ಭಗವಂತನ ಸೇವೆಯಿಂದ ಸದಾ ಸುಖಿ: ಸುತ್ತೂರು ಶ್ರೀ
ಭಗವಂತನ ಸೇವೆ ಮಾಡುವ ವ್ಯಕ್ತಿಯು ಸದಾ ಸಂತೋಷದಿಂದ ಇರುತ್ತಾನೆ ಎಂದು ಸುತ್ತೂರು ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
Vijaya Karnataka 19 Oct 2019, 5:00 am
ಮೈಸೂರು: ಭಗವಂತನ ಸೇವೆ ಮಾಡುವ ವ್ಯಕ್ತಿಯು ಸದಾ ಸಂತೋಷದಿಂದ ಇರುತ್ತಾನೆ ಎಂದು ಸುತ್ತೂರು ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ ಜಗದ್ಗುರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 104ನೇ ಜಯಂತಿ ಮಹೋತ್ಸವ ಅಂಗವಾಗಿ ಜೆಎಸ್ಎಸ್ ಮಹಾವಿದ್ಯಾಪೀಠ ಹಾಗೂ ಇತರೆ ಅಂಗಸಂಸ್ಥೆಗಳ ನಿವೃತ್ತ ನೌಕರರನ್ನು ಅಭಿನಂದಿಸಿ ಮಾತನಾಡಿದರು.
''ಕರ್ಮಣ್ಯೇವಾಧಿಕಾರಸ್ತೆ ಮಾ ಫಲೇಷು ಕದಾಚನ ಎಂದು ಭಗವದ್ಗೀತೆಯಲ್ಲಿಹೇಳಿದಂತೆ ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಬೇಕು. ಶಂಕರಾಚಾರ್ಯರು ಕೆಲಸವೆಲ್ಲಭಗವಂತನ ಸೇವೆ ಎಂದಿದ್ದಾರೆ. ಬಸವಣ್ಣನವರು ಕೆಲಸ ಮಾಡುತ್ತಿರಬೇಕು. ಆದರೆ, ಮಾಡದಂತಿರ ಬೇಕು. ತಾನೇ ಎಲ್ಲವನ್ನೂ ಮಾಡುವವನು ಎಂಬ ಭಾವನೆ ಬಿಟ್ಟು ಸೇವಾ ಕಾರ್ಯದಲ್ಲಿತೊಡಗಿಸಿಕೊಳ್ಳಬೇಕು ಎಂಬ ಸಂದೇಶದಂತೆ ನಾವೆಲ್ಲರೂ ನಡೆಯಬೇಕು,'' ಎಂದು ಆಶಿಸಿದರು.
ನಿವೃತ್ತ ಪ್ರಾಂಶುಪಾಲರಾದ ಸಿ.ಎಸ್.ಶಿವಸ್ವಾಮಿ ಅವರು ಸುತ್ತೂರು ಶಾಲೆಯ ಮಕ್ಕಳ ವಿದ್ಯಾಭ್ಯಾಸ ಕ್ಕಾಗಿ 55,555 ರೂ. ಕೊಡುಗೆ ನೀಡಿದರು. ನಿವೃತ್ತ ಪ್ರಾಧ್ಯಾಪಕರಾದ ಕೆ.ವೀರಣ್ಣ, ಡಾ.ಬಿ.ದೊರೆಸ್ವಾಮಿ, ಡಾ.ಮಾಧುರಿ ಕುಲಕರ್ಣಿ, ಡಾ.ಕೆ.ಟಿ.ಶ್ರೀಲತಾ ಸೇರಿದಂತೆ ಇತರರು ಹಾಜರಿದ್ದರು.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ ಜಗದ್ಗುರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 104ನೇ ಜಯಂತಿ ಮಹೋತ್ಸವ ಅಂಗವಾಗಿ ಜೆಎಸ್ಎಸ್ ಮಹಾವಿದ್ಯಾಪೀಠ ಹಾಗೂ ಇತರೆ ಅಂಗಸಂಸ್ಥೆಗಳ ನಿವೃತ್ತ ನೌಕರರನ್ನು ಅಭಿನಂದಿಸಿ ಮಾತನಾಡಿದರು.
''ಕರ್ಮಣ್ಯೇವಾಧಿಕಾರಸ್ತೆ ಮಾ ಫಲೇಷು ಕದಾಚನ ಎಂದು ಭಗವದ್ಗೀತೆಯಲ್ಲಿಹೇಳಿದಂತೆ ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಬೇಕು. ಶಂಕರಾಚಾರ್ಯರು ಕೆಲಸವೆಲ್ಲಭಗವಂತನ ಸೇವೆ ಎಂದಿದ್ದಾರೆ. ಬಸವಣ್ಣನವರು ಕೆಲಸ ಮಾಡುತ್ತಿರಬೇಕು. ಆದರೆ, ಮಾಡದಂತಿರ ಬೇಕು. ತಾನೇ ಎಲ್ಲವನ್ನೂ ಮಾಡುವವನು ಎಂಬ ಭಾವನೆ ಬಿಟ್ಟು ಸೇವಾ ಕಾರ್ಯದಲ್ಲಿತೊಡಗಿಸಿಕೊಳ್ಳಬೇಕು ಎಂಬ ಸಂದೇಶದಂತೆ ನಾವೆಲ್ಲರೂ ನಡೆಯಬೇಕು,'' ಎಂದು ಆಶಿಸಿದರು.
ನಿವೃತ್ತ ಪ್ರಾಂಶುಪಾಲರಾದ ಸಿ.ಎಸ್.ಶಿವಸ್ವಾಮಿ ಅವರು ಸುತ್ತೂರು ಶಾಲೆಯ ಮಕ್ಕಳ ವಿದ್ಯಾಭ್ಯಾಸ ಕ್ಕಾಗಿ 55,555 ರೂ. ಕೊಡುಗೆ ನೀಡಿದರು. ನಿವೃತ್ತ ಪ್ರಾಧ್ಯಾಪಕರಾದ ಕೆ.ವೀರಣ್ಣ, ಡಾ.ಬಿ.ದೊರೆಸ್ವಾಮಿ, ಡಾ.ಮಾಧುರಿ ಕುಲಕರ್ಣಿ, ಡಾ.ಕೆ.ಟಿ.ಶ್ರೀಲತಾ ಸೇರಿದಂತೆ ಇತರರು ಹಾಜರಿದ್ದರು.