ಆ್ಯಪ್ನಗರ

ಮೈಸೂರು: ನೀರು ಬಳಸಿದ್ದಕ್ಕೆ ದಲಿತರ ಮೇಲೆ ಸವರ್ಣೀಯರಿಂದ ಹಲ್ಲೆ

ರಸ್ತೆ ಬದಿ ವ್ಯಾಪಾರಿಯೊಬ್ಬನ ಬಳಿ ತಿನಿಸು ಖರೀದಿಸಿದ ದಲಿತನೊಬ್ಬ ಗಾಡಿಯಲ್ಲಿಟ್ಟಿದ್ದ ಕುಡಿಯುವ ನೀರು ಬಳಸಿದ್ದಕ್ಕೆ ಸವರ್ಣೀಯರು ತೀವ್ರವಾಗಿ ಹಲ್ಲೆ ಮಾಡಿರುವ ಘಟನೆ ತಾಲೂಕಿನ ನವಿಲೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ವಿಕ ಸುದ್ದಿಲೋಕ 21 Jun 2017, 9:01 am
ನಂಜನಗೂಡು: ರಸ್ತೆ ಬದಿ ವ್ಯಾಪಾರಿಯೊಬ್ಬನ ಬಳಿ ತಿನಿಸು ಖರೀದಿಸಿದ ದಲಿತನೊಬ್ಬ ಗಾಡಿಯಲ್ಲಿಟ್ಟಿದ್ದ ಕುಡಿಯುವ ನೀರು ಬಳಸಿದ್ದಕ್ಕೆ ಸವರ್ಣೀಯರು ತೀವ್ರವಾಗಿ ಹಲ್ಲೆ ಮಾಡಿರುವ ಘಟನೆ ತಾಲೂಕಿನ ನವಿಲೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.
Vijaya Karnataka Web attack on dalits for use of water case
ಮೈಸೂರು: ನೀರು ಬಳಸಿದ್ದಕ್ಕೆ ದಲಿತರ ಮೇಲೆ ಸವರ್ಣೀಯರಿಂದ ಹಲ್ಲೆ


ಗ್ರಾಮದ ವೃತ್ತದ ಬಳಿ ಚುರುಮುರಿ ರಾಜಪ್ಪ ಎಂಬ ವ್ಯಾಪಾರಿಯೊಬ್ಬನ ಬಳಿ ಅದೇ ಗ್ರಾಮದ ನಿವಾಸಿಗಳಾದ ದಲಿತ ಸಮುದಾಯದ ಕುಮಾರ್‌ ಹಾಗೂ ಮಹದೇವ ಎಂಬುವರು ಚುರುಮುರಿ ಖರೀದಿಸಿ ತಿನ್ನುತ್ತಿದ್ದರು. ಈ ವೇಳೆ ಕುಡಿಯಲು ನೀರು ಕೊಡುವಂತೆ ವ್ಯಾಪಾರಿಗೆ ಮನವಿ ಮಾಡಿದಾಗ ನಿಮಗೆ ಕುಡಿಯುವ ನೀರು ಪ್ರತ್ಯೇಕವಾಗಿರಿ ಸಲಾಗಿದೆ ಅದನ್ನು ಬಳಸಿ ಎಂದು ಸೂಚಿಸಿದ್ದಾನೆ. ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ ದಲಿತ ಸಮುದಾಯದ ಕುಮಾರ್‌ ಗಾಡಿಯಲ್ಲಿಟ್ಟಿದ್ದ ನೀರನ್ನೇ ಕುಡಿಯಲು ಬಳಸಲು ಮುಂದಾದ ವೇಳೆ ಕೈಯಲ್ಲಿದ್ದ ಚುರುಮುರಿ ಗಾಡಿ ಮೇಲೆ ಚೆಲ್ಲಿದೆ. ಇದರಿಂದ ಕೋಪ ಗೊಂಡ ರಾಜಪ್ಪ, ನಾಗೇಶ್‌, ಶಿವಲಿಂಗ, ಮಹಾದೇವ ಸ್ವಾಮಿ, ನಾಗಣ್ಣ, ಗುರುಪ್ರಸಾದ್‌ ಸೇರಿದಂತೆ ಒಟ್ಟು 7 ಮಂದಿ ನನ್ನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳು ಕುಮಾರ್‌ ನಂಜನಗೂಡು ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಇನ್ನು ಹಲ್ಲೆ ಯಿಂದಾಗಿ ಗಾಯಗೊಂಡಿ ರುವ ಕುಮಾರ್‌ ನಂಜನಗೂಡಿನ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿ ಯಾಗಿ ಚಿಕಿತ್ಸೆ ಪಡೆಯುತ್ತಿದ್ದು, ತೀವ್ರ ವಾಗಿ ಗಾಯ ಗೊಂಡಿರುವ ಮಹದೇವ್‌ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪ್ರಕರಣದ ಕುರಿತು ನಂಜನಗೂಡು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದ್ದು, ಸ್ಥಳಕ್ಕೆ ವೃತ್ತ ನಿರೀಕ್ಷ ಕ ಶಿವಮೂರ್ತಿ, ಪಿಎಸ್‌ಐ ಪುನೀತ್‌ ಭೇಟಿ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ