ಆ್ಯಪ್ನಗರ

ಪರಮಾಣು ಬಾಂಬ್‌ ವಿರೋಧಿ ದಿನ ಆಚರಣೆ

ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿರೋಶಿಮಾ ಮತ್ತು ನಾಗಾಸಾಕಿ ದಿನವನ್ನು ಪರಮಾಣು ಬಾಂಬ್‌ ವಿರೋಧಿ ದಿನವಾಗಿ ಆಚರಿಸಿ, ಸಂತಾಪ ಸೂಚಿಸಲಾಯಿತು.

Vijaya Karnataka 12 Aug 2018, 5:00 am
ಮೈಸೂರು: ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿರೋಶಿಮಾ ಮತ್ತು ನಾಗಾಸಾಕಿ ದಿನವನ್ನು ಪರಮಾಣು ಬಾಂಬ್‌ ವಿರೋಧಿ ದಿನವಾಗಿ ಆಚರಿಸಿ, ಸಂತಾಪ ಸೂಚಿಸಲಾಯಿತು.
Vijaya Karnataka Web atomic bomb adversary day celebration
ಪರಮಾಣು ಬಾಂಬ್‌ ವಿರೋಧಿ ದಿನ ಆಚರಣೆ


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಜ್ಞಾನಿ ಡಾ.ಕೃಷ್ಣನ್‌ ದೊರೆಸ್ವಾಮಿ, '' ಹಿರೋಶಿಮಾ, ನಾಗಾಸಾಕಿಯ ಮೇಲೆ ಆದ ದೌರ್ಜನ್ಯ, ಪರಿಣಾಮಗಳು ಇಂದಿಗೂ ವಿಶ್ವದಲ್ಲಿ ಎಲ್ಲರ ಮನ ಕಲಕುತ್ತದೆ. ಅಣುಬಾಂಬ್‌ ದಾಳಿಯಿಂದ ಉಂಟಾದ ಶಬ್ದ ತರಂಗಗಳು, ರಾಸಾಯನಿಕ ಧೂಳು ಹಾಗೂ ಕಲುಷಿತ ಗಾಳಿಯಿಂದ ರೋಗಗಳು ಹರಡುವಂತಾಯಿತು. ಆ ದಾಳಿಯ ಪರಿಣಾಮವಾಗಿ ಈಗಲೂ ಜಪಾನ್‌ನಲ್ಲಿ ಹುಟ್ಟುವ ಮಕ್ಕಳು ಅದರ ಪರಿಣಾಮ ಎದುರಿಸುತ್ತಿದ್ದಾರೆ. ಹಿರೋಶಿಮಾ, ನಾಗಾಸಾಕಿಯಲ್ಲಿ ಪ್ರವಾಸ ಕೈಗೊಂಡ ಪ್ರವಾಸಿಗರು ಹೇಳುವಂತೆ ಪ್ರಪಂಚದಲ್ಲಿ ಎಂತಹ ವೈರಿ ರಾಷ್ಟ್ರವಾದರೂ ಅಣುಬಾಂಬ್‌ ಪ್ರಯೋಗಿಸಬಾರದು ಎಂದು ಅಭಿಪ್ರಾಯ ಪಡುತ್ತಾರೆ,'' ಎಂದರು.

ಪ್ರಾಂಶುಪಾಲ ಶ್ರೀಧರ್‌ ಮಾತನಾಡಿ, ''ಜುಲೈ 25, 1945ರಂದು ಅಮೆರಿಕ ಮತ್ತು ಯುರೋಪಿಯನ್‌ ದೇಶಗಳು ಜಪಾನಿನ ಮೇಲೆ ಅಣ್ವಸ್ತ್ರವನ್ನು ಪ್ರಯೋಗ ಮಾಡಲು ನಿರ್ಧರಿಸಿದವು. ಜಪಾನಿನ ಪ್ರಮುಖ ಸ್ಥಳವಾದ ಹಿರೋಶಿಮಾ ಮೇಲೆ ಆಗಸ್ಟ್‌ 8, 1945 ರಂದು ಲಿಟಲ್‌ ಬಾಯ್‌ (ಯುರೇನಿಯಂ ಯುಕ್ತ) ಅಣುಬಾಂಬ್‌ ಅನ್ನು ಬೋಯಿಂಗ್‌ ಎಸ್‌-29 ವಿಮಾನದ ಮೂಲಕ ಪ್ರಯೋಗ ಮಾಡಲಾಯಿತು. ಘಟನೆಯಲ್ಲಿ ಸುಮಾರು 1,60,000 ಜನರು ಸಾವಿಗೀಡಾದರು. ಹಾಗೆಯೇ ಮತ್ತೊಂದು ನಗರವಾದ ನಾಗಾಸಾಕಿಯ ಮೇಲೆ ಬಿ-29 ವಿಮಾನದಲ್ಲಿ (ಪ್ಲೊಟೋನಿಯಂ ಯುಕ್ತ) ಫ್ಯಾಟ್‌ಮನ್‌ ಎನ್ನುವ ಅಣುಬಾಂಬ್‌ ಅನ್ನು ಆಗಸ್ಟ್‌ 9, 1945ರಂದು ಹಾಕಿದ್ದರಿಂದ ಸುಮಾರು 3 ಲಕ್ಷಕಿಂತ ಹೆಚ್ಚು ಜನರು ಸಾವಿಗೀಡಾದರು. ಇದರಿಂದ ಚಿಂತೆಗೀಡಾದ ಜಪಾನ್‌ ಆಗಸ್ಟ್‌ 15, 1945ರಂದು ಶರಣಾಗತವಾಯಿತು. ಹಾಗಾಗಿ ಎರಡನೇ ಮಹಾಯುದ್ದ ಮುಕ್ತಾಯವಾಯಿತು. ವಿಶ್ವಸಂಸ್ಥೆಯು ಈ ನಗರಗಳ ಮೇಲೆ ಆದ ಪರಿಣಾಮವನ್ನು ಪರಿಗಣಿಸಿ ಸೆಪ್ಟೆಂಬರ್‌ 2, 1945 ರಂದು ಯಾವುದೇ ದೇಶಗಳು ಇನ್ನು ಮುಂದೆ ಅಣುಬಾಂಬ್‌ ಅನ್ನು ಪ್ರಯೋಗಿಸಬಾರದು ಎಂಬ ಒಪ್ಪಂದಕ್ಕೆ ಬಂದು ವಿಶ್ವಸಂಸ್ಥೆಯು ಎಲ್ಲಾ ದೇಶಗಳಿಂದ ಸಹಿಯನ್ನು ಹಾಕಿಸಿಕೊಂಡಿತು,'' ಎಂದು ವಿವರಿಸಿದರು.

ಕಾಲೇಜಿನ ಸಂಯೋಜನಾಧಿಕಾರಿ ಕಾಂತಿ ನಾಯಕ್‌ ಸೇರಿದಂತೆ ಮುಂತಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ