ಆ್ಯಪ್ನಗರ

ಬಿದಿರು ಸಾಗಣೆ, ಆರೋಪಿ ಸೆರೆ

ಪಿರಿಯಾಪಟ್ಟಣ: ಅರಣ್ಯದಲ್ಲಿಅಕ್ರಮವಾಗಿ ಬಿದಿರು ಕಡಿದು ವಾಹನದಲ್ಲಿತುಂಬಿ ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಲಾಗಿದೆ.

Vijaya Karnataka 13 Nov 2019, 5:00 am
ಪಿರಿಯಾಪಟ್ಟಣ: ಅರಣ್ಯದಲ್ಲಿಅಕ್ರಮವಾಗಿ ಬಿದಿರು ಕಡಿದು ವಾಹನದಲ್ಲಿತುಂಬಿ ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಲಾಗಿದೆ.
Vijaya Karnataka Web bamboo trafficking accused
ಬಿದಿರು ಸಾಗಣೆ, ಆರೋಪಿ ಸೆರೆ


ತಾಲೂಕಿನ ಕೊಪ್ಪ ಶಾಖೆಯ ಗುಳ್ಳದೇಹಳ್ಳ ಮೀಸಲು ಅರಣ್ಯದಲ್ಲಿಹಲವು ದಿನಗಳಿಂದ ಅಕ್ರಮವಾಗಿ ಬಿದಿರುಗಳನ್ನು ಕಡಿದು ಸಾಗಿಸುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದು. ಸೋಮವಾರ ತಡರಾತ್ರಿ ದೇವರಕಂಡಿ ಎಂಬ ಸ್ಥಳದಲ್ಲಿಗೂಡ್ಸ್‌ ವಾಹನದಲ್ಲಿ530 ಕಡ್ಡಿಗಳನ್ನು ಸಾಗಿಸುವ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಕಳ್ಳತನ ಮಾಡುತ್ತಿದ್ದ ಬಿ.ಎಚ್‌.ಸುನೀಲ್‌ ಎಂಬಾತ ನನ್ನು ಬಂಧಿಸಿದ್ಧಾರೆ. ಉಳಿದ ನಾಲ್ವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಆರ್‌ಎಫ್‌ಒ ರತನ್‌ಕುಮಾರ್‌ ತಿಳಿಸಿದ್ಧಾರೆ. . ಈ ಸಂಬಂಧ ಪಿರಿಯಾ ಪಟ್ಟಣದ ಅರಣ್ಯ ಇಲಾಖೆಯವರು ಪ್ರಕರಣ ದಾಖಲಿಸಿದ್ದು ಉಳಿದ ಆರೋಪಿಗಳ ಪತ್ತೆ ಕಾರ್ಯದಲ್ಲಿತೊಡಗಿದ್ಧಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ