ಆ್ಯಪ್ನಗರ

ಸುಳ್ಳು ಸುದ್ದಿ ಪ್ರಸಾರವಾಗದಂತೆ ಎಚ್ಚರಿಕೆ ವಹಿಸಿ

ಅಂತರ್ಜಾಲ ಯುಗದಲ್ಲಿಅಂಗೈಯಲ್ಲೇ ಎಲ್ಲಮಾಹಿತಿ ಸಿಕ್ಕಿದರೂ, ಅದರ ದುರುಪಯೋಗವೂ ಹೆಚ್ಚಾಗುತ್ತಿದೆ. ಸುಳ್ಳು ಸುದ್ದಿ ಪ್ರಸಾರವಾಗುವುದನ್ನು ತಡೆಯಲು ಮಾಧ್ಯಮಗಳು ಎಚ್ಚರಿಕೆ ವಹಿಸಬೇಕು ಎಂದು ಸಂಪನ್ಮೂಲ ವ್ಯಕ್ತಿ ಫಿರೋಜ್‌ ಜಮಾಲ್‌ ಹೇಳಿದರು.

Vijaya Karnataka 13 Sep 2019, 5:00 am
ಮೈಸೂರು: ಅಂತರ್ಜಾಲ ಯುಗದಲ್ಲಿಅಂಗೈಯಲ್ಲೇ ಎಲ್ಲಮಾಹಿತಿ ಸಿಕ್ಕಿದರೂ, ಅದರ ದುರುಪಯೋಗವೂ ಹೆಚ್ಚಾಗುತ್ತಿದೆ. ಸುಳ್ಳು ಸುದ್ದಿ ಪ್ರಸಾರವಾಗುವುದನ್ನು ತಡೆಯಲು ಮಾಧ್ಯಮಗಳು ಎಚ್ಚರಿಕೆ ವಹಿಸಬೇಕು ಎಂದು ಸಂಪನ್ಮೂಲ ವ್ಯಕ್ತಿ ಫಿರೋಜ್‌ ಜಮಾಲ್‌ ಹೇಳಿದರು.
Vijaya Karnataka Web be careful not to spread false news
ಸುಳ್ಳು ಸುದ್ದಿ ಪ್ರಸಾರವಾಗದಂತೆ ಎಚ್ಚರಿಕೆ ವಹಿಸಿ


ಗೂಗಲ್‌ ಇಂಡಿಯಾ, ಮೈಸೂರು ವಿಶ್ವವಿದ್ಯಾಲಯ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ ಹಾಗೂ ಮೈಸೂರು ಜಿಲ್ಲಾಪತ್ರಕರ್ತರ ಸಂಘದ ಸಹಯೋಗದಲ್ಲಿಪತ್ರಕರ್ತರಿಗಾಗಿ ಮೈಸೂರು ಮಾನಸ ಗಂಗೋತ್ರಿಯ ಗಣಕ ವಿಜ್ಞಾನದ ಎಚ್‌ಪಿಸಿ ಕಂಪ್ಯೂಟರ್‌ ಪ್ರಯೋಗಾಲಯದಲ್ಲಿಗುರುವಾರ ಆಯೋಜಿಸಲಾಗಿದ್ದ ಆನ್‌ಲೈನ್‌ ವೆರಿಫಿಕೇಷನ್‌ ಆ್ಯಂಡ್‌ ಫ್ಯಾಕ್ಟ್ ಚೆಕ್ಕಿಂಗ್‌ ಕುರಿತು ಪತ್ರಕರ್ತರಿಗೆ ಒಂದು ದಿನದ ಕಾರ್ಯಾಗಾರದಲ್ಲಿಮಾತನಾಡಿದರು.

ಕಾರ್ಯಾಗಾರದಲ್ಲಿಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಫಿರೋಜ್‌ ಜಮಾಲ್‌ ಅವರು ಪ್ರಸ್ತುತ ಡಿಜಿಟಲ್‌ ಮಾಧ್ಯಮದಲ್ಲಿಪ್ರಸಾರವಾಗುತ್ತಿರುವ ಫೇಕ್‌ ನ್ಯೂಸ್‌ (ಸುಳ್ಳು ಸುದ್ದಿ)ಗಳನ್ನು ಪ್ರಾಥಮಿಕ ಹಂತದಲ್ಲಿಹೇಗೆ ಪತ್ತೆ ಹಚ್ಚುವ ಬಗ್ಗೆ ಮಾಹಿತಿ ನೀಡಿದರು. ನಕಲಿ ಫೋಟೊ, ವೀಡಿಯೊ, ಅಪ್‌ಲೋಡ್‌ ಮಾಡಿದವರ ಮೂಲವನ್ನು ಪತ್ತೆಹಚ್ಚುವುದು, ಸುಳ್ಳು ಸುದ್ದಿಗಳ ವೆಬ್‌ಸೈಟ್‌ಗಳನ್ನು ಗುರುತಿಸುವುದು, ಸ್ಥಳ ಮತ್ತು ಸಮಯವನ್ನು ಪರಾಮರ್ಶಿಸುವುದು, ವಿಷಯಗಳನ್ನು ಗುರುತಿಸುವ ಬಗ್ಗೆ ವಿವರಿಸಲಾಯಿತು.

ಸುಳ್ಳು ಸುದ್ದಿಗಳಿಂದಾಗುವ ಅನಾಹುತ: ಸುಳ್ಳು ಸುದ್ದಿಗಳಿಂದ ಆಗುವ ಅನಾಹುತಗಳನ್ನು ತಪ್ಪಿಸಲು ಮಾಧ್ಯಮದವರು ಅದರಲ್ಲೂಟಿವಿ ಮಾಧ್ಯಮಗಳು ಎಚ್ಚರಿಕೆಯಿಂದ ಇರಬೇಕು. ಟ್ವಿಟರ್‌, ವಾಟ್ಸಾಪ್‌, ಫೇಸ್‌ಬುಕ್‌, ಇನ್ಸ್‌ಟಾಗ್ರಾಮ್‌ ಇತ್ಯಾದಿ ಹೆಚ್ಚು ಪ್ರಚಲಿತದಲ್ಲಿರುವ ಸಾಮಾಜಿಕ ಮಾಧ್ಯಮಗಳಲ್ಲಿಪ್ರಕಟವಾಗುವ ಸುದ್ದಿಗಳು, ಇಮೇಜ್‌ಗಳು, ವೀಡಿಯೊಗಳ ಬಗ್ಗೆ ಜಾಗೃತವಹಿಸಬೇಕು. ವಾಟ್ಸಾಪ್‌ನಲ್ಲಿ ಹರಿದಾಡಿದ ವದಂತಿಗಳಿಂದ ಭಾರತದಲ್ಲೇ 29 ಮಂದಿ ಮೃತಪಟ್ಟಿದ್ದಾರೆ. ಈ ಬಗ್ಗೆ ಯಾರೂ ನಿಗಾ ವಹಿಸಿಲ್ಲಎಂದು ಉದಾಹರಿಸಿದರು.

ಕಾರ್ಯಾಗಾರದಲ್ಲಿಪಾಲ್ಗೊಂಡಿದ್ದ ಪತ್ರಕರ್ತರಿಗೆ ಕಂಪ್ಯೂಟರ್‌ ಪ್ರಯೋಗಾಲಯದಲ್ಲಿಪ್ರಾತ್ಯಕ್ಷಿಕೆ ನೀಡಲಾಯಿತು. ಗೂಗಲ್‌ ಇಮೇಜ್‌ನಲ್ಲಿಹೇಗೆ ಫೇಕ್‌ ಫೋಟೋಗಳನ್ನು ಸೃಷ್ಟಿಸುತ್ತಾರೆ, ಅವುಗಳನ್ನು ಪತ್ತೆ ಹಚ್ಚುವ ಕುರಿತು ಮಾಹಿತಿ ನೀಡಲಾಯಿತು.

ನಕಲಿ ಫೋಟೋ, ವೀಡಿಯೋ ಪತ್ತೆ ಸುಲಭ: ಗೂಗಲ್‌ನಲ್ಲಿ ಸುಳ್ಳು ಫೋಟೋ, ವೀಡಿಯೋ ಪತ್ತೆಹಚ್ಚುವ ವೆಬ್‌ಸೈಟ್‌ಗಳಿದ್ದು, ಅದನ್ನು ಯಾರು ಬೇಕಾದರೂ ಪತ್ತೆ ಹಚ್ಚಬಹುದು. ಅನುಮಾನ ಬಂದ ಯಾವುದಾದರೂ ಫೋಟೋಗಳನ್ನು ಗೂಗಲ್‌ ಸರ್ಚ್ನಲ್ಲಿಅಪಲೋಡ್‌ ಮಾಡಿ ನಕಲಿ ಚಿತ್ರಗಳನ್ನು ಪತ್ತೆ ಹಚ್ಚಬಹುದು.

ಕಾರ್ಯಾಗಾರದ ಸಮಾರಂಭದಲ್ಲಿಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಸಹ ಪ್ರಾಧ್ಯಾಪಕಿ ಎಂ.ಎಸ್‌.ಸಪ್ನಾ, ಜಿಲ್ಲಾಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಲೋಕೇಶ್‌ಬಾಬು, ಉಪಾಧ್ಯಕ್ಷ ಎಂ.ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ