ಆ್ಯಪ್ನಗರ

ರಂಜಾನ್‌ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡುವಂತೆ ಮೈಸೂರು ಮೇಯರ್‌ ಮನವಿ!

ಲಾಕ್ಡೌನ್‌ ಹಿಇನ್ನೆಲೆಯಲ್ಲಿ ಎಲ್ಲಾ ಸಭೆ, ಸಮಾರಂಭ, ಚರ್ಚ್‌, ದೇಗುಲ, ಮಸೀದಿ ತೆರೆಯಲು ನಿಷೇಧಿಸಲಾಗಿದೆ. ಆದರೆ ರಂಜಾನ್‌ ಹಬ್ಬದಂದು ದಯವಿಟ್ಟು ಮಸೀದಿ ತೆಗೆಯಿರಿ ಎಂದು ಮೈಸೂರು ಮೇಯರ್‌ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Vijaya Karnataka Web 23 May 2020, 4:57 pm
ಮೈಸೂರು: ದೇಶದೆಲ್ಲೆಡೆ ಕೊರೊನಾ ಭೀತಿ ಜನರನ್ನು ಬೆಚ್ಚಿಬೀಳಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹ ಕೊರೊನಾ ಭೀತಿಯಿಂದಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಅಲ್ಲದೇ ಎಲ್ಲಾ ರೀತಿ ಸಭೆ, ಸಮಾರಂಭಗಳಿಗೂ ಕಡಿವಾಣ ಹಾಕಿದೆ. ಚರ್ಚ್‌, ದೇಗುಲ, ಮಸೀದಿ ಎಲ್ಲಿಯೂ ಜನರು ಸೇರದಂತೆ ಕಟ್ಟಾಜ್ಞೆಯನ್ನು ಸಹ ಹೊರಡಿಸಿದೆ.
Vijaya Karnataka Web mass namaz


ಆದರೆ ತಮ್ಮ ಹಬ್ಬ ಮಾಡಬೇಕು ದಯವಿಟ್ಟು ಮಸೀದಿ ತೆಗೆಯಿರಿ ಎಂದು ಮೈಸೂರು ಮೇಯರ್‌ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಹೌದು, ಎಲ್ಲರೂ ತಿಳಿದಿರುವ ಹಾಗೆ ಸಾರ್ವಜನಿಕ ಅಂತರ ಕಾಪಾಡಿದರೆ ಮಾತ್ರ ಮಾರಕ ಕೊರೊನಾದಿಂದ ಮುಕ್ತಿ ಸಿಗಬಹುದೆಂಬ ಅರಿವಿದ್ದರೂ ಮೈಸೂರು ಪಾಲಿಕೆ ಮೇಯರ್‌ ತಸ್ನಿಂ ಅವರು ರಂಜಾನ್‌ ಹಿನ್ನೆಲೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಯಡಿಯೂರಪ್ಪ ಅಧಿಕಾರಾವಧಿ ಇನ್ನು 6 ತಿಂಗಳು ಮಾತ್ರ: ಭವಿಷ್ಯ ನುಡಿದ ಕೆಪಿಸಿಸಿ ವಕ್ತಾರ!

ಈ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ತಿಳಿದ ಹಾಗೆ ಸೋಮವಾರ ರಂಜಾನ್‌ ಹಬ್ಬ ಇದೆ. ದಯವಿಟ್ಟು ಈ ದಿನ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಬೇಕು. ಅಲ್ಲದೇ ಮೈಸೂರಿನ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಆಯಾ ಭಾಗದ ಮಸೀದಿಗಳಲ್ಲಿ ಪ್ರಾರ್ಥನೆಗೆ ಅನುಮತಿ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ನಾವು ಕಾನೂನಿನಡಿಯಲ್ಲಿ ಏನೆಲ್ಲಾ ಮುಂಜಾಗ್ರತೆ ಕೈಗೊಳ್ಳಬೇಕೋ ಅದನ್ನೆಲ್ಲಾ ಪಾಲಿಸುತ್ತೇವೆ. ಆದ ಕಾರಣ ದಯವಿಟ್ಟು ಪ್ರಾರ್ಥನೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.


ಒಂದೆಡೆ ದೇಶವೇ ಮಾರಕ ಕೊರೊನಾ ಭೀತಿಯಲ್ಲಿ ತತ್ತರಿಸುತ್ತಿರುವಾಗ ಎಲ್ಲವನ್ನು ಬದಿಗಿಟ್ಟು ಪ್ರಾರ್ಥನೆಗಾಗಿ ಅವಕಾಶ ಮಾಡಿಕೊಡಿ ಎಂದು ಕೇಳುತ್ತಿರುವ ಮೇಯರ್‌ ನಿಲುವಿಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ