ಆ್ಯಪ್ನಗರ

ಕುರುಬಾರಹಳ್ಳಿ ಜಮೀನು ವಿಚಾರದಲ್ಲಿ ಸಚಿವ ಆರ್‌.ಅಶೋಕ್ ಜನರ ದಿಕ್ಕು ತಪ್ಪಿಸಿರುವ ಆರೋಪ

ಕುರುಬಾರಹಳ್ಳಿ ಬಿ.ಖರಾಬ್‌ ವಿಷಯವನ್ನು ಮುಕ್ತಗೊಳಿಸಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಜನರನ್ನು ದಿಕ್ಕು ತಪ್ಪಿಸಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌ ಆರೋಪಿಸಿದ್ದಾರೆ.

Vijaya Karnataka Web 18 Jul 2020, 4:01 pm
ಮೈಸೂರು: ಕುರುಬಾರಹಳ್ಳಿ ಬಿ.ಖರಾಬ್‌ ವಿಷಯವನ್ನು ನಗರಾಭಿವೃದ್ಧಿ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಕಂದಾಯ ಇಲಾಖೆಯಿಂದ ಪತ್ರ ಬರೆದಿರುವುದನ್ನೇ ಆದೇಶವೆಂಬಂತೆ ಬಿಂಬಿಸಿ, ಬಿ ಖರಾಬಿನಿಂದ ಮುಕ್ತಗೊಳಿಸಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಜನರನ್ನು ದಿಕ್ಕು ತಪ್ಪಿಸಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌ ಆರೋಪಿಸಿದ್ದಾರೆ.
Vijaya Karnataka Web mk somashekar
ಸಚಿವ ಆರ್ ಆಶೋಕ್ ಮತ್ತು ಮಾಜಿ ಶಾಸಕ ಎಂ.ಕೆ.ಸೋಮಶೇಖರ್


''ಕುರುಬಾರಹಳ್ಳಿ ಸ.ನಂ.4ರಲ್ಲಿ ಸಿದ್ಧಾರ್ಥ ಬಡಾವಣೆಗೆ ಉಪಯೋಗಿಸಿಕೊಂಡಿರುವ 205.09 ಎಕರೆ, ಕೆ.ಸಿ.ಬಡಾವಣೆಗಾಗಿ ಉಪಯೋಗಿಸಿಕೊಂಡಿರುವ 44.20 ಎಕರೆ ಸೇರಿದಂತೆ ಒಟ್ಟು 354.29 ಜಮೀನನ್ನು ಬಿ ಖರಾಬು ಅಧಿಸೂಚನೆಗೆ ಬರುವುದಿಲ್ಲ. ಮುಂದಿನ ಕ್ರಮಕ್ಕಾಗಿ ನಗರಾಭಿವೃದ್ಧಿ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಕಂದಾಯ ಇಲಾಖೆಯಿಂದ ಪತ್ರ ಬರೆಯಲಾಗಿದೆ. ಇದು ಯಾವುದೇ ರೀತಿಯ ಅಧಿಕೃತ ಆದೇಶವಲ್ಲ,'' ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

''ನಾನು ಶಾಸಕನಾಗಿದ್ದಾಗ ಕಂದಾಯ, ನಗರಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳ ಕಚೇರಿಗೆ ಅಲೆದಾಡಿ, ನಿರಂತರವಾಗಿ ಒತ್ತಡ ಹೇರಿದ ಫಲವಾಗಿ 2018ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯಲ್ಲಿಅನುಮೋದನೆ ದೊರಕಿತ್ತು. ಚುನಾವಣೆ ಘೋಷಣೆಯಾಗಿದ್ದರಿಂದ ಆದೇಶ ಸಾಧ್ಯವಾಗಿರಲಿಲ್ಲ. ಬಳಿಕ ಈ ಪ್ರಯತ್ನ ಒಂದು ಹೆಜ್ಜೆ ಮುಂದಕ್ಕೆ ಹೋಗಿಲ್ಲ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ನ್ಯಾಯಾಲಯದ ಗಮನಕ್ಕೂ ತಂದಿಲ್ಲ. ಪತ್ರವನ್ನೆ ಆದೇಶವೆಂದು ನಂಬಿಸಿ, ದಿಕ್ಕು ತಪ್ಪಿಸುತ್ತಿದ್ದಾರೆ,'' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುರುಬಾರಹಳ್ಳಿ ಭೂ ವಿವಾದ ಇನ್ನೂ ಜೀವಂತ, ಮುಡಾದ 354 ಎಕರೆಗೆ ಮಾತ್ರ ಮುಕ್ತಿ!

ರಾಮದಾಸ್‌ ಅನುದಾನ ತಂದಿಲ್ಲ: ''ಶಾಸಕ ಎಸ್‌.ಎ.ರಾಮದಾಸ್‌ ನನ್ನ ಅವಧಿಯಲ್ಲಿ ನಡೆದಿರುವ ಕೆಲಸಗಳನ್ನು ತಾವೇ ಮಾಡಿರುವುದಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ, ಒಂದು ಪೈಸೆಯನ್ನು ಕ್ಷೇತ್ರಕ್ಕೆ ಅವರು ತಂದಿಲ್ಲ. ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳೆಲ್ಲವೂ ಹಿಂದಿನ ಸರಕಾರದ ಅನುದಾನವಾಗಿದ್ದು, ಬಿಜೆಪಿ ಅವಧಿಯಲ್ಲಿಅಭಿವೃದ್ಧಿಯಾಗಿರುವ ಒಂದೇ ಒಂದು ಕೆಲಸ ತೋರಿಸಲಿ,'' ಎಂದು ಸವಾಲು ಹಾಕಿದರು.

ಕುರುಬಾರಹಳ್ಳಿ ಬಿ ಖರಾಬು ಆದೇಶ ಹೈಕೋರ್ಟ್‌ನಿಂದ ವಜಾ, ಭೂ ವಿವಾದ ಅಂತ್ಯ

ಕೆಪಿಸಿಸಿ ವಕ್ತಾರ ಎಚ್‌.ಎ.ವೆಂಕಟೇಶ್‌ ಮಾತನಾಡಿ, ಕಂದಾಯ ಸಚಿವ ಆರ್‌.ಅಶೋಕ್‌ ಹೊರಡಿಸಿರುವ ಪತ್ರವೂ ಬಿ ಖರಾಬಿಗೆ ಸರಕಾರದ ಆದೇಶವೆಂದು ನಿರೂಪಿಸಿದರೆ ಯಾವುದೇ ಶಿಕ್ಷೆಗೆ ಬೇಕಾದರು ನಾವು ಸಿದ್ಧ ಎಂದು ಸವಾಲು ಹಾಕಿದರು. ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಮೂರ್ತಿ, ಮುಖಂಡ ಸುನೀಲ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ