ಆ್ಯಪ್ನಗರ

ಯುವ ಸಂಭ್ರಮದಲ್ಲಿಪ್ಲಾಸ್ಟಿಕ್‌ ವಿರುದ್ಧ ಜಾಗೃತಿ

ಯುವ ಸಂಭ್ರಮ ಅಂಗವಾಗಿ ಮಂಗಳವಾರ ನಾನಾ ಕಾಲೇಜುಗಳು ನೀಡಿದ ನೃತ್ಯ ಕಾರ್ಯಕ್ರಮ ದೇಶಾಭಿಮಾನ, ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್‌ ನಿಷೇಧದ ಪಾಠ ಹೇಳಿದವು. ನೆರೆದಿದ್ದವರು ಹೆಜ್ಜೆಗೆ ಹೆಜ್ಜೆ ಜೋಡಿಸಿ ಕುಣಿದು ಕುಪ್ಪಳಿಸುವ ಮುಖಾಂತರ ನೃತ್ಯದ ಸಂದೇಶವನ್ನೂ ಮನನ ಮಾಡಿಕೊಂಡರು.

Vijaya Karnataka 25 Sep 2019, 5:00 am
ಮನಸೂರೆಗೊಂಡ ನಾನಾ ಕಾಲೇಜು ತಂಡಗಳ ನೃತ್ಯ ಪ್ರದರ್ಶನ
Vijaya Karnataka Web awareness against plastic in youth celebration
ಯುವ ಸಂಭ್ರಮದಲ್ಲಿಪ್ಲಾಸ್ಟಿಕ್‌ ವಿರುದ್ಧ ಜಾಗೃತಿ

ಮೈಸೂರು:
ಯುವ ಸಂಭ್ರಮ ಅಂಗವಾಗಿ ಮಂಗಳವಾರ ನಾನಾ ಕಾಲೇಜುಗಳು ನೀಡಿದ ನೃತ್ಯ ಕಾರ್ಯಕ್ರಮ ದೇಶಾಭಿಮಾನ, ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್‌ ನಿಷೇಧದ ಪಾಠ ಹೇಳಿದವು. ನೆರೆದಿದ್ದವರು ಹೆಜ್ಜೆಗೆ ಹೆಜ್ಜೆ ಜೋಡಿಸಿ ಕುಣಿದು ಕುಪ್ಪಳಿಸುವ ಮುಖಾಂತರ ನೃತ್ಯದ ಸಂದೇಶವನ್ನೂ ಮನನ ಮಾಡಿಕೊಂಡರು.

ದಸರಾ ಮಹೋತ್ಸವದ ಅಂಗವಾಗಿ ಮಾನಸಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿಆಯೋಜಿಸಿದ್ದ ಕಾರ್ಯಕ್ರಮದಲ್ಲಿಕೊಳ್ಳೇಗಾಲದ ಜೆಎಸ್‌ಎಸ್‌ ಬಾಲಕಿಯರ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ರಾಜಕುಮಾರ್‌ ಅಭಿನಯದ ಒಡಹುಟ್ಟಿದವರು ಚಲನಚಿತ್ರದ 'ಹುಟ್ಟಿದರೆ ಕನ್ನಡನಾಡಿನಲ್ಲಿಹುಟ್ಟಬೇಕು...' ಎಂಬ ಗೀತೆಗೆ ನೃತ್ಯ ಪ್ರದರ್ಶಿಸಿ ನೆರೆದಿದ್ದವರಲ್ಲಿದೇಶಾಭಿಮಾನ ಹುಟ್ಟಿಸಿದರು. ಇದಲ್ಲದೆ ಮಲ್ಲಚಿತ್ರದ ಹಸಿರುಗಳೇ...ಗೀತೆಗೆ ಹೆಜ್ಜೆ ಹಾಕಿ ಪರಿಸರ ಸಂರಕ್ಷಣೆ ಪಾಠ ಹೇಳಿದರು.

ಇತ್ತ ಕಾರ್ಯಕ್ರಮದಲ್ಲಿವೇದಿಕೆ ಮೇಲೆ ಕಲಾವಿದರು ಕುಣಿದು ಎಲ್ಲರನ್ನು ರಂಜಿಸಸುತ್ತಿದ್ದರೆ, ಇದನ್ನು ಗಮನಿಸುತ್ತಿದ್ದ ಪ್ರೇಕ್ಷಕರು ನೃತ್ಯದಲ್ಲಿತೊಡಗಿರುವ ಕಲಾವಿದರನ್ನು ಪ್ರೋತ್ಸಾಹಿಸುವಂತೆ ತಾವೂ ಹೆಜ್ಜೆ ಹಾಕಿದರು. ನೆರೆದಿದ್ದ ಯುವ ಸಮೂಹದ ಶೇ.70ರಷ್ಟು ಮಂದಿ ಪ್ರತಿಯೊಂದು ಗೀತೆಗೂ ಕುಣಿಯುತ್ತಾ ಕಾರ್ಯಕ್ರಮವನ್ನು ಆಸ್ವಾದಿಸುವ ಪರಿ ಮನರಂಜನೆಯ ಮಹತ್ವವನ್ನು ಸಾರಿ ಹೇಳುತ್ತಿತ್ತು.

ಮದ್ದೂರಿನ ಮಹಿಳಾ ಸರಕಾರಿ ಕಾಲೇಜು ವಿದ್ಯಾರ್ಥಿಗಳು ನೃತ್ಯ ಪ್ರದರ್ಶನದ ಮುಖಾಂತರ ಕಾವೇರಿ ನದಿ ನೀರಿನ ಹಂಚಿಕ ವಿಚಾರದಲ್ಲಿಗಲಾಟೆ ಮಾಡುವುದು ಬೇಡ, ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬರೂ ಜೀವ ಜಲವನ್ನು ಪಡೆದುಕೊಳ್ಳುವಲ್ಲಿಸಮಾನ ಹಕ್ಕು ಪಡೆದಿದ್ದಾರೆ. ಹಾಗಾಗಿ ಈ ವಿಚಾರದಲ್ಲಿಕಚ್ಚಾಡದೆ ಸಮಾನತೆ, ಸಾಮರಸ್ಯದಿಂದ ಬದುಕಬೇಕೆಂಬ ಸಂದೇಶ ಸಾರಿದರು.

ಇಳಿ ಸಂಜೆಯ ತಣ್ಣನೆ ಗಾಳಿಯ ನಡುವೆ ಮೂಡಿ ಬರುತ್ತಿದ್ದ ಕಾರ್ಯಕ್ರಮವನ್ನು ವೀಕ್ಷಿಸಲು ಸೇರಿದ್ದ ಜನ ಸಮೂಹ ಬಗೆ ಬಗೆಯ ಗೀತೆಗಳಿಗೆ ಕುಣಿದು ಬೆವರಿಳಿಸಿದರು. ಒಂದು ಸಮೂಹ ಕುಣಿಯುವುದರಿಂದ ಪ್ರೇರೇಪಿತರಾಗಿ ಮತ್ತೊಂದು ಸಮೂಹ ತಮ್ಮ ಸ್ನೇಹಿತರೊಂದಿಗೆ ಕುಣಿಯುವುದು ಕಂಡುಬಂದಿತು. ಕುಣಿಯಲು ಬಾರದವರೂ ತಮ್ಮದೇ ದಾಟಿಯಲ್ಲಿಹೆಜ್ಜೆ ಹಾಕುತ್ತಾ ಕಾರ್ಯಕ್ರಮವನ್ನು ಆಸ್ವಾದಿಸಿದರು.

ಬನ್ನೂರಿನ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ, ಅಶೋಕಪುರಂನ ಮೈತ್ರಿ ಚಾರಿಟೆಬಲ್‌ ಟ್ರಸ್ಟ್‌ , ಮೈಸೂರಿನ ಜೆಎಸ್‌ಎಸ್‌ ವಿಶೇಷ ಚೇತನರ ಪಾಲಿಟೆಕ್ನಿಕ್‌ ಸೇರಿದಂತೆ 26 ಕಾಲೇಜುಗಳ ವಿದ್ಯಾರ್ಥಿಗಳು ನೆರೆದಿದ್ದವರಿಗೆ ನೃತ್ಯ ರಂಜನೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ