ಆ್ಯಪ್ನಗರ

ಅಪಘಾತ: ಬೈಕ್‌ ಸವಾರರು ಸಾವು

ಪಟ್ಟಣದ ಬಸಲಾಪುರ ಗೇಟ್‌ ಬಳಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಬೈಕ್‌ ಸವಾರರು ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ.

Vijaya Karnataka 18 Jul 2019, 5:00 am
ಪಿರಿಯಾಪಟ್ಟಣ: ಪಟ್ಟಣದ ಬಸಲಾಪುರ ಗೇಟ್‌ ಬಳಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಬೈಕ್‌ ಸವಾರರು ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ.
Vijaya Karnataka Web accident bike rider death
ಅಪಘಾತ: ಬೈಕ್‌ ಸವಾರರು ಸಾವು


ಪಟ್ಟಣದ ಹುಣಸೇಕುಪ್ಪೆ ರಸ್ತೆಯ ಪ್ರಮೋದ್‌ ಬಿನ್‌ ಕುಮಾರ್‌ (17) ಮತ್ತು ಹುಣಸೂರು ನಗರ ವಾಸಿ, ಬನ್ನಿಕುಪ್ಪೆ ಗ್ರಾಮದ ದರ್ಶನ್‌ ಬಿನ್‌ ರಾಜಣ್ಣ (26) ಮೃತರು.

ಪ್ರಮೋದ್‌ನೊಂದಿಗೆ ತೆರಳಿದ ಚಿಕ್ಕನಾಯಕರ ಬೀದಿಯ ಚಿಕ್ಕರಾಜು ಅವರ ಪುತ್ರ ವಿಕಾಸ್‌, ಛತ್ರದ ಬೀದಿ ನಿವಾಸಿ ರೂಪೇಶ್‌ ಅವರ ಪುತ್ರ ವಿನಯ್‌ ಎಂಬುವವರ ಕಾಲಿಗೆ ತೀವ್ರ ಪೆಟ್ಟಾಗಿದ್ದು ಮೈಸೂರಿಗೆ ಕರೆದೊಯ್ಯಲಾಗಿದೆ. ಮೂವರು ವಿದ್ಯಾರ್ಥಿಗಳು ಸ್ನೇಹಿತನ ಹುಟ್ಟುಹಬ್ಬದ ಆಚರಣೆಗೆ ತೆರಳಿ ವಾಪಸ್ಸಾಗುವಾಗ ಎದುರಿನಿಂದ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಪ್ರಮೋದ್‌ ಮೃತಪಟ್ಟಿದ್ದು, ವಿಕಾಸ್‌, ವಿನಯ್‌ ಕಾಲಿಗೆ ಪೆಟ್ಟಾಗಿದೆ. ಇದೇ ಸ್ಥಳದಲ್ಲಿ ಮತ್ತೊಂದು ಬೈಕ್‌ನಲ್ಲಿ ತೆರಳುತ್ತಿದ್ದ ಹುಣಸೂರು ಗ್ರಾಮದ ದರ್ಶನ ಎಂಬಾತನಿಗೂ ಇದೇ ವಾಹನ ಡಿಕ್ಕಿ ಹೊಡೆದಿದ್ದು ಈತ ಕೂಡ ಸ್ಥಳದಲ್ಲೆ ಮೃತಪಟ್ಟಿದ್ದಾನೆ.

ಗಾಯಾಳುಗಳಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕಳುಹಿಸಲಾಗಿದೆ ಎಂದು ವೈದ್ಯಾಧಿಕಾರಿ ಅನಿಲ್‌ ತಿಳಿಸಿದ್ದಾರೆ.

ಪಿರಿಯಾಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ