ಆ್ಯಪ್ನಗರ

ರಾಮಮಂದಿರ, ಏಕರೂಪ ನಾಗರೀಕ ಸಂಹಿತೆಗೆ ಬಿಜೆಪಿ ಬದ್ಧ-ಡಿಸಿಎಂ ಅಶ್ವಥ್ ನಾರಾಯಣ

ರಾಮಮಂದಿರ ನಿರ್ಮಾಣ, ಏಕರೂಪ ನಾಗರಿಕ ಸಂಹಿತೆ ಜಾರಿ ಹಾಗೂ ಆರ್ಟಿಕಲ್ 370 ಕುರಿತಾಗಿ ಬಿಜೆಪಿ ಕಠಿಣ ನಿಲುವು ಹಾಗೂ ಬದ್ಧತೆಯನ್ನು ಪ್ರದರ್ಶಿಸಿದೆ ಎಂದು ಡಿಸಿಎಮ್ ಡಾ. ಅಶ್ವಥ್ ನಾರಾಯಣ ಅಭಿಪ್ರಾಯಪಟ್ಟಿದ್ದಾರೆ.

Vijaya Karnataka Web 20 Sep 2019, 5:46 pm
ಮೈಸೂರು : ರಾಮಮಂದಿರ ನಿರ್ಮಾಣ, ಆರ್ಟಿಕಲ್ 370 ಹಾಗೂ ಏಕರೂಪ ನಾಗರೀಕ ಸಂಹಿತೆ ಬಗೆಹರಿಸಲು ಬಿಜೆಪಿ ಕಟಿ ಬದ್ಧವಾಗಿತ್ತು ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ ಅಂದಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ಪ್ರತಿಪಕ್ಷಗಳು ಸಹ ನಮ್ಮಿಂದ ಇದಾಗದು ಎಂದು ಹೇಳುತ್ತಿದ್ದರು ಆದರೆ ಆರ್ಟಿಕಲ್ 380 ರದ್ದು ಮಾಡುವ ಮೂಲಕ ಭಯೋತ್ಪಾಧನೆಗೆ ಕಡಿವಾಣ ಹಾಕಿದ್ದೇವೆ ಎಂದಿದ್ದಾರೆ.
Vijaya Karnataka Web dcm ashwatanarayan


ಮೈಸೂರು ನಗರ ಹಾಗೂ ಗ್ರಾಮಾಂತರ ಬಿಜೆಪಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತಾ ಅಭಿಯಾನದ ಅಂಗವಾಗಿ ಒಂದು ದೇಶ ಒಂದು ಸಂವಿಧಾನ ಜನ ಜಾಗೃತಿ ಸಭೆ ಹಾಗೂ 370 ನೇ ವಿಧಿ ಕುರಿತ ಸಂವಾದ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಆಶ್ವಥ್ ನಾರಾಯಣ ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೈಸೂರು ಎಂದಾಕ್ಷಣ ಮಹಾರಾಜರ ಆಡಳಿತ ನಮಗೆ ನೆನಪಿಗೆ ಬರುತ್ತದೆ. ಇಂತಹದೊಂದು ನಗರದಲ್ಲಿ ನಾನು ಮೊದಲ ಸಭೆಯಲ್ಲಿ ಭಾಗವಹಿಸುತ್ತಿರುವುದು ಸಂತಸದ ವಿಷಯ. ದೇಶದಲ್ಲೇ ಸ್ವಚ್ಚ ನಗರ ಎಂಬ ಖ್ಯಾತಿಯೂ ಮೈಸೂರಿಗಿದೆ ಎಂದರು.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಕುರಿತಾಗಿ ಮಾತನಾಡಿದ ಡಿಸಿಎಂ, ಆರ್ಟಿಕಲ್ 370ಯನ್ನು ಸಮಾಜವಾದಿ ನಾಯಕ ರಾಮ್ ಮನೋಹರ್ ಲೋಹಿಯಾ ಸೇರಿ ಸಾಕಷ್ಟು ಮಂದಿ ಅಂದೇ ವಿರೋಧಿಸಿದ್ದರು. ಈ ವಿಶೇಷ ಸ್ಥಾನಮಾನದಿಂದ ಒಂದೇ ಸಂವಿಧಾನ ಇರುವ ದೇಶಕ್ಕೆ ಎರಡು ಪ್ರಧಾನಮಂತ್ರಿ, ಎರಡು ಆಡಳಿತ ನಡೆಸಬೇಕಾಗಿತ್ತು. ಕಾಶ್ಮೀರದಲ್ಲಿ ಭಾವನಾತ್ಮಕವಾಗಿ ಜನರನ್ನು ಕೆರಳಿಸುವ ಕೆಲಸ ಮಾಡಲಾಗುತ್ತಿತ್ತು. ಪ್ರತ್ಯೇಕ ದೇಶ ಮಾಡಿಕೊಳ್ಳಬಹುದೆಂಬ ಚಿಂತನೆಯನ್ನು ತುಂಬಿ ಸರ್ಕಾರ ಹಾಗೂ ಜನರ ನಡುವೆ ಘರ್ಷಣೆಗೂ ಕಾರಣವಾಗಿತ್ತು ಎಂದರು.

ಇದರ ಪರಿಣಾಮ 42 ಸಾವಿರ ಮಂದಿ ಸಾವನ್ನಪ್ಪಿದ್ದರು. ನಿತ್ಯವೂ ಶಾಂತಿ ಇಲ್ಲದೆ, ಗೊಂದಲ ವಾತಾವರಣ ಉಂಟಾಗಿತ್ತು. ಭ್ರಷ್ಟಾಚಾರ, ಸಾವು ನೋವು ಹಾಗೂ ಯುವಕರಿಗೆ ಉದ್ಯೋಗ ಭದ್ರತೆ ಇಲ್ಲದಿರುವುದು. ಈ ನಡುವೆ ವಿಶ್ವಕ್ಕೆ ಕಾಶ್ಮೀರದಲ್ಲಿ ಶಾಂತಿ ಇಲ್ಲವೆಂಬಂತೆ ಪಾಕಿಸ್ತಾನ ಬಿಂಬಿಸುವ ಕೆಲಸ ಮಾಡುತ್ತಿತ್ತು.

ಕಾಶ್ಮೀರಿ ವಿಚಾರವಾಗಿಯೇ ಬೇರೆ ರಾಷ್ಟ್ರಗಳಿಂದ ವ್ಯವಹಾರಿಕವಾಗಿ ಮುಂದುವರೆಯಲು ಆಗದ ರೀತಿ ಗೊಂದಲ ನಿರ್ಮಿಸಿದ್ದರು. ಈ ಕಾರಣಕ್ಕಾಗಿ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಕುರಿತಾಗಿ ಕೇಂದ್ರ ಸರಕಾರ ಮಹತ್ವದ ತೀರ್ಮಾನ ಕೈಗೊಂಡಿತು ಎಂದಿದ್ದಾರೆ.

ಸಿದ್ದರಾಮಯ್ಯ-ಪರಮೇಶ್ವರ್ ಒಂದೇ ನಾಣ್ಯದ ಎರಡು ಮುಖ ಅಂದ್ರು ಎಸ್.ಟಿ ಸೋಮಶೇಖರ್

ರಾಮಮಂದಿರ ನಿರ್ಮಾಣ, ಆರ್ಟಿಕಲ್ 370 ಹಾಗೂ ಏಕರೂಪ ನಾಗರೀಕ ಸಂಹಿತೆ ಈ ಮೂರು ವಿಚಾರಗಳನ್ನು ಬಗೆಹರಿಸಲು ಬಿಜೆಪಿ ಕಟಿ ಬದ್ಧವಾಗಿತ್ತು. ಪ್ರತಿಪಕ್ಷಗಳು ಸಹ ನಮ್ಮಿಂದ ಇದಾಗದು ಎಂದು ಹೇಳುತ್ತಿದ್ದರು. ಶಾಂತಿ, ನೆಮ್ಮದಿಗಾಗಿ ಭಯೋತ್ಪಾದನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಇದೊಂದು ಮಹತ್ವದ ನಿರ್ಧಾರವಾಗಿದೆ.

ಇಷ್ಟೇ ಅಲ್ಲದೆ ಲಡಾಕನ್ನು ಯೂನಿಯನ್ ಟೆರಿಟರಿ ಮಾಡಿ ಎಂದು ಘೋಷಿಸಿ ಸಮಸ್ಯೆಗೆ ಪರಿಹಾರ ತರುವ ಕೆಲಸ ಮಾಡುತ್ತಿದ್ದೇವೆ. ಅಖಂಡತೆಯ ಸಂದೇಶವನ್ನು ಸುಲಭವಾಗಿ ಮಾಡುತ್ತಿದ್ದೇವೆ. ಭಯೋತ್ಪಾದನೆ ನಿಯಂತ್ರಣಕ್ಕೆ ಹೆಚ್ಚಿನ ಹಣ ವ್ಯಯಿಸಿಲಾಗುತ್ತಿದ್ದು, ಈಗ ಕಡಿತವಾಗಿದೆ ಎಂದು ಹೇಳಿದರು.

ಮಾಜಿ ಸಂಸದರಾದ ತೇಜಸ್ವಿನಿಗೌಡ, ನಗರಾಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್, ಗ್ರಾಮಾಂತರ ಜಿಲ್ಲಾಧ್ಯಕ್ಷ ಕೋಟೆ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಎಚ್.ವಿ.ರಾಜೀವ್, ಸತೀಶ್, ಮೈ.ಕು. ರಾಜೇಶ್ ಇನ್ನಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ