ಆ್ಯಪ್ನಗರ

ಮುಡಾದಿಂದ ಮತ್ತೊಂದು ಎಡವಟ್ಟು

'ಕೊಟ್ಟವನು ಕೋಡಂಗಿ ಇಸ್ಕೊಂಡವನು ಈರಭದ್ರ' ಎಂಬಂತೆ ಆಗಿದೆ ಬೆಂಗಳೂರಿನ ಸಾಫ್ಟ್‌ವೇರ್‌ ಎಂಜಿನಿಯರ್‌ನ ಸ್ಥಿತಿ.

Vijaya Karnataka 27 Jun 2019, 5:00 am
ಹರೀಶ್‌ ಎಲ್‌.ತಲಕಾಡು ಮೈಸೂರು
Vijaya Karnataka Web another awkwardness from muda
ಮುಡಾದಿಂದ ಮತ್ತೊಂದು ಎಡವಟ್ಟು


'ಕೊಟ್ಟವನು ಕೋಡಂಗಿ ಇಸ್ಕೊಂಡವನು ಈರಭದ್ರ' ಎಂಬಂತೆ ಆಗಿದೆ ಬೆಂಗಳೂರಿನ ಸಾಫ್ಟ್‌ವೇರ್‌ ಎಂಜಿನಿಯರ್‌ನ ಸ್ಥಿತಿ.

ಮೈಸೂರಿನಲ್ಲಿ ಸ್ವಂತ ಮನೆ ಮಾಡಬೇಕೆಂಬ ಆಸೆಯಿಂದ ಮುಡಾ ನಿವೇಶನವನ್ನು ಇ-ಹರಾಜಿನ ಮೂಲಕ ಖರೀದಿಸಿದ್ದ ಟೆಕ್ಕಿಯ ಕನಸೀಗ ಭಗ್ನಗೊಂಡಿದೆ. ಭೂ ಸ್ವಾಧೀನಪಡಿಸಿಕೊಳ್ಳದ ಜಾಗವನ್ನು ಮುಡಾ ಹರಾಜು ಮೂಲಕ ಸಾಫ್ಟ್‌ವೇರ್‌ ಎಂಜಿನಿಯರ್‌ಗೆ ಮಾರಿ ಎಡವಟ್ಟು ಮಾಡಿದೆ.

ಮೈಸೂರಿನ ಬೆಳವಾಡಿ ನಿವಾಸಿ ಎಚ್‌.ಆರ್‌.ಪ್ರಶಾಂತ್‌ ಅವರಿಗೆ 19*25 ಅಳತೆಯ ನಿವೇಶನವನ್ನು ಸ್ವಾಧೀನಪಡಿಸಿಕೊಳ್ಳದೆ ಹರಾಜು ಮಾಡಿದೆ. ವರ್ಷದ ಹಿಂದೆ ಈ ಹರಾಜು ಪ್ರಕ್ರಿಯೆ ನಡೆದಿದ್ದು, ಈಗ ಹರಾಜಿನ ಮೂಲಕ ಖರೀದಿಸಿದ ಜಾಗದಲ್ಲಿ ಮನೆಕಟ್ಟಲು ಮುಂದಾದಾಗ ನಿವೇಶನ ಮೂಲ ಮಾಲೀಕರು ತಡೆಯೊಡ್ಡಿದ್ದಾರೆ. ''ನಿವೇಶನ ಮಾಲೀಕತ್ವ ನಮ್ಮದು,'' ಎಂದಿದ್ದಾರೆ. ಈ ಬಗ್ಗೆ ಗೊಂದಲಕ್ಕೀಡಾದ ಪ್ರಶಾಂತ್‌, ಮಾಹಿತಿ ಹಕ್ಕು ಕಾಯಿದೆಯಡಿ ತಾನು ಇ-ಹರಾಜು ಮೂಲಕ ಖರೀದಿ ಮಾಡಿದ ನಿವೇಶನ ಯಾವ ಸರ್ವೆ ನಂಬರ್‌ಗೆ ಬರಲಿದೆ ಎಂದು ಮುಡಾ ವಲಯ ಕಚೇರಿ ನಾಲ್ಕರ ವಲಯ ಅಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗೆ ಮಾಹಿತಿ ನೀಡಿದ ವಲಯ ಅಧಿಕಾರಿ ಹರಾಜಿನ ನಿವೇಶನ ಭೂ ಸ್ವಾಧೀನಪಡಿಸಿಕೊಂಡಿಲ್ಲ ಎಂದು ಮಾಹಿತಿ ನೀಡಿದ್ದಾರೆ.

2018ರ ಆಗಸ್ಟ್‌ನಲ್ಲಿ ಹೆಬ್ಬಾಳು 2ನೇ ಹಂತದ ಬಡಾವಣೆಯಲ್ಲಿ ನಿವೇಶನಗಳನ್ನು ಮುಡಾ ಹರಾಜು ಹಾಕಿತ್ತು. ಅದರಲ್ಲಿ 5.80 *6.00 ಮೀ. ಅಳತೆಯ ನಿವೇಶನ ಸಂಖ್ಯೆ 2541/ಎ ಅಳತೆಯ ನಿವೇಶವನ್ನು ಇ -ಹರಾಜಿನಲ್ಲಿ 15 ಲಕ್ಷಕ್ಕೆ ಪ್ರಶಾಂತ್‌ ಖರೀದಿಸಿದ್ದರು. ಎಲ್‌ಐಸಿಯಿಂದ 11 ಲಕ್ಷ ರೂ. ಸಾಲವನ್ನು ಕೂಡ ಪಡೆದಿದ್ದರು. ಮೂಲ ದಾಖಲಾತಿಗಳು, ಖಾತೆ, ಕಂದಾಯ ಸೇರಿದಂತೆ ಎಲ್ಲಾ ದಾಖಲೆಗಳನ್ನು ಪಡೆದ ಬಳಿಕ ನಿವೇಶನದಲ್ಲಿ ಮನೆ ಕಟ್ಟಲು ಹೆಚ್ಚುವರಿ ಸಾಲ ಪಡೆಯಲು ಮುಂದಾದಾಗ ಕೆಲವರು ನಿವೇಶನ ನಮಗೆ ಸೇರಿದ್ದು ಎಂದು ತಕರಾರು ಮಾಡಿದ್ದಾರೆ.

ಗೊಂದಲಕ್ಕೀಡಾದ ಪ್ರಶಾಂತ್‌ ಆರ್‌ಟಿಐ ಮೂಲಕ ಮುಡಾ ವಲಯ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದಾಗ ನಿವೇಶನ ಹೆಬ್ಬಾಳು ಸರ್ವೆ ನಂಬರ್‌ 286/3ರಲ್ಲಿ ಬರಲಿದ್ದು, ಮುಡಾ ಸ್ವಾಧೀನ ಪಡಿಸಿಕೊಂಡಿಲ್ಲ ಎಂಬ ಮಾಹಿತಿ ನೀಡಿದ್ದಾರೆ.

ಮೈಸೂರಿನಲ್ಲಿ ಮನೆ ಮಾಡುವ ಉದ್ದೇಶದಿಂದ ಮುಡಾ ಹರಾಜು ಮಾಡಿದ ನಿವೇಶವನ್ನು ಖರೀದಿಸಿ, ಎಲ್‌ಐಸಿಯಲ್ಲಿ ಸಾಲ ಪಡೆದು ಹಣ ಪಾವತಿಸಲಾಗಿದೆ. ಬಳಿಕ ಖಾತೆ, ಕಂದಾಯ ಮಾಡಿಸಿಕೊಂಡು ಇತ್ತೀಚೆಗೆ ನಿವೇಶನ ಕಟ್ಟಲು ಮುಂದಾದಾಗ ನಿವೇಶನ ಮಾಲೀಕ ಎಂದು ಹೇಳಿಕೊಂಡ ಬಂದ ವ್ಯಕ್ತಿಯೊಬ್ಬರು ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುತ್ತಿಲ್ಲ. ನಿವೇಶನದ ಬಗ್ಗೆ ಮಾಹಿತಿ ಕೇಳಿದರೆ ಹರಾಜು ಮಾಡಿದ ಮುಡಾ ಅಧಿಕಾರಿಗಳೇ ಈಗ ಭೂ ಸ್ವಾಧೀನವಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಈ ರೀತಿ ಆಗಾಗ ತಪ್ಪಾಗುತ್ತದೆ. ಬದಲೀ ನಿವೇಶನ ಕೊಡುತ್ತೇವೆ ಎಂದು ಸಬೂಬು ಹೇಳುತ್ತಿದ್ದಾರೆ.

-ಎಚ್‌.ಆರ್‌.ಪ್ರಶಾಂತ್‌, ನಿವೇಶನ ಕಳೆದುಕೊಂಡ ಟೆಕ್ಕಿ.

ಭೂ ಸ್ವಾಧೀನವಾಗದ ನಿವೇಶನವನ್ನು ಮುಡಾ ಹರಾಜು ಮಾಡಿದೆ ಎಂಬುದರ ಬಗ್ಗೆ ಸಾರ್ವಜನಿಕರೊಬ್ಬರು ದೂರು ನೀಡಿದ್ದು, ಈ ಬಗ್ಗೆ ಕಡತ ಪರಿಶೀಲನೆ ನಡೆಸಲಾಗುವುದು. ಒಂದು ವೇಳೆ ಲೋಪವಾಗಿ ನಿವೇಶನ ಖರೀದಿಸಿದ ವ್ಯಕ್ತಿಗೆ ಅನ್ಯಾಯವಾಗಿದ್ದರೆ ಸರಿಪಡಿಸಲಾಗುವುದು.

-ಕಾಂತರಾಜು, ಆಯುಕ್ತರು. ಮುಡಾ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ