ಆ್ಯಪ್ನಗರ

ಜೀವನ ಪ್ರೀತಿಸಿ, ಸಮಸ್ಯೆಗಳನ್ನಲ್ಲ

ವಿಶ್ವ ಛಿದ್ರಮನಸ್ಕತೆ (ಸ್ಕಿಜೋಫ್ರೀನಿಯಾ) ದಿನಾಚರಣೆ ಪ್ರಯುಕ್ತ ನಗರದಲ್ಲಿ ಜಾಗೃತಿ ಜಾಥಾ ನಡೆಯಿತು.

Vijaya Karnataka 31 May 2019, 5:00 am
ಮೈಸೂರು: ವಿಶ್ವ ಛಿದ್ರಮನಸ್ಕತೆ (ಸ್ಕಿಜೋಫ್ರೀನಿಯಾ) ದಿನಾಚರಣೆ ಪ್ರಯುಕ್ತ ನಗರದಲ್ಲಿ ಜಾಗೃತಿ ಜಾಥಾ ನಡೆಯಿತು.
Vijaya Karnataka Web news/mysuru/awareness
ಜೀವನ ಪ್ರೀತಿಸಿ, ಸಮಸ್ಯೆಗಳನ್ನಲ್ಲ


'ಸ್ಕಿಜೋಫ್ರೀನಿಯಾ ಬಗ್ಗೆ ಭಯ ಬೇಡ, ರೋಗಿಗಳನ್ನು ದೂರ ವಿಡಿದಿರಿ, ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸಿ. ಮನೆಯಲ್ಲಿ ಉತ್ತಮ ಪರಿಸರ ನಿರ್ಮಿಸುವದೊಂದಿಗೆ ರೋಗಿಗಳನ್ನು ಬದಲಾಯಿಸಿ' ಎಂದು ಸಾರುವ ಮೂಲಕ ಅರಿವು ಮೂಡಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ಕಾವೇರಿ ನರ್ಸಿಂಗ್‌ ಶಾಲೆ, ಕಾಲೇಜು ಹಾಗೂ ಶ್ರೀಶಾಂತವೇರಿ ಗೋಪಾಲಗೌಡ ನರ್ಸಿಂಗ್‌ ಕಾಲೇಜು ಸಹಯೋಗದಲ್ಲಿ ನಜರ್‌ಬಾದ್‌ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಆವರಣದಿಂದ ಗುರುವಾರ ಜಾಥಾ ನಡೆಸಲಾಯಿತು.

ನಜರ್‌ಬಾದ್‌ನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಧಿಕಾರಿ ಕಚೇರಿ ಆವರಣದಿಂದ ಜಾಥಾ ಆರಂಭವಾದ ಜಾಥಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ವೃತ್ತ, ಗೋಪಾಲಗೌಡ ಆಸ್ಪತ್ರೆ ವೃತ್ತ, ನಜರ್‌ಬಾದ್‌ ಮುಖ್ಯ ರಸ್ತೆ, ಶಾಲಿವಾಹನ ರಸ್ತೆ, ಥಿಯೋಬಾಲ್ಡ… ರಸ್ತೆಯಲ್ಲಿ ಜಾಥಾ ಅಂತ್ಯಗೊಂಡಿತು.

ಸಾಮಾಜಿಕ ಅಪನಂಬಿಕೆ ಬಿಡಿ- ಚಿತ್ರವಿಕಲತೆಯನ್ನು ದೂರವಿಡಿ, ಮಾನಸಿಕ ಕಾಯಿಲೆಗೆ ಮದ್ದುಂಟು, ಜೀವನವನ್ನು ಪ್ರೀತಿಸಿ ಸಮಸ್ಯೆಗಳನ್ನಲ್ಲ... ಮುಂತಾದ ಘೊಷಣೆಗಳನ್ನು ಕೂಗಿ ಜಾಗೃತಿ ಮೂಡಿಸಿದರು.

ಇದಕ್ಕೂ ಜಿಲ್ಲಾ ರೋಗವಾಹಕ ಮತ್ತು ಆಶ್ರಿತ ರೋಗಗಳ ನಿಯತ್ರಣಾಧಿಕಾರಿ ಡಾ.ಪಿ.ಚಿದಂಬರ ಅವರು ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ''ಸ್ಕಿಜೋಫ್ರೀನಿಯಾ ಮಾನಸಿಕ ಕಾಯಿಲೆ ಸಾಮಾನ್ಯವಾಗಿ 15ರಿಂದ 25 ವರ್ಷ ವಯೋಮಾನದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆಲೋಚನೆ ಹಾಗೂ ಭಾವನೆಗಳಲ್ಲಿ ವಾಸ್ತವ ಇಲ್ಲದೇ ಇರುವುದು ಈ ಕಾಯಿಲೆಯ ಪ್ರಮುಖ ಲಕ್ಷಣ. ಅನುವಂಶೀಯತೆ ಹಾಗೂ ಬಾಲ್ಯದಲ್ಲಿ ನಕಾರಾತ್ಮಕ ಅನುಭವ ಸೇರಿದಂತೆ ಅನೇಕ ಕಾರಣಗಳಿಂದ ಈ ಕಾಯಿಲೆ ಬರಬಹುದೊ. ತಂಬಾಕು ಹಾಗೂ ದುಶ್ಯಚಟಗಳಿಂದಲೂ ಬರಬಹುದು. ಬಹುತೇಕ ಈ ಕಾಯಿಲೆ ಗುಣಪಡಿಸಲು ಸಾಧ್ಯವಿದ್ದು, ಸರಕಾರ ಉಚಿತ ಚಿಕಿತ್ಸೆಗೂ ಅವಕಾಶ ಮಾಡಿಕೊಟ್ಟಿದೆ,'' ಎಂದು ತಿಳಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಲಕ್ಷ್ಮಣ್‌, ಜಿಲ್ಲಾ ಮಾನಸಿಕ ಆರೋಗ್ಯ ಕಾರ‍್ಯಕ್ರಮಾಧಿಕಾರಿ ಡಾ.ಎಂ.ಎಸ್‌.ಮಂಜುಪ್ರಸಾದ್‌, ಜಿಲ್ಲಾ ಮಾನಸಿಕ ರೋಗಗಳ ತಜ್ಞ ಡಾ.ಎ.ಆರ್‌.ನರೇಂದ್ರ, ಶ್ರೀಶಾಂತವೇರಿ ಗೋಪಾಲಗೌಡ ನರ್ಸಿಂಗ್‌ ಕಾಲೇಜು ಉಪ ಪ್ರಾಂಶುಪಾಲೆ ಲತಾ ಸೇರಿದಂತೆ ಮತ್ತಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ