ಆ್ಯಪ್ನಗರ

ಮೈಸೂರು ದಸರಾದಲ್ಲಿ ಸರ್ಜಿಕಲ್ ಸ್ಟ್ರೈಕ್!

ಭಾರತೀಯ ವಾಯು ಸೇನೆ ವತಿಯಿಂದ ಭಾನುವಾರ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ ಏರ್‌ ಶೋ ಭಾಗವಾಗಿ ಆಯೋಜನೆಯಾದ ಸರ್ಜಿಕಲ್‌ ಸ್ಟ್ರೈಕ್‌ನ ಅಣಕು ಪ್ರದರ್ಶನದ ನೋಟವಿದು.

Vijaya Karnataka 15 Oct 2018, 7:28 am
ಮೈಸೂರು : ಪಂಜಿನ ಕವಾಯಿತು ಮೈದಾನದಲ್ಲಿ ವಾಯು ಪಡೆಯ ಯುದ್ಧ ವಿಮಾನ ಬಂದು ನಿಂತಿತು. ಇದರೊಳಗಿನಿಂದ ಬಂದೂಕುಧಾರಿ ಯೋಧರು ಹಗ್ಗ ಹಿಡಿದು ಧರೆಗಿಳಿದು ಸರ್ಜಿಕಲ್‌ ಸ್ಟ್ರೈಕ್‌ನ ತದ್ರೂಪ ಪ್ರದರ್ಶಿಸಿ ನೆರೆದಿದ್ದವರನ್ನು ನಿಬ್ಬೆರಗಾಗಿಸಿದರು.
Vijaya Karnataka Web ಮೈಸೂರು ದಸರಾದಲ್ಲಿ ಸರ್ಜಿಕಲ್ ಸ್ಟ್ರೈಕ್!


ಭಾರತೀಯ ವಾಯು ಸೇನೆ ವತಿಯಿಂದ ಭಾನುವಾರ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ ಏರ್‌ ಶೋ ಭಾಗವಾಗಿ ಆಯೋಜನೆಯಾದ ಸರ್ಜಿಕಲ್‌ ಸ್ಟ್ರೈಕ್‌ನ ಅಣಕು ಪ್ರದರ್ಶನದ ನೋಟವಿದು.

ಸಾವಿರಾರು ಮಂದಿ ನೆರೆದಿದ್ದ ಕಾರ್ಯಕ್ರಮದಲ್ಲಿ ಚಾಮುಂಡಿ ಬೆಟ್ಟದ ಕಡೆಯಿಂದ ಯುದ್ಧ ವಿಮಾನವೊಂದು ಆಗಮಿಸಿ 115 ಅಡಿ ಎತ್ತರದಿಂದ ಪುಷ್ಪವೃಷ್ಟಿ ಮಾಡಿತು. ಮತ್ತೊಮ್ಮೆ ಅದೇ ವಿಮಾನ ಆಗಮಿಸಿತು. ಮೈದಾನದ ಮೇಲ್ಭಾಗದಲ್ಲಿ ತಟಸ್ಥವಾಗಿ ನಿಂತ ವಿಮಾನದಿಂದ ಮೊದಲಿಗೆ ಹಗ್ಗಗಳು ಕೆಧಿಳಧಿಗಿಧಿಳಿದು ಭೂಮಿಯನ್ನು ಸ್ಪರ್ಶಿಸಿದವು. ನೋಡ ನೋಡುತ್ತಿದ್ದಂತೆ ಗರುಡ ಕಮಾಂಡೋ ತಂಡದ ಯೋಧರು ಒಬ್ಬರಾದ ನಂತರ ಒಬ್ಬರಂತೆ ಹಗ್ಗ ಹಿಡಿದು ಕೆಳಗೆ ಇಳಿಯಲು ಆರಂಭಿಸಿದರು. ಒಟ್ಟು 13 ಯೋಧರು ಹಗ್ಗದ ಮೂಲಕ 50 ಅಡಿ ಎತ್ತರದಿಂದ ಅಂಗಳಕ್ಕೆ ಇಳಿದರು.

ಈ ದೃಶ್ಯವನ್ನು ಕಂಡ ಪ್ರೇಕ್ಷಕರು ಯೋಧರ ಸಾಹಸವನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದರು. ಭಾರತೀಯ ಸೇನೆಯಿಂದ ಸರ್ಜಿಕಲ್‌ ಸ್ಟ್ರೈಕ್‌ ನಡೆದ ಬಗ್ಗೆ ಮಾಧ್ಯಮಗಳಿಂದ ತಿಳಿದುಕೊಂಡಿದ್ದ ಜನತೆ ನೇರವಾಗಿ ತಮ್ಮ ಕಣ್ಮುಂದೆಯೆ ಆ ಸನ್ನಿವೇಶವನ್ನು ನೋಡಿದರು. ಬಹಳಷ್ಟು ಮಂದಿ ಸೈನಿಕರು ನಮಗಾಗಿ ಎಷ್ಟು ಕಷ್ಟಪಡುತ್ತಾರೆ ಎಂದು ಗುನುಗಿಧಿದರು.

ಸ್ವಲ್ಪ ಹೊತ್ತಿನ ಬಳಿಕ ಕೆಲ ಯೋಧರು ಪ್ಯಾರಾಚೂಟ್‌ನಲ್ಲಿ ಆಕಾಶದಿಂದ ಒಬ್ಬರಾದ ನಂತರ ಒಬ್ಬರಂತೆ ಇಳಿದು ಬರಲಾರಂಭಿಸಿದರು. ಬಹಳಷ್ಟು ಜನರಿಗೆ ಯೋಧರು ಎಲ್ಲಿಂದ ಹಾರಿ ಬರುತ್ತಿದ್ದಾರೆ ಎಂಬ ಅರಿವಿರಲಿಲ್ಲ. ಏರ್‌ಡೆವಿಲ್ಸ್‌ ಮತ್ತು ಆಕಾಶಗಂಗಾ ತಂಡದ ಯೋಧರು ಸ್ಕೈಡೈವಿಂಗ್‌ ಪ್ರದರ್ಶಿಸುಧಿತ್ತಿದ್ದು, ಯುದ್ಧ ವಿಮಾನದಿಂದ ಸ್ಕೈಡೈವಿಂಗ್‌ ಮಾಡಿ ಆಕಾಶದಿಂದ ಹಾರಿ ಬರುತ್ತಿದ್ದಾರೆ ಎಂದು ವೇದಿಕೆಯಲ್ಲಿ ಘೋಷಣೆ ಮಾಡುತ್ತಿದ್ದಂತೆ ನೆರೆದಿದ್ದವರು ಯೋಧರ ಸಾಹಸವನ್ನು ಮತ್ತೊಮ್ಮೆ ಕಂಡು ರೋಮಾಂಚನಗೊಂಡರು.

ಕೊಧಿನೆಧಿಗೆ ಕೇಸರಿ, ಬಿಳಿ, ಹಸಿರು ಬಣ್ಣದ ಪ್ಯಾರಾಚೂಟ್‌ನಲ್ಲಿ ಇಳಿದು ಬಂದ ಯೋಧರು ರಾಷ್ಟ್ರಧ್ವಜವನ್ನು ಹಿಡಿದು ಆಕಾಶದಿಂದ ಭೂಮಿಗೆ ಇಳಿಯುತ್ತಿದ್ದಂತೆ ದೇಶಭಕ್ತಿಯ ಘೋಷಣೆಗಳು ಮೊಧಿಳಧಿಗಿದವು. ಗಜಾನಂದ್‌ ಯಾದವ್‌ ನೇತೃತ್ವದ ತಂಡದ ಯೋಧರು ಅಂದಾಜು 8000 ಅಡಿ ಎತ್ತರದಿಂದ ಸ್ಕೈ ಡೈವಿಂಗ್‌ ಮಾಡುವ ಮೂಲಕ ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ