ಆ್ಯಪ್ನಗರ

ಮೈಸೂರಿನ 8 ಮಂದಿ ಹಿರಿಯ ನಾಗರಿಕರು ಪ್ರಶಸ್ತಿಗೆ ಆಯ್ಕೆ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಹಿರಿಯ ನಾಗರಿಕರ ಸಕಾಲಾ ಸೇವಾ ಕೇಂದ್ರ ಟ್ರಸ್ಟ್‌ ವತಿಯಿಂದ ಪ್ರತಿ ವರ್ಷ ಸಾಧಕ ಹಿರಿಯ ನಾಗರಿಕರಿಗೆ ನೀಡುವ ರಾಜ್ಯಮಟ್ಟದ ಸಾರ್ಥಕ ಸೇವಾ ಭೂಷಣ ರಾಜ್ಯ ಪ್ರಶಸ್ತಿಗೆ ಎಂಟು ಮಂದಿ ಮೈಸೂರಿನ ಸಾಧಕರನ್ನು ಆಯ್ಕೆ ಮಾಡಿಲಾಗಿದೆ.

Vijaya Karnataka 19 Mar 2019, 5:00 am
ಮೈಸೂರು : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಹಿರಿಯ ನಾಗರಿಕರ ಸಕಾಲಾ ಸೇವಾ ಕೇಂದ್ರ ಟ್ರಸ್ಟ್‌ ವತಿಯಿಂದ ಪ್ರತಿ ವರ್ಷ ಸಾಧಕ ಹಿರಿಯ ನಾಗರಿಕರಿಗೆ ನೀಡುವ ರಾಜ್ಯಮಟ್ಟದ ಸಾರ್ಥಕ ಸೇವಾ ಭೂಷಣ ರಾಜ್ಯ ಪ್ರಶಸ್ತಿಗೆ ಎಂಟು ಮಂದಿ ಮೈಸೂರಿನ ಸಾಧಕರನ್ನು ಆಯ್ಕೆ ಮಾಡಿಲಾಗಿದೆ.
Vijaya Karnataka Web 8 senior citizens of mysore selected for the award
ಮೈಸೂರಿನ 8 ಮಂದಿ ಹಿರಿಯ ನಾಗರಿಕರು ಪ್ರಶಸ್ತಿಗೆ ಆಯ್ಕೆ


ರಾಜ್ಯದ ವಿವಿಧ ಭಾಗಗಳಿಂದ 60 ವರ್ಷ ಮೇಲ್ಪಟ 320 ಸಾಧಕರ ವಿವಿರ ನಾಮ ನಿರ್ದೇಶನಗೊಂಡಿದ್ದವು. ಇವುಗಳ ಪೈಕಿ ಎಂಟು ಮಂದಿಯನ್ನು ಅಂತಿಮಗೊಳಿಸಲಾಗಿದೆ.

ಸಾಧಕರು: ವೈದ್ಯಕೀಯ ಕ್ಷೇತ್ರದ ಸಾಧನೆಗೆ ಡಾ.ಬಿ.ವಿ.ರಾಜಗೋಪಾಲ್‌ (82), ಕಾನೂನು ಕ್ಷೇತ್ರದಲ್ಲಿ ಎಸ್‌.ಅಮೃತೇಶ್ವರ್‌(80), ರಾಷ್ಟ್ರೀಯ ಕ್ರೀಡಾಪಟು ಡಾ.ಬಿ.ನಿರ್ಮಲಾ(62), ಸೇನೆಯಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದ ಎ.ರಾಮಕೃಷ್ಣ(61), ಸಮಾಜ ಸೇವೆ, ಕ್ರೀಡೆ, ವೈದ್ಯಕೀಯ ಕ್ಷೇತ್ರದ ಸಾಧನೆಗೆ ಡಾ.ಜಗನ್ನಾಥ್‌ ಸಿಂಗ್‌ (75), ಶಿಕ್ಷಣ ಮತ್ತು ಚಿತ್ರಕಲೆ ಕ್ಷೇತ್ರದ ಸಾಧನೆಗೆ ಗೌರಿ ನಾಗೇಶ್‌ರಾವ್‌ (79), ಸುಗಮ ಸಂಗೀತ ಕ್ಷೇತ್ರದ ಸಾಧನೆಗೆ ಡಿ.ಉಮಾಪತಿ (70), ರಂಗಭೂಮಿ ಕ್ಷೇತ್ರದ ಸಾಧನೆಗೆ ಇಂದಿರಮ್ಮ (82) ಅವರು ಆಯ್ಕೆಗೊಂಡಿದ್ದಾರೆ.

ಮಾ. 23ರಂದು ಮಧ್ಯಾಹ್ನ 2ಕ್ಕೆ ನಗರದ ಕಲಾಮಂದಿರದಲ್ಲಿ ಹಮ್ಮಿಕೊಂಡಿರುವ ಕಾರ‍್ಯಕ್ರಮದಲ್ಲಿ ಸೇವಾ ಭೂಷಣ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹಿರಿಯ ನಾಗರಿಕರ ಸಕಾಲಾ ಸೇವಾ ಕೇಂದ್ರ ಟ್ರಸ್ಟ್‌ನ ಅಧ್ಯಕ್ಷ ಪಿ.ರಾಜಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂದು ರಾಜ್ಯಮಟ್ಟದ ಹಿರಿಯ ನಾಗರಿಕರ ಕುಂದೂ ಕೊರತೆಗಳ ವಿಚಾರ ಸಂಕೀರ್ಣ, ಕಾನೂನು ಅರಿವು ಕಾರ‍್ಯಕ್ರಮ ಹಾಗು ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಲಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌.ಕೆ.ವೆಂಟಿಗೋಡಿ ಅವರು ಕಾರ‍್ಯಕ್ರಮ ಉದ್ಘಾಟಿಸಲಿದಾರೆ.

ಕಾರ‍್ಯಕ್ರಮದಲ್ಲಿ ಸರಕಾರದ ಫಲಾನುಭವಿಗಳ ಗುರುತಿನ ಚೀಟಿ ವಿತರಿಸಲಾಗುತ್ತದೆ. ರಾಜ್ಯದಲ್ಲಿ ತೊಂದರೆಗೆ ಒಳಾಗುತ್ತಿರುವ ಹಿರಿಯ ನಾಗರಿಕರಿಂದ ದೂರು ಸ್ವೀಕರಿಸುವ ಕಾರ‍್ಯಕ್ರಮವು ನಡೆಯಲಿದೆ. ಮಕ್ಕಳಿಂದ ಮತ್ತು ಸಾರ್ವಜನಿಕರಿಂದ ತೊಂದರೆಯಾಗಿದ್ದಲ್ಲಿ ನಿಮ್ಮ ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡಿ ವಂಚಿತರಾಗಿರುವವರು ಮಾ. 22ರ ಸಂಜೆ 5ರೊಳಗೆ ಹಿರಿಯ ನಾಗರಿಕರ ಸಕಾಲಾ ಸೇವಾ ಕೇಂದ್ರ ಟ್ರಸ್ಟ್‌ ಗೆ ದೂರ ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ.

ಕಾರ‍್ಯಕ್ರಮದಲ್ಲಿ ಹಿರಿಯ ನಾಗರಿಕರಿಗೆ ಅಜ್ಜ-ಅಜ್ಜಿ ಫ್ಯಾನ್ಸಿ ಡ್ರೆಸ್‌ ಕಾಂಪಿಟೇಷನ್‌ , ಜಾನಪದ ನೃತ್ಯ, ಏಕಾಭಿನಯ ಪಾತ್ರ ಸ್ಪರ್ಧೆಗಳು ನಡೆಯಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ