ಆ್ಯಪ್ನಗರ

ಆಫ್ರಿಕಾ: ಮೂವರು ಹಕ್ಕಿಪಿಕ್ಕಿಗಳ ಸೆರೆ

ಆಯುರ್ವೇದ ಔಷಧಗಳ ಮಾರಾಟಕ್ಕಾಗಿ ದಕ್ಷಿಣ ಆಫ್ರಿಕಾದ ಮೊಜಾಂಬಿಕ್‌ ದೇಶಕ್ಕೆ ತೆರಳಿದ್ದ ತಾಲೂಕಿನ ಹಕ್ಕಿಪಿಕ್ಕಿ ಜನಾಂಗದ ಮೂವರು ವೀಸಾ ಅವಧಿ ಮುಗಿದ ನಂತರವೂ ಅಲ್ಲಿಯೇ ಉಳಿದುಕೊಳ್ಳುವ ಯತ್ನ ಮಾಡಿ ಸಿಕ್ಕಿ ಬಿದ್ದಿದ್ದು, ಕಳೆದ ಮೂರು ತಿಂಗಳಿನಿಂದ ಅಲ್ಲಿನ ಪೊಲೀಸರ ವಶದಲ್ಲಿದ್ದಾರೆ.

Vijaya Karnataka 7 Oct 2018, 5:00 am
ಔಷಧ ಮಾರಾಟಕ್ಕೆ ತೆರಳಿದ್ದವರು ಅವಧಿ ಮೀರಿ ವಾಸ್ತವ್ಯ
Vijaya Karnataka Web africa three hakkipikkies captive
ಆಫ್ರಿಕಾ: ಮೂವರು ಹಕ್ಕಿಪಿಕ್ಕಿಗಳ ಸೆರೆ


ಹುಣಸೂರು: ಆಯುರ್ವೇದ ಔಷಧಗಳ ಮಾರಾಟಕ್ಕಾಗಿ ದಕ್ಷಿಣ ಆಫ್ರಿಕಾದ ಮೊಜಾಂಬಿಕ್‌ ದೇಶಕ್ಕೆ ತೆರಳಿದ್ದ ತಾಲೂಕಿನ ಹಕ್ಕಿಪಿಕ್ಕಿ ಜನಾಂಗದ ಮೂವರು ವೀಸಾ ಅವಧಿ ಮುಗಿದ ನಂತರವೂ ಅಲ್ಲಿಯೇ ಉಳಿದುಕೊಳ್ಳುವ ಯತ್ನ ಮಾಡಿ ಸಿಕ್ಕಿ ಬಿದ್ದಿದ್ದು, ಕಳೆದ ಮೂರು ತಿಂಗಳಿನಿಂದ ಅಲ್ಲಿನ ಪೊಲೀಸರ ವಶದಲ್ಲಿದ್ದಾರೆ.

ಹುಣಸೂರು ತಾಲೂಕಿನ ಒಂದನೇ ಪಕ್ಷಿರಾಜಪುರದ ಮಧುಚಂದ್ರನ್‌, ಸಿಜ್ಜು ಮತ್ತು ಪ್ರವೀಣ್‌ ಬಂಧಿತರು. ಅವರೀಗ ಮೊಜಾಂಬಿಕ್‌ ದೇಶದ ನಂಫುಲಾ ನಗರದ police ವಶದಲ್ಲಿದ್ದಾರೆ ಎಂದು ನಗರದ ವೃತ್ತ ನಿರೀಕ್ಷ ಕ ಕೆ.ಸಿ. ಪೂವಯ್ಯ ತಿಳಿಸಿದ್ದಾರೆ.

ಇಲ್ಲಿನ ಅಲೆಮಾರಿಗಳಾದ ಪಕ್ಷಿರಾಜಪುರ ಹಕ್ಕಿಪಿಕ್ಕಿ ಸಮುದಾಯದ 9 ಮಹಿಳೆಯರೂ ಸೇರಿದಂತೆ 16 ಮಂದಿ ಆಯುರ್ವೇದೀಯ ಔಷಧಗಳ ಮಾರಾಟಕ್ಕಾಗಿ ಮೊಜಾಂಬಿಕ್‌ ದೇಶಕ್ಕೆ ತೆರಳಿದ್ದರು. ಮೂರು ತಿಂಗಳ ಅವಧಿ ಮುಗಿದ ನಂತರ ತಂಡದ 13 ಮಂದಿ ಸ್ವದೇಶಕ್ಕೆ ಆಗಮಿಸಿದ್ದರು. ಆದರೆ ಈ ಮೂವರು ಮಾತ್ರ ಅಲ್ಲೇ ಮತ್ತಷ್ಟು ದಿನ ಉಳಿದುಕೊಳ್ಳುವ ಉದ್ದೇಶದಿಂದ ವಾಸಕ್ಕೆ ಬೇಕಾದ ಅಗತ್ಯ ದಾಖಲೆಗಳಿಗಾಗಿ ಅಧಿಕಾರಿಗಳಿಗೆ ಲಂಚ ನೀಡಲು ಮುಂದಾಗಿದ್ದಾರೆ. ಈ ಮೂವರು ನಗರದಲ್ಲಿ ಅನುಮಾನಾಸ್ಪದವಾಗಿ ಅಡ್ಡಾಡುತ್ತಿದ್ದುದ್ದನ್ನು ಗಮನಿಸಿದ ಅಲ್ಲಿನ ಪೊಲೀಸರು ವಶಕ್ಕೆ ಪಡೆದು ಅವರ ವೀಸಾ ಮತ್ತು ಪಾಸ್‌ಪೋರ್ಟ್‌ಗಳನ್ನು ಪರಿಶೀಲಿಸಿದಾಗ ಅವಧಿ ಮುಗಿದಿರುವ ಹಾಗೂ ಅವಧಿ ವಿಸ್ತರಣೆಗಾಗಿ ಅಧಿಕಾರಿಗಳಿಗೆ ಲಂಚ ನೀಡುವ ನಡೆಸಿದ್ದ ಪ್ರಯತ್ನ ಬೆಳಕಿಗೆ ಬಂದಿದೆ.

ಲಂಚವೇ ಗಂಭೀರ ಪ್ರಕರಣ: ಅನಧಿಕೃತ ವಾಸಿಗಳಾಗಿರುವ ಮೂವರು ಆ ದೇಶದ ಕಾನೂನಿನಂತೆ ದಂಡ ಶುಲ್ಕ ಪಾವತಿಸಿ ಹಾಗೂ ಮುಚ್ಚಳಿಕ ಬರೆದುಕೊಟ್ಟು ಬರಬಹುದಿತ್ತು. ಆದರೆ, ಈ ಪ್ರಕರಣದಲ್ಲಿ ಮೂವರು ಅಲ್ಲೇ ಉಳಿದುಕೊಳ್ಳಲು ಅಧಿಕಾರಿಗಳಿಗೆ ಲಂಚ ನೀಡಲು ಮುಂದಾಗಿರುವುದು ಪ್ರಕರಣ ಗಂಭೀರತೆ ಪಡೆದುಕೊಂಡಿದೆ. ಮೂವರ ಪೈಕಿ ಸಿಜ್ಜು ಮತ್ತು ಆತನ ಪತ್ನಿ ಕಳೆದ ವರ್ಷ ಹೆಚ್ಚಿನ ಅವಧಿಗಾಗಿ ಅಲ್ಲೇ ಉಳಿದುಕೊಳ್ಳಲು ಇಂಥÜಹದೇ ದಾರಿ ಅನುಸರಿಸಿದ್ದರೆನ್ನಲಾಗಿದೆ.

ಈ ಮೂವರು ಜೈಲುಪಾಲಾಗಿರುವ ವಿಷಯ ಭಾರತೀಯ ಹೈಕಮಿಷನ್‌ರ್‌ ಕಚೇರಿ ನಗರ ಪೊಲೀಸರಿಗೆ ಮಾಹಿತಿ ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ