ಆ್ಯಪ್ನಗರ

ಮೈಸೂರಿನಲ್ಲಿ ಅಕ್ಕಮಹಾದೇವಿ ಪ್ರತಿಮೆ ಅನಾವರಣ

ಅಕ್ಕಮಹಾದೇವಿ ಕನ್ನಡದ ಮೊದಲ ಕವಯಿತ್ರಿ ಹಾಗೂ ಮೊದಲ ವಚನ ಸಾಹಿತ್ಯದ ಪ್ರಮುಖರಲ್ಲೊಬ್ಬರು. ಸಣ್ಣ ವಯಸ್ಸಿನಲ್ಲಿಯೇ ಲೌಕಿಕ ಜೀವನವನ್ನು ತ್ಯಜಿಸಿದ ಮೇರು ವ್ಯಕ್ತಿತ್ವ ಅವರದ್ದಾಗಿತ್ತು ಎಂದು ಯಡಿಯೂರಪ್ಪ, ಎಸ್‌ಟಿ ಸೋಮಶೇಖರ್‌ ತಿಳಿಸಿದರು.

Vijaya Karnataka Web 23 Jan 2021, 1:51 pm
ಮೈಸೂರು: ನಗರದ ಜೆ.ಪಿ.ನಗರದ ಶರಣ ಭವನದಲ್ಲಿ ಅಕ್ಕಮಹಾದೇವಿ ಪ್ರತಿಮೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಶನಿವಾರ ಅನಾವರಣಗೊಳಿಸಿದರು. ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳ ಸಾನಿಧ್ಯದಲ್ಲಿ ಪ್ರತಿಮೆ ಅನಾವರಣಗೊಳಿಸಲಾಯಿತು.
Vijaya Karnataka Web akkamahadevi statue unveiled in jp nagar mysore
ಮೈಸೂರಿನಲ್ಲಿ ಅಕ್ಕಮಹಾದೇವಿ ಪ್ರತಿಮೆ ಅನಾವರಣ


ಪ್ರತಿಮೆ ಅನಾವರಣಗೊಳಿಸಿದ ನಂತರ ಸಿಎಂ ಯಡಿಯೂರಪ್ಪ ಮಾತನಾಡಿ,ಅಕ್ಕಮಹಾದೇವಿ ಕನ್ನಡದ ಮೊದಲ ಕವಯಿತ್ರಿ ಹಾಗೂ ಮೊದಲ ವಚನ ಸಾಹಿತ್ಯದ ಪ್ರಮುಖರಲ್ಲೊಬ್ಬರು. ಸಣ್ಣ ವಯಸ್ಸಿನಲ್ಲಿಯೇ ಲೌಕಿಕ ಜೀವನವನ್ನು ತ್ಯಜಿಸಿದ ಮೇರು ವ್ಯಕ್ತಿತ್ವ ಅವರದ್ದಾಗಿತ್ತು. ಅಕ್ಕರವರು ತಮ್ಮ ವಿಶಿಷ್ಟ ಸಂವೇದನೆ ಮೂಲಕ ಗಮನ ಸೆಳೆದಿದ್ದಾರೆ. ಕಲ್ಯಾಣ ಕ್ರಾಂತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ರಚಿಸಿದ ವಚನಗಳು ಕನ್ನಡ ಸಾಹಿತ್ಯದ ಮೌಲಿಕ ಬರವಣಿಗೆಯಾಗಿದೆ. ಮನುಷ್ಯನ ಆತ್ಮಕಲ್ಯಾಣ ಸಾಧಿಸಲು ಅಂತರಾಂಗ, ಬಹಿರಂಗ ಶುದ್ಧವಾಗಿರಬೇಕು ಎಂಬುದು ಅಕ್ಕನ ಆಶಯವಾಗಿತ್ತು. ನಾಡಿನಲ್ಲಿ ಅನೇಕ ಶರಣ-ಶರಣೆಯರ ಅನೇಕ ಸ್ಥಳಗಳಿದೆ. ಅದನ್ನು ಯುವಕರು ಉಳಿಸುವ ಕೆಲಸ ಮಾಡಬೇಕು. ಸರ್ಕಾರಕ್ಕೆ ಅದರ ನಿಲುವಿಗೆ ಕೈ ಜೋಡಿಸಲಿದೆ ಎಂದರು.


ಈ ವೇಳೆ ಮಾತನಾಡಿದ ಸಚಿವ ಎಸ್‌ ಟಿ ಸೋಮಶೇಖರ್‌ , ಅಕ್ಕಮಹಾದೇವಿ ಒಬ್ಬರು ಆದರ್ಶ ಮಹಿಳೆ. ಹೆಣ್ಣು ಯಾರಿಗೂ ಕಡಿಮೆ ಇಲ್ಲವೆಂಬುದನ್ನು ಆ ಕಾಲದಲ್ಲಿಯೇ ತೋರಿಸಿಕೊಟ್ಟವರು. ಅವರು ಕನ್ನಡದ ಮೊದಲ ಕವಯತ್ರಿ. ಸಮಾನತೆ ಬಗ್ಗೆ ಧ್ವನಿಯೆತ್ತಿದವರಾಗಿದ್ದು, ಮಹಿಳಾ ಚಳವಳಿಯನ್ನು ಹುಟ್ಟುಹಾಕಿದವರು. ಅಕ್ಕಮಹಾದೇವಿಯವರ ಪ್ರತಿಮೆಯನ್ನು ಅನಾವರಣ ಮಾಡುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದರು.

ಈ ಸಂದರ್ಭ ಸಂಸದ ಪ್ರತಾಪಸಿಂಹ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಜಿ.ಟಿ. ದೇವೆಗೌಡ,ತನ್ವಿರ್ ಸೇಠ್ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ