ಆ್ಯಪ್ನಗರ

ಮೈಸೂರು: ಕ್ವಾರೆಂಟೈನ್‌ ಮನೆಗಳ ಕಸ ಸಂಗ್ರಹ ಮಾಡೋ ಪೌರ ಕಾರ್ಮಿಕರಿಗೆ ಹೊಸ ಡ್ರೆಸ್‌!

ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಸುರಕ್ಷತೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದು, ಕ್ವಾರೆಂಟೈನ್‌ ನಲ್ಲಿರುವವರ ಮನೆಗಳಲ್ಲಿನ ಕಸ ಪಡೆಯುವ ಪೌರ ಕಾರ್ಮಿಕರಿಗೆ ಹೊಸ ಡ್ರೆಸ್ ವಿತರಿಸಲಾಗಿದೆ.

Vijaya Karnataka Web 1 Apr 2020, 4:50 pm
ಮೈಸೂರು: ಮಹಾಮಾರಿ ಕೊರೊನಾ ಜಿಲ್ಲೆಯಲ್ಲಿ ಕರಾಳ ಇತಿಹಾಸವನ್ನೇ ಸೃಷ್ಟಿಸುತ್ತಿದೆ. ಸದ್ಯ 17 ಜನರು ಈ ವೈರಾಣು ಸೋಂಕಿಗೆ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮಧ್ಯೆ ದಿನದಿಂದ ದಿನಕ್ಕೆ ಕ್ವಾರೆಂಟೈನ್‌ ನಲ್ಲಿರುವವರ ಸಂಖ್ಯೆಯೂ ಹೆಚ್ಚುತ್ತಿದೆ.
Vijaya Karnataka Web ಮೈಸೂರು


ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಹೆಚ್ಚಿನ ನಿಗಾ ವಹಿಸಿ ಪೂರ್ವಭಾವಿ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಜನರು ಕ್ವಾರೆಂಟೈನ್ ನಲ್ಲಿದ್ದು ಅವರ ಮನೆಗಳಲ್ಲಿನ ಕಸ ಪಡೆಯುವ ಪೌರ ಕಾರ್ಮಿಕರಿಗೆ ಹೊಸ ಡ್ರೆಸ್ ವಿತರಿಸಲಾಗಿದೆ.

ಹೌದು, ಕ್ವಾರೆಂಟೈನ್ ಮನೆಗಳಲ್ಲಿನ ಕಸ ಪಡೆಯುವ ಪೌರ ಕಾರ್ಮಿಕರಿಗಾಗಿಯೇ ಹೊಸ ತೆರನಾದ ಡ್ರೆಸ್ ಖರೀದಿಸಿದ್ದು, ಕ್ವಾರೆಂಟೈನ್ ಮನೆಗಳಿಗಾಗಿಯೇ ಈ ಹೊಸ ಡ್ರೆಸ್ ನೀಡಲಾಗುತ್ತಿದೆ. ಅವರ ಮನೆಗಳಿಲ್ಲಿ ಕಸ ಪಡೆಯಲು ಹಾಗೂ ಮನೆಗಳಿಗೆ ಔಷಧಿ ಸಿಂಪಡಿಸಲು ಈ ಡ್ರೆಸ್ ಬಳಕೆ ಮಾಡಲಾಗುತ್ತಿದೆ. ಈ ಬಟ್ಟೆಯನ್ನು ಮೈಸೂರಿನ ಎಲ್ಲಾ ಜೋನ್ ಗಳಲ್ಲಿ ಇಬ್ಬಿಬ್ಬರಿಗೆಬಳಕೆ ಮಾಡಲು ತಿಳಿಸಲಾಗಿದ್ದು, ಸುರಕ್ಷಿತ ಉಡುಪುಗಳನ್ನು ಇಂದು ಪಾಲಿಕೆ ಆಯುಕ್ತರಾದ ಗುರುದತ್ ಹೆಗಡೆ ಪೌರ ಕಾರ್ಮಿಕರಿಗೆ ವಿತರಿಸಿದರು.

ಆಂಧ್ರದಲ್ಲಿ ಯಮಧರ್ಮ- ಚಿತ್ರಗುಪ್ತರಿಂದಲೇ ಕೊರೊನಾ ಜಾಗೃತಿ!

ಇದವರೆಗೂ ಜಿಲ್ಲೆಯಲ್ಲಿ 2619 ಜನರು ಕ್ವಾರೆಂಟೈನ್‌ ನಲ್ಲಿದ್ದು, ಅದರಲ್ಲಿ 14 ದಿನಗಳ ತಮ್ಮ ಕ್ವಾರೆಂಟೈನ್‌ ಅವಧಿ ಪೂರ್ಣಗೊಳಿಸಿದವರು 967, ಇನ್ನು ಕ್ವಾರೆಂಟೈನ್‌ ಅವಧಿಯಲ್ಲಿರುವವರು 1635 ಜನರಿದ್ದಾರೆ. ಇದುವರೆಗೂ ಜಿಲ್ಲಾಡಳಿತದಿಂದ 130 ಸ್ಯಾಂಪಲ್‌ ಕಳುಹಿಸಲಾಗಿದ್ದು ಅದರಲ್ಲಿ 113 ನೆಗೆಟಿವ್, 17 ಪಾಸಿಟಿವ್‌ ಕೇಸ್‌ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ