ಆ್ಯಪ್ನಗರ

ಅಭಯಾರಣ್ಯಕ್ಕೆ ಕೊಡಲಿ: ಮೂವರ ಸಸ್ಪೆಂಡ್‌

ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ವನ್ಯಜೀವಿ ವಲಯದಲ್ಲಿ ಅಕ್ರಮ ಮರ ಹನನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಮುಖ್ಯ ಅರಣ್ಯ ಸಂರಕ್ಷ ಣಾಧಿಕಾರಿ ಹಾಗೂ ಹುಲಿ ಯೋಜನೆಯ ಕ್ಷೇತ್ರ ನಿರ್ದೇಶಕ ನಾರಾಯಣಸ್ವಾಮಿ ಅಮಾನತುಗೊಳಿಸಿದ್ದಾರೆ.

Vijaya Karnataka 23 Apr 2019, 5:00 am
ನಾಗರಹೊಳೆ ಉದ್ಯಾನದಲ್ಲಿ ಪ್ರಕರಣ |ಇಬ್ಬರು ಅಧಿಕಾರಿಗಳಿಗೂ ಸಿಎಫ್‌ ನೋಟಿಸ್‌
Vijaya Karnataka Web ax protected forest triple suspend
ಅಭಯಾರಣ್ಯಕ್ಕೆ ಕೊಡಲಿ: ಮೂವರ ಸಸ್ಪೆಂಡ್‌


ಎಚ್‌.ಡಿ.ಕೋಟೆ (ಮೈಸೂರು):
ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ವನ್ಯಜೀವಿ ವಲಯದಲ್ಲಿ ಅಕ್ರಮ ಮರ ಹನನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಮುಖ್ಯ ಅರಣ್ಯ ಸಂರಕ್ಷ ಣಾಧಿಕಾರಿ ಹಾಗೂ ಹುಲಿ ಯೋಜನೆಯ ಕ್ಷೇತ್ರ ನಿರ್ದೇಶಕ ನಾರಾಯಣಸ್ವಾಮಿ ಅಮಾನತುಗೊಳಿಸಿದ್ದಾರೆ.

ಉಪವಲಯ ಅರಣ್ಯಾಧಿಕಾರಿ ಸಿ.ಎಂ. ಸಂಜಯಕುಮಾರ್‌, ಸೋರೆಕುಪ್ಪೆ ಗಸ್ತಿನ ಅರಣ್ಯ ರಕ್ಷ ಕ ಜಿ. ರಾಜಶೇಖರ್‌, ಅಗಸನಹುಂಡಿ ಗಸ್ತು, ಮೇಟಿಕುಪ್ಪೆ ಶಾಖೆಯ ಅರಣ್ಯ ರಕ್ಷ ಕ ಕೆ.ಪಿ. ರವಿಕುಮಾರ್‌ ಅಮಾನತುಗೊಂಡವರು. ಇವರ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ, ತಕ್ಷ ಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

ಅಲ್ಲದೆ, ಪ್ರಕರಣ ಕುರಿತಂತೆ ಅಂತರಸಂತೆ ವನ್ಯಜೀವಿ ವಲಯದ ಸಹಾಯಕ ಅರಣ್ಯ ಸಂರಕ್ಷ ಣಾಧಿಕಾರಿ ಕೇಶವೇಗೌಡ ಮತ್ತು ಮೇಟಿಕುಪ್ಪೆ ವನ್ಯಜೀವಿ ವಲಯದ ಅರಣ್ಯಾಧಿಕಾರಿ ಸಂತೋಷ್‌ ಹೂಗಾರ್‌ ಅವರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಸದರಿ ಪ್ರದೇಶಗಳಲ್ಲಿ ಇರುವ ಸಿದ್ದಾಪುರ ಮತ್ತು ಕೊತ್ತನಹಳ್ಳಿ ಅರಣ್ಯ ಕಳ್ಳತನ ತಡೆ ಶಿಬಿರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾವಲುಗಾರರು, ಸಮರ್ಪಕವಾಗಿ ಕೆಲಸ ನಿರ್ವಹಿಸದೇ ಇರುವುದು ಹಾಗೂ ಸಮೀಪದಲ್ಲಿರುವ ಕಲ್ಲಹಟ್ಟಿ ತನಿಖಾ ಠಾಣೆ ಪಕ್ಕದಲ್ಲಿ ವಾಸವಿರುವ ಸಿಬ್ಬಂದಿ ಇಂಥ ಕೃತ್ಯವನ್ನು ಗಮನಿಸದೇ ಇರುವುದು ಕಂಡುಬಂದಿದ್ದು, ಇವರನ್ನು ತಕ್ಷ ಣ ಬದಲಿಸಲು ವಲಯ ಅರಣ್ಯಾಧಿಕಾರಿ ಮತ್ತು ಸಹಾಯಕ ಅರಣ್ಯ ಸಂರಕ್ಷ ಣಾಧಿಕಾರಿಗಳಿಗೆ ನಿರ್ದೆಶನ ಕೊಟ್ಟಿದ್ದಾರೆ.

ಘಟನೆ ಏನು?

ಮೇಟಿಕುಪ್ಪೆ ವನ್ಯಜೀವಿ ವಲಯದ ಸೋರೆಕುಪ್ಪೆ ಬೀಟ್‌ನ ಕಲ್ಲಹಳ್ಳ-ಗುಡಿಹಳ್ಳದ ನಡುವೆ ಕಳೆದ 10 ದಿನಗಳ ಹಿಂದೆ 9 ಸಾಗುವಾನಿ ಮರಗಳ ಹನನ ಆಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಎಸ್‌ಟಿಪಿಎಫ್‌ನ ವಲಯ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು.

ಈ ಬಗ್ಗೆ ವಲಯ ಅರಣ್ಯಾಧಿಕಾರಿಗಳ ತಂಡ, ಅರಣ್ಯ ಭಾಗದಲ್ಲಿ ಶೋಧ ಮಾಡುವಾಗ, ಈ 9 ಮರಗಳು ಅಲ್ಲದೆ ಅಗಸನಹುಂಡಿ ಶಾಖೆಯ ಮೇಟಿಕುಪ್ಪೆ ಗಸ್ತು-2 ರ ಕೆಂಪಾದೇವಿ ಕಟ್ಟೆ ಅರಣ್ಯ ಪ್ರದೇಶದಲ್ಲಿ ಎರಡು ಸಾಗುವಾನಿ ಮರಗಳನ್ನು ಕಡಿಯಲಾಗಿತ್ತು. ಅಲ್ಲದೆ ಇದೇ ಗಸ್ತಿನ ಟ್ರಾನ್ಸಾಕ್ಟ್ ಲೈನ್‌ ಬಳಿ 4 ಸಾಗುವಾನಿ ಮರಗಳ ಹನನ ಆಗಿರುವುದು ಕಂಡು ಬಂದಿತ್ತು.

ಈ ಮರಗಳ ಮೇಲೆ ಯಾವುದೇ ಎನ್‌ಒಸಿ ನಂಬರ್‌ ನಮೂದಿಸಿಲ್ಲ, ಇಲಾಖೆ ಮುದ್ರೆ ಹಾಕಿಲ್ಲ ಹಾಗೂ ಮರಗಳನ್ನು ಕಡಿಯುವ ಬಗ್ಗೆ ಇಲಾಖೆಯಲ್ಲಿ ಯಾವುದೇ ದಾಖಲೆಗಳು ಇಲ್ಲ ಎಂದು ವರದಿ ಕೊಡಲಾಗಿತ್ತು. ಅಲ್ಲದೆ, ಸಿಬ್ಬಂದಿ ಅಕ್ರಮ ಮರ ಹನನ ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ ಎಂದು ತಿಳಿಸಲಾಗಿತ್ತು.

ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿದ ಮುಖ್ಯ ಅರಣ್ಯ ಸಂರಕ್ಷ ಣಾಧಿಕಾರಿಗಳು, ಸಿಬ್ಬಂದಿ ಸರಿಯಾಗಿ ಕೆಲಸ ಮಾಡದೆ ಇರುವುದು, ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ಸಂರಕ್ಷಿಸಲು ಗಸ್ತು ತಿರುಗಿ ಎಚ್ಚರಿಕೆ ವಹಿಸದೇ ಇರುವುದು ಮತ್ತು ಕರ್ತವ್ಯ ಲೋಪ ಕಂಡು ಬಂದಿರುವ ಹಿನ್ನೆಲೆಯಲ್ಲಿ ಮೂವರನ್ನು ಅಮಾನತುಪಡಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ