ಆ್ಯಪ್ನಗರ

ಬ್ಯಾರಿಕೇಡ್‌ ಬಿದ್ದು ಬಾಲಕ ಸಾವು

ಲಾರಿ ಹಿಂದೆ ತೆಗೆಯುವ ವೇಳೆ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಕ್ಕದಲ್ಲೇ ನಿಂತಿದ್ದ ಬಾಲಕನಿಗೆ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ.

Vijaya Karnataka 18 Sep 2019, 5:00 am
ಹುಣಸೂರು: ಲಾರಿ ಹಿಂದೆ ತೆಗೆಯುವ ವೇಳೆ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಕ್ಕದಲ್ಲೇ ನಿಂತಿದ್ದ ಬಾಲಕನಿಗೆ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ.
Vijaya Karnataka Web barricade falls victim to youth death
ಬ್ಯಾರಿಕೇಡ್‌ ಬಿದ್ದು ಬಾಲಕ ಸಾವು


ತಾಲೂಕಿನ ಗಾವಡಗೆರೆ ಹೋಬಳಿಯ ಗ್ರಾಮದ ರೈತ ರವಿ ಅವರ ಪುಪು ಅಭಿ(10) ಮೃತ ಬಾಲಕ.

ಘಟನೆ ವಿವರ: ಮಂಗಳವಾರ ಸಂಜೆ ಅಭಿ ಕಟ್ಟೆಮಳಲವಾಡಿ ಗ್ರಾಮದ ಸಣ್ಣೇನಹಳ್ಳಿಗೆ ಹೋಗುವ ವೃತ್ತದ ಬಳಿಯ ಬ್ಯಾರಿಕೇಡ್‌ನ ಪಕ್ಕದಲ್ಲಿನಿಂತಿದ್ದ ಈವೇಳೆ ಕೆ.ಆರ್‌.ನಗರದಿಂದ ಬರುತ್ತಿದ್ದ ಲಾರಿಯೊಂದು ವೃತ್ತದಲ್ಲಿತಿರುವು ಪಡೆದುಕೊಳ್ಳುವ ಭರದಲ್ಲಿರಿವರ್ಸ್‌ ತೆಗೆದ ವೇಳೆ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬ್ಯಾರಿಕೇಡ್‌ ಪಕ್ಕದಲ್ಲಿದ್ದ ಬಾಲಕನಿಗೆ ತಗುಲಿ ಸ್ಥಳದಲ್ಲೇ ಮೃತಪಟ್ಟಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಡಿವೈಎಸ್‌ಪಿ ಕೆ.ಎಸ್‌.ಸುಂದರರಾಜ್‌, ವೃತ್ತ ನಿರೀಕ್ಷಕ ಕೆ.ಸಿ.ಪೂವಯ್ಯ, ಎಸ್‌.ಐ.ಶಿವಪ್ರಕಾಶ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲಾರಿ ಚಾಲಕನನ್ನು ಬಂಧಿಸಿ, ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ