬೂಸವಾರಿ ವೀಕ್ಷಣೆಗಾಗಿ ನಿರ್ಮಿಸಿದ್ದ ಪೆಂಡಾಲ್ಗಳನ್ನು ಬುಧವಾರ ಮುಂಜಾನೆಯಿಂದಲೇ ತೆರವುಗೊಳಿಸುವ ಕಾರ್ಯ ನಡೆಯಿತು. ಅರಮನೆ ಆವರಣದಲ್ಲಿ ಸುಮಾರು 200ಕ್ಕೂ ಹೆಚ್ಚು ಮಂದಿ ಪೆಂಡಾಲ್ ಮತ್ತು ಪ್ಲಾಸ್ಟಿಕ್ ಕುರ್ಚಿಗಳನ್ನು ತೆರವುಗೊಳಿಸಿ ಲಾರಿ, ಟೆಂಪೊ ವಾಹನಗಳಲ್ಲಿ ಸಾಗಿಸಿದರು. ಹಾಗೆಯೇ, ಖಾಸಗಿ ಸಂಘ, ಸಂಸ್ಥೆಯವರು ಆಟೋಗಳ ಮೂಲಕ ಪೆಂಡಾಲ್ ಸಾಮಗ್ರಿಗಳನ್ನು ಸಾಗಿಸಿದರು. ಮೆರವಣಿಗೆ ಮಾರ್ಗದುದ್ದಕ್ಕೂ ರಸ್ತೆಯ ಎರಡೂ ಬದಿಯಲ್ಲಿ ಬಂದೋಬಸ್್ತಗಾಗಿ ಅಳವಡಿಸಿದ್ದ ಮರದ ತಡೆಗಳನ್ನೂ (ಬ್ಯಾರಿಕೇಡ್)ಬಿಚ್ಚಿ ಸಾಗಿಸಲಾಯಿತು. ಬನ್ನಿಮಂಟಪದಲ್ಲಿ ಪಂಜಿನ ಕವಾಯತು ವೀಕ್ಷಣೆಗಾಗಿ ನಿರ್ಮಿಸಿದ್ದ ವೇದಿಕೆ ಹಾಗೂ ಕುರ್ಚಿಗಳನ್ನು ತೆರವುಗೊಳಿಸಲಾಯಿತು.
ಅರಮನೆಯ 32 ಹಾಗೂ ಪಾಲಿಕೆ 20 ಮಂದಿ ಅರಮನೆ ಆವರಣದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಪೂರ್ಣವಾಗಿ ಪೆಂಡಾಲ್ಅನ್ನು ತೆರವುಗೊಳಿಸಿದ ನಂತರ ಸ್ವಚ್ಛತೆ ಕೆಲಸ ಮತ್ತಷ್ಟು ಬಿರುಸುಗೊಳ್ಳಲಿದೆ. ಪಾಲಿಕೆ ಸಿಬ್ಬಂದಿ ಬುಧವಾರ ಮಾತ್ರ ಸ್ವಚ್ಛತೆ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಅರಮನೆ ಸಿಬ್ಬಂದಿ ಕಾರ್ಯ ನಿರ್ವಹಿಸುವರು.
-ಜೆ.ಆಶಾ, ಅರಮನೆ ಮಂಡಳಿ ಅಧೀಕ್ಷಕಿ
ದಸರಾ ಹಿನ್ನೆಲೆಯಲ್ಲಿ ಅರಮನೆ ಆವರಣ ಸೇರಿದಂತೆ ಜಂಬೂಸವಾರಿ ಸಾಗಿದ ಮಾರ್ಗದುದ್ದಕ್ಕೂ ಹರಡಿದ್ದ ರಾಶಿ, ರಾಶಿ ತ್ಯಾಜ್ಯವನ್ನು ಪೌರಕಾರ್ಮಿಕರು ತೆರವುಗೊಳಿಸಿ ಸುಮಾರು 7 ಟನ್ಗೂ ಅಧಿಕ ಕಸವನ್ನು ವಿಲೇವಾರಿ ಮಾಡಿದರು.
ನಾಡಹಬ್ಬ ದಸರಾದ ಕೇಂದ್ರಬಿಂದು ಜಂಬೂಸವಾರಿ ಮೆರವಣಿಗೆಯು ಅರಮನೆ ಆವರಣದಿಂದ ಮುಂದೆ ಸಾಗುತ್ತಿದ್ದಂತೆ ಜನಜಂಗುಳಿ ಅದರ ಹಿಂದೆಯೇ ಸಾಗರೋಪಾದಿಯಲ್ಲಿ ತೆರಳಿತು. ಹೀಗೆ ದಟ್ಟಣೆ ಕಡಿಮೆಯಾಗುತ್ತಿದ್ದಂತೆ ಮಂಗಳವಾರ ರಾತ್ರಿ 10ರಿಂದಲೇ ಸ್ವಚ್ಛತಾ ಕಾರ್ಯಕ್ಕೆ ಇಳಿದ 350ಕ್ಕೂ ಹೆಚ್ಚು ಪೌರಕಾರ್ಮಿಕರು ಬುಧವಾರ ಬೆಳಗಿನ ಜಾವ 4.30ರವರೆಗೂ ಕರ್ತವ್ಯ ನಿರ್ವಹಿಸಿ ಶುಚಿಗೊಳಿಸಿದರು.
ನಾಡಹಬ್ಬ ಪ್ರಯುಕ್ತ ನಗರದ ಹಲವೆಡೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ, ಆಹಾರ ಮೇಳ, ಕ್ರೀಡೆ, ಫಲಪುಷ್ಪ ಪ್ರದರ್ಶನದಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಪಾಲಿಕೆಯು ಸೂಕ್ತ ಯೋಜನೆ ಸಿದ್ಧಪಡಿಸಿ ಅದರಂತೆ ನಡೆದು ಯಶಸ್ವಿಯಾಗಿದೆ. ದಸರಾ ಆರಂಭದಿಂದಲೇ 3 ಪಾಳಿಯಲ್ಲಿ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದರು.
ಮೂರು ಪಾಳಿಯಲ್ಲಿಕಾರ್ಯ ನಿರ್ವಹಣೆ: ಬೆಳಗ್ಗೆಯಿಂದ ಸಂಜೆ, ಸಂಜೆಯಿಂದ ಮಧ್ಯರಾತ್ರಿ, ಮಧ್ಯರಾತ್ರಿಯಿಂದ ಬೆಳಗಿನವರೆಗೆ ಹೀಗೆ ಮೂರು ಪಾಳಿಯಲ್ಲಿ ಪೌರಕಾರ್ಮಿಕರು ಸತತ 10 ದಿನ ಶ್ರಮಿಸಿದ ಪರಿಣಾಮ ಆಹಾರ ಮೇಳ, ಯುವಸಂಭ್ರಮ, ಯುವದಸರಾ ಸೇರಿದಂತೆ ಯಾವುದೇ ವೇದಿಕೆಗಳಲ್ಲೂ ಸ್ವಚ್ಛತೆಗೆ ಸಂಬಂಧಿಸಿದಂತೆ ದೂರು ಕೇಳಿಬರಲಿಲ್ಲ. ಪ್ರವಾಸಿಗರಿಗೆ ಕಿರಿಕಿರಿಯಾಗದಂತೆ ಅರಮನೆ ಆವರಣ ಒಳಗೊಂಡಂತೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಬನ್ನಿಮಂಟಪದವರೆಗೂ ಹರಡಿದ ಪ್ಲಾಸ್ಟಿಕ್ ತ್ಯಾಜ್ಯಗಳು, ಸೌತೆಕಾಯಿ ಸೇರಿದಂತೆ ಹಣ್ಣಿನ ಹಸಿ ಕಸವನ್ನು ಸ್ವಚ್ಛಗೊಳಿಸಿದ್ದಾರೆ ಎಂದು ನಗರಪಾಲಿಕೆ ಆರೋಗ್ಯಾಧಿಕಾರಿ ನಾಗರಾಜ್ ತಿಳಿಸಿದರು.
ಆಹಾರ ಮೇಳದಲ್ಲಿದಿನಕ್ಕೆ 4 ಟನ್ ತ್ಯಾಜ್ಯ: ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ನಡೆದ ಆಹಾರ ಮೇಳದಲ್ಲಿ ನಿತ್ಯ 4 ಟನ್ನಷ್ಟು ತ್ಯಾಜ್ಯ ಸಂಗ್ರಹಿಸಲಾಗುತ್ತಿತ್ತು. ಅದನ್ನು ಒಣ, ಹಸಿ ಎಂದು ಪ್ರತ್ಯೇಕಿಸಿ ತೆಗೆದುಕೊಂಡು ಹೋಗಲಾಗುತ್ತಿತ್ತು. ಒಟ್ಟಾರೆ 40ಕ್ಕೂ ಹೆಚ್ಚು ಟನ್ ತ್ಯಾಜ್ಯ ಆಹಾರ ಮೇಳದಲ್ಲಿಯೇ ಸಂಗ್ರಹಗೊಂಡಿದೆ. ಫಲಪುಷ್ಪ ಪ್ರದರ್ಶನದಲ್ಲಿ ನಿತ್ಯ 4 ಆಟೋಗಳಷ್ಟು ತ್ಯಾಜ್ಯ ಸಂಗ್ರಹಣೆಯಾಗುತ್ತಿದೆ.
100, 200 ಮೀಟರ್ಗೆ ಡಸ್ಟ್ಬಿನ್: ದಸರಾ ಮಹೋತ್ಸವಕ್ಕೆ ಜನಸಾಗರ ಹರಿದು ಬರುವುದರಿಂದ ತ್ಯಾಜ್ಯ ಹೆಚ್ಚು ಉತ್ಪಾದನೆಯಾಗುವಂತಹ ಸ್ಥಳಗಳಲ್ಲಿ 100, 200 ಮೀಟರ್ಗೆ ಒಂದೊಂದು ತ್ಯಾಜ್ಯ ಸಂಗ್ರಹ ಬಾಕ್ಸ್ಗಳನ್ನು ಇಡಲಾಗಿತ್ತು. ಅದರ ಮೇಲುಗಡೆ ಒಣ, ಹಸಿ ಕಸ ಹಾಕುವಂತೆ ಸ್ಟಿಕರ್ಗಳನ್ನು ಅಂಟಿಸಲಾಗಿತ್ತು. ಅಲ್ಲದೇ, ತ್ಯಾಜ್ಯ ಸಂಗ್ರಹ ವೀಡಿಯೋ ತುಣುಕುಗಳನ್ನು ಪಾಲಿಕೆಯ ವಾಹನದಲ್ಲಿ ಪರದೆ ಅಳವಡಿಸಿ ಕಿರುಚಿತ್ರವನ್ನು ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗಿತ್ತು.
ಆರಮನೆ ಆವರಣ, ಪಂಜಿನ ಕವಾಯತು ಮೈದಾನದಲ್ಲಿ ತಲಾ ಒಂದು ಟನ್ ತ್ಯಾಜ್ಯ
ಜಂಬೂಸವಾರಿ ಕಣ್ತುಂಬಿಕೊಳ್ಳಲು ಅರಮನೆ ಆವರಣದೊಳಗೆ ಜಮಾವಣೆಗೊಂಡಿದ್ದ ಸಾವಿರಾರು ಮಂದಿ ಕುಡಿದು ಬಿಸಾಕಿದ ನೀರಿನ ಪ್ಲಾಸ್ಟಿಕ್ ಬಾಟಲಿಗಳು, ತಿಂಡಿ, ತಿನಿಸುಗಳ ಪ್ಲಾಸ್ಟಿಕ್ ಕವರ್ಗಳು, ಐಸ್ಕ್ರೀಂ, ಬಿಸ್ಕೆಟ್ ಪ್ಯಾಕೆಟ್ಗಳು ಸೇರಿದಂತೆ ಒಟ್ಟಾರೆ ಒಂದು ಟನ್ಗೂ ಹೆಚ್ಚು ತ್ಯಾಜ್ಯ ಹಾಗೂ ಪಂಜಿನ ಕವಾಯತು ಮೈದಾನದಲ್ಲೂಒಂದು ಟನ್ಗೂ ಹೆಚ್ಚು ತ್ಯಾಜ್ಯವನ್ನು ಸಂಗ್ರಹ ಮಾಡಲಾಗಿದೆ. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಬನ್ನಿಮಂಟಪದವರೆಗೆ 5 ಟನ್ ತ್ಯಾಜ್ಯ ಸಂಗ್ರಹಿಸಲಾಗಿದೆ.
ಫುಟ್ಪಾತ್ಗಳಿಂದ ಪೆಂಡಾಲ್ ತೆರವು: ಅರಮನೆ ಆವರಣ ಸೇರಿದಂತೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಬನ್ನಿಮಂಟಪದವರೆಗೆ ಹಲವು ಇಲಾಖೆಗಳು ಹಾಗೂ ಸಂಘ, ಸಂಸ್ಥೆಗಳು ಜಂಬೂಸವಾರಿ ವೀಕ್ಷಣೆಗಾಗಿ ನಿರ್ಮಿಸಿದ್ದ ಪೆಂಡಾಲ್ಗಳನ್ನು ಬುಧವಾರ ಮುಂಜಾನೆಯಿಂದಲೇ ತೆರವುಗೊಳಿಸುವ ಕಾರ್ಯ ನಡೆಯಿತು. ಅರಮನೆ ಆವರಣದಲ್ಲಿ ಸುಮಾರು 200ಕ್ಕೂ ಹೆಚ್ಚು ಮಂದಿ ಪೆಂಡಾಲ್ ಮತ್ತು ಪ್ಲಾಸ್ಟಿಕ್ ಕುರ್ಚಿಗಳನ್ನು ತೆರವುಗೊಳಿಸಿ ಲಾರಿ, ಟೆಂಪೊ ವಾಹನಗಳಲ್ಲಿ ಸಾಗಿಸಿದರು. ಹಾಗೆಯೇ, ಖಾಸಗಿ ಸಂಘ, ಸಂಸ್ಥೆಯವರು ಆಟೋಗಳ ಮೂಲಕ ಪೆಂಡಾಲ್ ಸಾಮಗ್ರಿಗಳನ್ನು ಸಾಗಿಸಿದರು. ಮೆರವಣಿಗೆ ಮಾರ್ಗದುದ್ದಕ್ಕೂ ರಸ್ತೆಯ ಎರಡೂ ಬದಿಯಲ್ಲಿ ಬಂದೋಬಸ್್ತಗಾಗಿ ಅಳವಡಿಸಿದ್ದ ಮರದ ತಡೆಗಳನ್ನೂ (ಬ್ಯಾರಿಕೇಡ್)ಬಿಚ್ಚಿ ಸಾಗಿಸಲಾಯಿತು. ಬನ್ನಿಮಂಟಪದಲ್ಲಿ ಪಂಜಿನ ಕವಾಯತು ವೀಕ್ಷಣೆಗಾಗಿ ನಿರ್ಮಿಸಿದ್ದ ವೇದಿಕೆ ಹಾಗೂ ಕುರ್ಚಿಗಳನ್ನು ತೆರವುಗೊಳಿಸಲಾಯಿತು.
ಅರಮನೆಯ 32 ಹಾಗೂ ಪಾಲಿಕೆ 20 ಮಂದಿ ಅರಮನೆ ಆವರಣದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಪೂರ್ಣವಾಗಿ ಪೆಂಡಾಲ್ಅನ್ನು ತೆರವುಗೊಳಿಸಿದ ನಂತರ ಸ್ವಚ್ಛತೆ ಕೆಲಸ ಮತ್ತಷ್ಟು ಬಿರುಸುಗೊಳ್ಳಲಿದೆ. ಪಾಲಿಕೆ ಸಿಬ್ಬಂದಿ ಬುಧವಾರ ಮಾತ್ರ ಸ್ವಚ್ಛತೆ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಅರಮನೆ ಸಿಬ್ಬಂದಿ ಕಾರ್ಯ ನಿರ್ವಹಿಸುವರು.
-ಜೆ.ಆಶಾ, ಅರಮನೆ ಮಂಡಳಿ ಅಧೀಕ್ಷಕಿ