ಆ್ಯಪ್ನಗರ

ಮೈಸೂರು: ಸ್ವಾಮೀಜಿ ನಿಗೂಢ ಸಾವು! ಆತ್ಮಹತ್ಯೆಯೋ? ಕೊಲೆಯೋ?

ಬೆನಕನಹಳ್ಳಿ ಪಟ್ಟದ ಸ್ವಾಮೀಜಿ ನಿಗೂಢವಾಗಿ ಸಾವನ್ನಪ್ಪಿದ್ದು, ಆತ್ಮಹತ್ಯೆಯೋ? ಹೃದಯಾಘಾತವೋ? ಅಥವಾ ಹತ್ಯೆಯೋ ಎಂಬ ಚರ್ಚೆ ಆರಂಭವಾಗಿದೆ. ಆದರೆ ನೇಣು ಬಿಗಿದ ಸ್ಥಿತಿಯಲ್ಲಿ ಪೋಟೊ ವೈರಲ್ ಆಗಿದೆ.

Vijaya Karnataka Web 7 Mar 2020, 1:43 pm
ಮೈಸೂರು: ಟಿ ನರಸೀಪುರದ ಬೆನಕನಹಳ್ಳಿ ಪಟ್ಟದ ಸ್ವಾಮೀಜಿಗಳು ಮಹದೇವಸ್ವಾಮಿ (47 ) ಮೃತಪಟ್ಟಿದ್ದು ಸಾವಿನ ಬಗ್ಗೆ ತೀವ್ರ ಅನುಮಾನ ಹುಟ್ಟಿಕೊಂಡಿದೆ. ಸ್ವಾಮೀಜಿ ಸಾವು ಆತ್ಮಹತ್ಯೆಯೋ ?, ಹತ್ಯೆಯೋ?ಅಥವಾ ಹೃದಯಾಘಾತವೋ? ಎಂದು ಚರ್ಚೆ ಆರಂಭವಾಗಿದೆ.
Vijaya Karnataka Web swamiji


ಶುಕ್ರವಾರದವರೆಗೂ ಮಹದೇವಸ್ಚಾಮಿಗಳು ಆರಾಮವಾಗಿಯೇ ಓಡಾಡಿಕೊಂಡಿದ್ದರು. ಅಲ್ಲದೇ ರಾತ್ರಿ ಮಲಗಲು ಕೋಣೆಗೆ ಹೋದವರು ಬೆಳಗ್ಗೆಯಾಗುವಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಇದನ್ನು ಹೃದಯಾಘಾತ ಎಂದು ಮತ್ತೊಂದು ವರ್ಗ ಬಿಂಬಿಸುತ್ತಿದೆ. ಹತ್ಯೆ ಆಗಿರಬಹುದೆಂದು ಕೂಡ ಶಂಕೆ ವ್ಯಕ್ತವಾಗಿದೆ.

ನೇಣು ಬಿಗಿದ ಸ್ಥಿತಿಯಲ್ಲಿ ಪೋಟೊ ವೈರಲ್ :
ಸ್ವಾಮೀಜಿ ಸಾವಿಗೆ ಪುಷ್ಟಿಕೊಡುವಂತೆ ನೇಣು ಬಿಗಿದ ಸ್ಥಿತಿಯಲ್ಲಿ ಪೋಟೊ ವೈರಲ್ ಆಗಿದ್ದು, ಮಠದ ಮೆಟ್ಟಿಲು ಬಳಿ ನೇಣು ಬಿಗಿದ ಸ್ಥಿತಿಯಲ್ಲಿನ ಪೋಟೋ ದೊರೆತಿದೆ. ಹೀಗಾಗಿ ಸ್ವಾಮೀಜಿಗಳ ಸಾವಿನ ಬಗ್ಗೆ ಹಲವು ರೀತಿಯ ಅನುಮಾನಗಳು ವ್ಯಕ್ತವಾಗುತ್ತಿದ್ದು, ಇದು ಹೃದಯಾಘಾತವಲ್ಲ ಆತ್ಮಹತ್ಯೆ ಇಲ್ಲ ಹತ್ಯೆ ಕೂಡ ನಡೆದಿರಬಹುದು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಆಸ್ತಿ ವಿಷಯಕ್ಕೆ ನಡೆದಿತ್ತು ಗಲಾಟೆ:
ಒಟ್ಟಾರೆಯಾಗಿ ಮಠದ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಆಡಳಿತ ಮಂಡಳಿಯಲ್ಲಿ ಮುಸುಕಿನ ಗುದ್ದಾಟ ನಡೆದಿತ್ತು. ಈ ಹಿನ್ನೆಲೆ ಈ ಸಾವು ಸಾಕಷ್ಟು ಅನುಮಾನ ಮೂಡಿಸಿದೆಎಂದು ಹೇಳಲಾಗುತ್ತಿದೆ. ಸ್ವಾಮೀಜಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಟಿ.ನರಸೀಪುರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ