ಆ್ಯಪ್ನಗರ

ಮೂರು ಸೈಟ್‌ ಪಡೆದ ಅಧಿಕಾರಿ ವಿರುದ್ಧ ಪ್ರಕರಣ ದಾಖಲು

ಸುಳ್ಳು ಪ್ರಮಾಣ ಪತ್ರ ನೀಡಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಬರೋಬ್ಬರಿ ಮೂರು ನಿವೇಶನಗಳನ್ನು ಪಡೆದ ಬಿಎಸ್‌ಎನ್‌ಎಲ್‌ ಅಧಿಕಾರಿ ವಿರುದ್ಧ ಲಕ್ಷ್ಮೇಪುರಂ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

Vijaya Karnataka 26 Dec 2019, 5:00 am
ಮೈಸೂರು: ಸುಳ್ಳು ಪ್ರಮಾಣ ಪತ್ರ ನೀಡಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಬರೋಬ್ಬರಿ ಮೂರು ನಿವೇಶನಗಳನ್ನು ಪಡೆದ ಬಿಎಸ್‌ಎನ್‌ಎಲ್‌ ಅಧಿಕಾರಿ ವಿರುದ್ಧ ಲಕ್ಷ್ಮೇಪುರಂ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
Vijaya Karnataka Web MUDA-2


ಬಿಎಸ್‌ಎನ್‌ಎಲ್‌ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಂ.ಎನ್‌.ರಾಮಕೃಷ್ಣ ವಿರುದ್ಧ ಮುಡಾದ ವಿಶೇಷ ತಹಸೀಲ್ದಾರ್‌ ಆರ್‌.ಬಿ.ಶಿವಕುಮಾರ್‌ ನೀಡಿದ ದೂರಿನ ಹಿನ್ನೆಲೆಯಲ್ಲಿಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

'ಅರ್ಧ ಮೈಸೂರು ಆಫೀಸರ್ಸ್ ಪಾಲು', 'ಸರಕಾರಿ ನೌಕರರೊಬ್ಬರಿಗೆ ಮೂರು ಸೈಟ್‌', ಹೆಸರಿನಲ್ಲಿಪ್ರಕಟವಾದ ಸರಣಿ ವರದಿ ಹಿನ್ನೆಲೆಯಲ್ಲಿಎಚ್ಚೆತ್ತು ಮುಡಾ ಆಯುಕ್ತ ಕಾಂತರಾಜು, ಈ ಸಂಬಂಧ ದಾಖಲೆಗಳನ್ನು ಪರಿಶೀಲಿಸಿ, ಸುಳ್ಳು ಪ್ರಮಾಣ ಪತ್ರ ನೀಡಿ ನಿವೇಶನ ಪಡೆದಿದ್ದಾರೆ ಎಂಬುದನ್ನು ಖಚಿತ ಪಡಿಸಿಕೊಂಡು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಎಸ್‌ಎನ್‌ಎಲ್‌ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದರು.

ರಾಜ್ಯದ ಯಾವುದೇ ನಗರಾಭಿವೃದ್ಧಿ ಪ್ರಾಧಿಕಾರದಲ್ಲಾಗಲಿ ಅಥವಾ ಯಾವ ಸಂಘ ಸಂಸ್ಥೆಗಳಿಂದಾಗಲಿ ನಿವೇಶನ/ಮನೆ ಪಡೆದುಕೊಂಡಿಲ್ಲಎಂದು ಸುಳ್ಳು ಪ್ರಮಾಣ ಪತ್ರಗಳನ್ನು ನೀಡಿ ದೇವನೂರು 2ನೇ ಹಂತ (ನಿವೇಶನ ಸಂ. 2428), ವಿಜಯನಗರ 4ನೇ ಹಂತ (ನಿ.ಸಂ. 712) ಮತ್ತು ದಟ್ಟಗಳ್ಳಿ 3ನೇ ಹಂತ (ನಿ.ಸಂ. 168)ದಲ್ಲಿತಲಾ ಒಂದು ನಿವೇಶನಗಳನ್ನು ಪಡೆದು ಪ್ರಾಧಿಕಾರಕ್ಕೆ ವಂಚಿಸಿದ್ದರು.

ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಶೇಷ ತಹಸೀಲ್ದಾರ್‌ ಆರ್‌.ಬಿ. ಶಿವಕುಮಾರ್‌ ಮಂಗಳವಾರ ಲಕ್ಷ್ಮೇಪುರಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿಮುಡಾದಲ್ಲಿನಡೆದ ಅಕ್ರಮದ ಬಗ್ಗೆ ಪ್ರಕಟವಾದ ಸರಣಿ ವರದಿ ಫಲಶೃತಿ ಕಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ