ಆ್ಯಪ್ನಗರ

20 ಕಿ.ಮೀ ದೂರದಲ್ಲಿ ವಸತಿ ವ್ಯವಸ್ಥೆ !

ಮೈಸೂರು ನಗರದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿ ದ್ದರೆ ವಸತಿ ವ್ಯವಸ್ಥೆ ಇರುವುದು 20 ಕಿ.ಮೀ. ದೂರದಲ್ಲಿ. ಕೆಲವರು ತಂಗಿದ್ದು ಹಾಸ್ಟೆಲ್‌ನಲ್ಲಿ, ಸ್ನಾನ ಮಾಡಿದ್ದು, ಸಾರ್ವ ಜನಿಕ ಶೌಚಾಲಯದಲ್ಲಿ. ಮಾಹಿತಿ ನೀಡೋರೆ ಇಲ್ಲ...

Vijaya Karnataka 25 Nov 2017, 2:41 pm
ಕೆಲವರು ತಂಗಿದ್ದು ಹಾಸ್ಟೆಲ್‌ನಲ್ಲಿ, ಸ್ನಾನ ಮಾಡಿದ್ದು ಸಾರ್ವಜನಿಕ ಶೌಚಾಲಯದಲ್ಲಿ
Vijaya Karnataka Web accommodation far from 20 km
20 ಕಿ.ಮೀ ದೂರದಲ್ಲಿ ವಸತಿ ವ್ಯವಸ್ಥೆ !


ಹರೀಶ್ ಎಲ್.ತಲಕಾಡು

ಮೈಸೂರು:
ಮೈಸೂರು ನಗರದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿ ದ್ದರೆ ವಸತಿ ವ್ಯವಸ್ಥೆ ಇರುವುದು 20 ಕಿ.ಮೀ. ದೂರದಲ್ಲಿ. ಕೆಲವರು ತಂಗಿದ್ದು ಹಾಸ್ಟೆಲ್‌ನಲ್ಲಿ, ಸ್ನಾನ ಮಾಡಿದ್ದು, ಸಾರ್ವ ಜನಿಕ ಶೌಚಾಲಯದಲ್ಲಿ. ಮಾಹಿತಿ ನೀಡೋರೆ ಇಲ್ಲ...

-ಇದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯು ತ್ತಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿರುವ ಸಾಹಿತ್ಯಾಸಕ್ತರಿಗೆ ಆದ ಅನುಭವ.

ಸಮ್ಮೇಳನದಲ್ಲಿ ವಿಶೇಷ ಆಹ್ವಾನಿತರಿಗೆ ಜಿಲ್ಲಾಡಳಿತ ನಗರದ ಖಾಸಗಿ ಹೋಟೆಲ್, ಲಾಡ್ಜ್‌ಗಳಲ್ಲಿ ವಸತಿ ವ್ಯವಸ್ಥೆ ಮಾಡಿದ್ದರೆ, ನೋಂದಣಿ ಮಾಡಿಸಿಕೊಂಡಿದ್ದ ಸಾಹಿತ್ಯಾಸಕ್ತರಿಗೆ ಮೈಸೂರು ನಗರದಿಂದ ದೂರವಿರುವ ಸರಕಾರಿ ಹಾಸ್ಟೆಲ್‌ಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಬಹುತೇಕ ಮಂದಿ ಸಾಹಿತ್ಯಾಸಕ್ತರು, ಆಯೋಜಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಹಿರಿಯ ನಾಗರಿಕರು, ಹತ್ತಿರದ ಸ್ಥಳದಲ್ಲಿ ವಸತಿ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕೆಲ ಸಾಹಿತ್ಯಾಸಕ್ತರು ಹಾಸ್ಟೆಲ್, ಸಮುದಾಯ ಭವನಗಳ ಗೊಡವೆಯೇ ಬೇಡ ಎಂದು ಖಾಸಗಿ ಲಾಡ್ಜ್, ಹೋಟೆಲ್‌ಗಳಲ್ಲಿ ರೂಮ್ ಬುಕ್ ಮಾಡಿಕೊಂಡು ತಂಗುತ್ತಿದ್ದಾರೆ.

ಶೇ.60ರಷ್ಟು ಭರ್ತಿ: ಸಾಹಿತ್ಯ ಸಮ್ಮೇಳನಕ್ಕೆ ಆಗಮಿ ಸುವ ಗಣ್ಯರು ಮತ್ತು ಅತಿಗಣ್ಯರ ವಾಸ್ತವ್ಯಕ್ಕೆ ಶೇ.50 ರಷ್ಟು ರೂಂಗಳನ್ನು ಮೀಸಲು ಇರಿಸುವಂತೆ ಜಿಲ್ಲಾಡಳಿತ ನೀಡಿದ್ದ ಸೂಚನೆಯಂತೆ ಮೀಸಲಿರಿಸಲಾಗಿದ್ದು, ಶೇ.60 ರಷ್ಟು ಕೋಣೆಗಳು ಭರ್ತಿಯಾಗಿವೆ. ಇನ್ನೂ ಶೇ.40ರಷ್ಟು ಕೋಣೆಗಳು ಸಂಜೆ ವೇಳೆಗೆ ಭರ್ತಿಯಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಮೈಸೂರು ನಗರ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ.

ಒಂದೇ ಕೊಠಡಿಯಲ್ಲಿ ಐದಾರು ಮಂದಿ: ಕೆಲ ಹೊಟೇಲ್ ಮತ್ತು ಲಾಡ್ಜ್‌ಗಳಲ್ಲಿ ಸಿಂಗಲ್ ಅಥವಾ ಡಬಲ್ ಬೆಡ್‌ರೂಂ ಇರುವ ಕೋಣೆಗಳಿದ್ದರೂ. ಹೆಚ್ಚುವರಿ ಬೆಡ್‌ಗಳನ್ನು ಹಾಕುವ ಮೂಲಕ ಸಾಹಿತ್ಯಾಸಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತುಘಿ. ಇದರಿಂದ ಸಾಕಷ್ಟು ಕಿರಿ ಕಿರಿ ಅನುಭವಿಸುವಂತಾಯಿತು ಎನ್ನುತ್ತಾರೆ ಗದಗದ ಕಾಶಪ್ಪನವರ್.

ಐಷಾರಾಮಿ ಹೊಟೇಲ್‌ನಲ್ಲಿ ವಾಸ್ತವ್ಯಘಿ: ಸಮ್ಮೇಳನಲ್ಲಿ ನಡೆಯುವ ನಾನಾ ವಿಚಾರಗೋಷ್ಠಿ ಮತ್ತು ಕವಿಗೋಷ್ಠಿಯಲ್ಲಿ ಭಾಗವಹಿಸುವ ಆಹ್ವಾನಿತರಿಗೆ ಸಾಮಾನ್ಯ ಹೊಟೇಲ್‌ಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದರೆ, ಕಸಾಪದ ಪದಾಧಿಕಾರಿಗಳಿಗೆ ಇನ್ಪೋಸಿಸ್ ಸೇರಿದಂತೆ ಕೆಲ ಐಷಾರಾಮಿ ಹೊಟೇಲ್‌ಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು.

ಸಹಕರಿಸಿದ ಖಾಸಗಿ ಶಾಲಾ, ಕಾಲೇಜು: ಸರಕಾರದ ಕಾಲೇಜು, ಹಾಸ್ಟೆಲ್, ಸಮುದಾಯ ಭವನಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸುವುದರೊಂದಿಗೆ ಖಾಸಗಿ ಶಾಲಾ, ಕಾಲೇಜುಗಳಿಗೆ ವಸತಿ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತ ಮನವಿ ಮಾಡಿತ್ತುಘಿ. ಆದರೆ ಕೆಲ ಶಾಲಾ, ಕಾಲೇಜುಗಳು, ತಮ್ಮ ಕಟ್ಟಡದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿಲು ನಿರಾಕರಿಸುವುದು ಕಂಡು ಬಂದಿದೆ.


ಜಿಲ್ಲಾಡಳಿತದ ಸೂಚನೆಯಂತೆ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ವಿಶೇಷ ಆಹ್ವಾನಿತರ ವಸತಿ ವ್ಯವಸ್ಥೆಗೆ ಶೇ.50 ಕೊಠಡಿಗಳನ್ನು ಮೀಸಲಿರಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ, ಶೇ.60ರಷ್ಟು ಕೋಣೆಗಳು ಭರ್ತಿಯಾಗಿವೆ. ಸಂಜೆಯೊಳಗೆ ಎಲ್ಲಾ ಭರ್ತಿಯಾಗುವ ಸಾಧ್ಯತೆ ಇದೆ.
-ನಾರಾಯಣ ಗೌಡ ಅಧ್ಯಕ್ಷರು, ಮೈಸೂರು ನಗರ ಹೊಟೇಲ್ ಮಾಲೀಕರ ಸಂಘ

87 ವರ್ಷ ಇಳಿ ವಯಸ್ಸಿನಲ್ಲಿಯೂ ಪ್ರತಿ ವರ್ಷ ಎಲ್ಲಾ ಜಿಲ್ಲೆಗಳಲ್ಲಿಯೂ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಭಾಗ ವಹಿಸುತ್ತಿದ್ದೆ. ಈ ಬಾರಿಯೂ ಮೈಸೂರಿನಲ್ಲಿ ನಡೆಯುವ ಸಮ್ಮೇಳನಕ್ಕೆ ಮುಂಜಾನೆ ರೈಲಿನಲ್ಲಿ ಬಂದೆ. ಆದರೆ ಉಳಿದುಕೊಳ್ಳಲು ವಸತಿ ವ್ಯವಸ್ಥೆಯನ್ನು 20 ಕಿ.ಮೀ. ದೂರದಲ್ಲಿ ರುವ ಮೊರಾರ್ಜಿ ದೇಸಾಯಿ ಶಾಲೆಯ ಹಾಸ್ಟೆಲ್‌ನಲ್ಲಿ ನೀಡಿದ್ದಾರೆ. ಹತ್ತಿರದಲ್ಲಿ ವಸತಿ ವ್ಯವಸ್ಥೆ ಮಾಡಿಕೊಡಿ ಎಂದು ಕೇಳುತ್ತಿದ್ದೇನೆ. ಯಾರು ಗಮನಹರಿಸುತ್ತಿಲ್ಲ.
-ಬಸವಂತಪ್ಪ ಗುರು ಬಸಪ್ಪ ಕೊಣೂರ ಸಾಹಿತ್ಯಪ್ರೇಮಿ, ಗದಗ

19 ಮಂದಿ ಸ್ನೇಹಿತರೊಂದಿಗೆ ಬೆಳಗಿನ ಜಾವ ಮೈಸೂರಿಗೆ ಬಂದು ವಸತಿ ವ್ಯವಸ್ಥೆ ನೀಡಿದ್ದ ಹಾಸ್ಟೆಲ್‌ಗೆ ತೆರಳಿ ದೆವು. ಆದರೆ ಆಲ್ಲಿ ಸ್ನಾನಕ್ಕೆ ವ್ಯವಸ್ಥೆಯೇ ಇಲ್ಲ. ಕೊನೆಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ, ಅಲ್ಲೇ ಸಾರ್ವಜನಿಕರ ಶೌಚಾಲಯದಲ್ಲಿ ಸ್ನಾನ ಮಾಡಿ ದೇವಿ ದರ್ಶನ ಪಡೆದು, ಸಮ್ಮೇಳನಕ್ಕೆ ಬಂದಿದ್ದು, ಸಂಜೆಯೇ ಊರಿಗೆ ತೆರಳುತ್ತಿದ್ದೇವೆ.
-ಮನು ಕೋಲಾರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ