ಹುಣಸೂರು/ಮೈಸೂರು: ಕಳೆದ ಎರಡು ದಿನದಿಂದ ಸುರಿಯುತ್ತಿರುವ ಗುಡುಗು, ಬಿರುಗಾಳಿ ಸಹಿತ ಮಳೆಗೆ ಮನೆಗೋಡೆ ಕುಸಿದು ಹಿರಿಯ ನಾಗರಿಕ ಮಹಿಳೆ ಮೃತಪಟ್ಟಿರುವ ಘಟನೆ ತಾಲೂಕಿನ ಕೆಂಚನಕೆರೆ ಹೊಸಕೋಟೆಯಲ್ಲಿ ಸೋಮವಾರ ರಾತ್ರಿ ನಡೆದಿದೆ. ತಾಲೂಕಿನ ಕಸಬಾ ಹೋಬಳಿಯ ಕೆಂಚನಕೆರೆ ಹೊಸಕೋಟೆ ಗ್ರಾಮದ ಲೇ.ಗುರುಮೂರ್ತಿಯವರ ಪತ್ನಿ ಶಾಂತಮ್ಮ(65)ಮೃತರು. ಸೋಮವಾರ ಸಂಜೆಯಿಂದಲೇ ಭಾರಿ ಗಾಳಿ ಸಹಿತ ಮಳೆ ಸುರಿಯಿತು. ಮನೆಯಲ್ಲಿ ಮಲಗಿದ್ದ ಶಾಂತಮ್ಮರವರ ಮೇಲೆ ಗೋಡೆ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶಾಸಕರ ಭೇಟಿ, ನೆರವು
ವಿಷಯ ತಿಳಿಯುತ್ತಿದ್ದಂತೆ ಶಾಸಕ ಎಚ್.ಪಿ ಮಂಜುನಾಥ್, ತಹಸೀಲ್ದಾರ್ ಡಾ.ಅಶೋಕ್, ಆರ್ಐ ನಂದೀಶ್, ವಿಎ ಶಿವಕುಮಾರ್ರೊಂದಿಗೆ ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೇ, ವೈಯಕ್ತಿಕವಾಗಿ ಹಣಕಾಸು ನೆರವು ನೀಡಿದರು. ಸರಕಾರದ ವತಿಯಿಂದ ಮನೆ ಮಂಜೂರಾತಿ ಜೊತೆಗೆ ಸರಕಾರದ 5 ಲಕ್ಷ ರೂ. ಪರಿಹಾರ ಕೊಡಿಸಲು ಕ್ರಮ ವಹಿಸುವಂತೆ ತಹಸೀಲ್ದಾರಿಗೆ ಶಾಸಕರು ಸೂಚಿಸಿದರು.
ಮಂಡ್ಯದಲ್ಲೂ ಧಾರಾಕಾರ ಮಳೆ
ಮಂಡ್ಯ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಅಪಾರ ಪ್ರಮಾಣದ ಬೆಳೆಗಳು ಮತ್ತು ಆಸ್ತಿಪಾಸ್ತಿಗಳಿಗೆ ನಷ್ಟವಾಗಿದೆ. ಬಹುತೇಕ ಹಳ್ಳಕೊಳ್ಳಗಳು, ಕೆರೆಗಳು ತುಂಬಿ ಹರಿಯುತ್ತಿದ್ದು, ಜಮೀನುಗಳೆಲ್ಲಾ ಜಲಾವೃತಗೊಂಡಿವೆ. ರಸ್ತೆಗಳತ್ತಲೂ ನೀರು ನುಗ್ಗಿದ್ದರಿಂದ ಕೆಲವೆಡೆ ರಸ್ತೆಗಳು ಕಾಲುವೆಗಳಂತೆ ಕಾಣುತ್ತಿದ್ದವು. ಸೋಮವಾರ ರಾತ್ರಿ ಒಂದೇ ದಿನ ಸರಾಸರಿ 128.6 ಮಿ.ಮೀ. ಮಳೆಯಾಗಿದೆ.
ನೀರಲ್ಲಿ ವಾಹನ ಮುಳುಗಡೆ
ಮಂಡ್ಯ ತಾಲೂಕು ಬೂದನೂರು ಬಳಿಯ ಕೆರೆ ಏರಿ ಒಡೆದು, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನೀರು ಹರಿಯುತ್ತಿತ್ತು. ಹೀಗಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಮಧ್ಯಾಹ್ನದವರೆಗೆ ನಿರ್ಬಂಧಿಸಿ, ಮಂಡ್ಯ-ಭಾರತೀನಗರ-ಮದ್ದೂರು ಮಾರ್ಗದಲ್ಲಿ ಬದಲಿ ಸಂಚಾರ ವ್ಯವಸ್ಥೆ ಮಾಡಲಾಗಿತ್ತು. ನಗರದ ಹೊರವಲಯದ ಚಿಕ್ಕಮಂಡ್ಯ ಬೀಡಿ ಕಾರ್ಮಿಕರ ಕಾಲನಿ, ವಿವೇಕಾನಂದ ನಗರವು ಮಳೆಯಿಂದಾಗಿ ಮತ್ತೆ ಕೆರೆಯಂತಾಗಿತ್ತು.
ಚಿಕ್ಕಮಂಡ್ಯ ಕೆರೆ ಮೇಲ್ಭಾಗದ ಹೊಳಲು, ಕೋಣನಹಳ್ಳಿ ಕೆರೆಗಳು ತುಂಬಿ ಹರಿಯುತ್ತಿದ್ದರಿಂದ ಬೀಡಿ ಕಾರ್ಮಿಕರ ಕಾಲನಿ ನಡುವೆ ಹಾದುಹೋಗಿರುವ ಕಾಲುವೆ ತುಂಬಿ ಹರಿಯುತ್ತಿತ್ತು. ಹೆಚ್ಚುವರಿ ನೀರು ಕಾಲನಿಯತ್ತ ನುಗ್ಗಿತ್ತು. ಬೀಡಿ ಕಾರ್ಮಿಕರ ಕಾಲನಿ, ವಿವೇಕಾನಂದ ನಗರ ಬಡಾವಣೆ, ಕೆಎಚ್ಬಿ ಕಾಲನಿಯ ತಗ್ಗು ಪ್ರದೇಶಗಳು, ಜೆಎಸ್ಎಸ್ ಪಬ್ಲಿಕ್ ಸ್ಕೂಲ್ ಸುತ್ತಮುತ್ತಲ ಪ್ರದೇಶಗಳೆಲ್ಲಾ ಜಲಾವೃತಗೊಂಡಿದ್ದವು. ಈ ಪ್ರದೇಶಗಳಲ್ಲಿ ರಸ್ತೆಗಳಲ್ಲಿ ನೀರು ನಿಂತಿದ್ದು ಮಾತ್ರವಲ್ಲದೆ, ಮನೆಗಳಿಗೂ ನೀರು ನುಗ್ಗಿತ್ತು. ವಾಹನಗಳು ನೀರಿನಲ್ಲಿ ಅರ್ಧ ಭಾಗದಷ್ಟು ಮುಳುಗಡೆಯಾಗಿದ್ದವು.
ಶಾಸಕರ ಭೇಟಿ, ನೆರವು
ವಿಷಯ ತಿಳಿಯುತ್ತಿದ್ದಂತೆ ಶಾಸಕ ಎಚ್.ಪಿ ಮಂಜುನಾಥ್, ತಹಸೀಲ್ದಾರ್ ಡಾ.ಅಶೋಕ್, ಆರ್ಐ ನಂದೀಶ್, ವಿಎ ಶಿವಕುಮಾರ್ರೊಂದಿಗೆ ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೇ, ವೈಯಕ್ತಿಕವಾಗಿ ಹಣಕಾಸು ನೆರವು ನೀಡಿದರು. ಸರಕಾರದ ವತಿಯಿಂದ ಮನೆ ಮಂಜೂರಾತಿ ಜೊತೆಗೆ ಸರಕಾರದ 5 ಲಕ್ಷ ರೂ. ಪರಿಹಾರ ಕೊಡಿಸಲು ಕ್ರಮ ವಹಿಸುವಂತೆ ತಹಸೀಲ್ದಾರಿಗೆ ಶಾಸಕರು ಸೂಚಿಸಿದರು.
ಮಂಡ್ಯದಲ್ಲೂ ಧಾರಾಕಾರ ಮಳೆ
ಮಂಡ್ಯ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಅಪಾರ ಪ್ರಮಾಣದ ಬೆಳೆಗಳು ಮತ್ತು ಆಸ್ತಿಪಾಸ್ತಿಗಳಿಗೆ ನಷ್ಟವಾಗಿದೆ. ಬಹುತೇಕ ಹಳ್ಳಕೊಳ್ಳಗಳು, ಕೆರೆಗಳು ತುಂಬಿ ಹರಿಯುತ್ತಿದ್ದು, ಜಮೀನುಗಳೆಲ್ಲಾ ಜಲಾವೃತಗೊಂಡಿವೆ. ರಸ್ತೆಗಳತ್ತಲೂ ನೀರು ನುಗ್ಗಿದ್ದರಿಂದ ಕೆಲವೆಡೆ ರಸ್ತೆಗಳು ಕಾಲುವೆಗಳಂತೆ ಕಾಣುತ್ತಿದ್ದವು. ಸೋಮವಾರ ರಾತ್ರಿ ಒಂದೇ ದಿನ ಸರಾಸರಿ 128.6 ಮಿ.ಮೀ. ಮಳೆಯಾಗಿದೆ.
ನೀರಲ್ಲಿ ವಾಹನ ಮುಳುಗಡೆ
ಮಂಡ್ಯ ತಾಲೂಕು ಬೂದನೂರು ಬಳಿಯ ಕೆರೆ ಏರಿ ಒಡೆದು, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನೀರು ಹರಿಯುತ್ತಿತ್ತು. ಹೀಗಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಮಧ್ಯಾಹ್ನದವರೆಗೆ ನಿರ್ಬಂಧಿಸಿ, ಮಂಡ್ಯ-ಭಾರತೀನಗರ-ಮದ್ದೂರು ಮಾರ್ಗದಲ್ಲಿ ಬದಲಿ ಸಂಚಾರ ವ್ಯವಸ್ಥೆ ಮಾಡಲಾಗಿತ್ತು. ನಗರದ ಹೊರವಲಯದ ಚಿಕ್ಕಮಂಡ್ಯ ಬೀಡಿ ಕಾರ್ಮಿಕರ ಕಾಲನಿ, ವಿವೇಕಾನಂದ ನಗರವು ಮಳೆಯಿಂದಾಗಿ ಮತ್ತೆ ಕೆರೆಯಂತಾಗಿತ್ತು.
ಚಿಕ್ಕಮಂಡ್ಯ ಕೆರೆ ಮೇಲ್ಭಾಗದ ಹೊಳಲು, ಕೋಣನಹಳ್ಳಿ ಕೆರೆಗಳು ತುಂಬಿ ಹರಿಯುತ್ತಿದ್ದರಿಂದ ಬೀಡಿ ಕಾರ್ಮಿಕರ ಕಾಲನಿ ನಡುವೆ ಹಾದುಹೋಗಿರುವ ಕಾಲುವೆ ತುಂಬಿ ಹರಿಯುತ್ತಿತ್ತು. ಹೆಚ್ಚುವರಿ ನೀರು ಕಾಲನಿಯತ್ತ ನುಗ್ಗಿತ್ತು. ಬೀಡಿ ಕಾರ್ಮಿಕರ ಕಾಲನಿ, ವಿವೇಕಾನಂದ ನಗರ ಬಡಾವಣೆ, ಕೆಎಚ್ಬಿ ಕಾಲನಿಯ ತಗ್ಗು ಪ್ರದೇಶಗಳು, ಜೆಎಸ್ಎಸ್ ಪಬ್ಲಿಕ್ ಸ್ಕೂಲ್ ಸುತ್ತಮುತ್ತಲ ಪ್ರದೇಶಗಳೆಲ್ಲಾ ಜಲಾವೃತಗೊಂಡಿದ್ದವು. ಈ ಪ್ರದೇಶಗಳಲ್ಲಿ ರಸ್ತೆಗಳಲ್ಲಿ ನೀರು ನಿಂತಿದ್ದು ಮಾತ್ರವಲ್ಲದೆ, ಮನೆಗಳಿಗೂ ನೀರು ನುಗ್ಗಿತ್ತು. ವಾಹನಗಳು ನೀರಿನಲ್ಲಿ ಅರ್ಧ ಭಾಗದಷ್ಟು ಮುಳುಗಡೆಯಾಗಿದ್ದವು.