ಆ್ಯಪ್ನಗರ

ಯುವ ದಸರೆಗೆ ಸಂಗೀತ ಮಾಂತ್ರಿಕ ರೆಹಮಾನ್?

ಎಲ್ಲವೂ ಅಂದುಕೊಂಡಂತೆ ನಡೆದರೆ ಸಂಗೀತ ಮಾಂತ್ರಿಕ ಎ.ಆರ್‌.ರೆಹಮಾನ್‌, ಬಾಲಿವುಡ್‌ ಗಾಯಕರಾದ ಸೋನು ನಿಗಂ ಸೇರಿದಂತೆ ಬಾಲಿವುಡ್‌ನ ಖ್ಯಾತನಾಮರು ಈ ಬಾರಿಯ ಯುವ ದಸರೆಗೆ ಕಿಚ್ಚುಹಚ್ಚುವರು.

Vijaya Karnataka 28 Sep 2018, 8:11 am
ಮೈಸೂರು: ಎಲ್ಲವೂ ಅಂದುಕೊಂಡಂತೆ ನಡೆದರೆ ಸಂಗೀತ ಮಾಂತ್ರಿಕ ಎ.ಆರ್‌.ರೆಹಮಾನ್‌, ಬಾಲಿವುಡ್‌ ಗಾಯಕರಾದ ಸೋನು ನಿಗಂ ಸೇರಿದಂತೆ ಬಾಲಿವುಡ್‌ನ ಖ್ಯಾತನಾಮರು ಈ ಬಾರಿಯ ಯುವ ದಸರೆಗೆ ಕಿಚ್ಚುಹಚ್ಚುವರು.
Vijaya Karnataka Web A R Rehman


ಈ ಬಾರಿ ಯುವ ದಸರೆಯನ್ನು ಹಿಂದಿಗಿಂತಲೂ ಹೆಚ್ಚು ಆಕರ್ಷಣೀಯಗೊಳಿಸಲು ಯೋಜಿಸಲಾಗುತ್ತಿದ್ದು, ಅರ್ಮಾನ್‌ ಮಲ್ಲಿಕ್‌, ಅರ್ಜಿತ್‌ ಸಿಂಗ್‌, ಸುನಿಧಿ ಚೌಹಾಣ್‌ ಅವರನ್ನು ಆಹ್ವಾನಿಸಲು ಮಾತುಕತೆ ನಡೆದಿದೆ. ಇವರೊಂದಿಗೆ ವಿಜಯ ಪ್ರಕಾಶ್‌, ಕನ್ನಡದ ರಾರ‍ಯಪರ್‌ ಚಂದನ್‌ ಶೆಟ್ಟಿ ಕಾರ್ಯಕ್ರಮವೂ ಇರಲಿದೆ.

''ಏಳು ದಿನ ನಡೆಯುವ ಯುವ ದಸರಾ ಪ್ರಮುಖ ಆಕರ್ಷಣೆಯಾಗಿ ಖ್ಯಾತನಾಮರನ್ನು ಆಹ್ವಾನಿಸಸಲು ಮಾತುಕತೆ ನಡೆಸಲಾಗುತ್ತಿದೆ. ಮೂರ್ನಾಲ್ಕು ದಿನಗಳಲ್ಲಿ ಈ ಪಟ್ಟಿ ಅಂತಿಮವಾಗಲಿದೆ'' ಎಂದು ಯುವ ದಸರಾ ಕಾರ್ಯಾಧ್ಯಕ್ಷ ನಟರಾಜ್‌ 'ವಿಜಯ ಕರ್ನಾಟಕ'ಕ್ಕೆ ಮಾಹಿತಿ ನೀಡಿದ್ದಾರೆ.

''ಯುವ ದಸರಾ ವೇದಿಕೆಯಲ್ಲಿ ಸ್ಥಳೀಯ ಕಲಾವಿದರೊಂದಿಗೆ ಸ್ಯಾಂಡಲ್‌ವುಡ್‌ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಈ ಬಾರಿ ಬಾಲಿವುಡ್‌ನ ಐವರು ಖ್ಯಾತ ಗಾಯಕರಿಂದ ಸಂಗೀತ ಸಂಜೆ ಏರ್ಪಡಿಸಲು ಮಾತುಕತೆ ನಡೆಸಲಾಗುತ್ತಿದೆ'' ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ