ಆ್ಯಪ್ನಗರ

ಹಲ್ಲೆ ಆರೋಪ: ಪಾಲಿಕೆ ಸದಸ್ಯಸೇರಿ ಆರು ಮಂದಿ ವಿರುದ್ಧ ದೂರು

ವ್ಯಕ್ತಿತ್ವ ವಿಕಸನ ಶಿಬಿರದ ಕರಪತ್ರ ಹಂಚುತ್ತಿದ್ದ ವೇಳೆ ನಗರಪಾಲಿಕೆ ಸದಸ್ಯರೊಬ್ಬರು ತಮ್ಮ ಬೆಂಬಲಿಗರ ಮೂಲಕ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಎಬಿವಿಪಿ ಕಾರ್ಯಕರ್ತ ರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ವಿಕ ಸುದ್ದಿಲೋಕ 20 Aug 2017, 9:00 am
ಮೈಸೂರು: ವ್ಯಕ್ತಿತ್ವ ವಿಕಸನ ಶಿಬಿರದ ಕರಪತ್ರ ಹಂಚುತ್ತಿದ್ದ ವೇಳೆ ನಗರಪಾಲಿಕೆ ಸದಸ್ಯರೊಬ್ಬರು ತಮ್ಮ ಬೆಂಬಲಿಗರ ಮೂಲಕ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಎಬಿವಿಪಿ ಕಾರ್ಯಕರ್ತ ರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
Vijaya Karnataka Web accused six members including a member of the complaint lodged a complaint
ಹಲ್ಲೆ ಆರೋಪ: ಪಾಲಿಕೆ ಸದಸ್ಯಸೇರಿ ಆರು ಮಂದಿ ವಿರುದ್ಧ ದೂರು


ನಗರಪಾಲಿಕೆ ಸದಸ್ಯ ನಾಗಭೂಷಣ್‌ ಹಾಗೂ ಅವರ ಐದು ಮಂದಿ ಬೆಂಬಲಿಗರ ವಿರುದ್ಧ ಎಪಿವಿಪಿ ಕಾರ‍್ಯಕರ್ತ ಶರತ್‌ ದೇವರಾಜ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಶುಕ್ರವಾರ ಮಧ್ಯಾಹ್ನ ನಮ್ಮ ಸಂಘಟನೆಯ ಕಾರ್ಯಕರ್ತ ಶ್ರೀರಾಮ ಮತ್ತಿತರರ ಜತೆ ವ್ಯಕ್ತಿತ್ವ ವಿಕಸನ ಶಿಬಿರದ ಕರಪತ್ರ ವಿತರಿಸುವ ಸಲುವಾಗಿ ದೇವರಾಜ ಮಹಿಳಾ ಪಿಯು ಕಾಲೇಜಿನ ಮುಂಭಾಗ ನಿಂತಿದ್ದೆವು. ಇದೇ ವೇಳೆ
ಮಹಾನಗರ ಪಾಲಿಕೆಯ ಸದಸ್ಯ ನಾಗಭೂಷಣ ಹಾಗೂ ಅವರ ಐವರು ಬೆಂಬಲಿಗರು ಅಲ್ಲಿಗೆ ಬಂದರು.

ನೀವು ಯಾರು? ಏನು ಮಾಡುತ್ತಿದ್ದೀರಿ? ಎಂದು ವಿಚಾರಿಸಿದರು. ನಾವು ಎಬಿವಿಪಿ ಕಾರ್ಯಕರ್ತರು, ಇಲ್ಲಿ ವ್ಯಕ್ತಿತ್ವ ವಿಕಸನ ಶಿಬಿರದ ಕರಪತ್ರ ಹಂಚುತ್ತಿದ್ದೇವೆ ಎಂದು ಹೇಳಿದಾಗ ನಾಗಭೂಷಣರವರ ಬೆಂಬಲಿಗರೊಬ್ಬರು ಏಕಾಏಕಿ ತಲೆಯಿಂದ ನನ್ನ ಮುಖಕ್ಕೆ ಡಿಚ್ಚಿ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಶರತ್‌ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ