ಆ್ಯಪ್ನಗರ

ಸ್ಪೆಂಟ್‌ ವಾಶ್‌ನಿಂದ ಪೊಟ್ಯಾಷಿಯಂ ತಯಾರಿಸಿದರೆ ಲಾಭ

ರ್ಭದಲ್ಲಿದೊರೆಯುವ ಸ್ಪೆಂಟ್‌ ವಾಶ್‌ ಎಂಬ ವಸ್ತುವಿನಿಂದ ಪೊಟ್ಯಾಷಿಯಂ ತಯಾರಿಸುವ ತಂತ್ರಜ್ಞಾನವು ಅಹಮದಾಬಾದ್‌ನ ಡಿಸ್ಟಲರಿವೊಂದರಲ್ಲಿಯಶಸ್ವಿಯಾಗಿ ಬಳಕೆಯಾಗುತ್ತಿದೆ. ಇದನ್ನು ದೊಡ್ಡ ಪ್ರಮಾಣದಲ್ಲಿಉತ್ಪಾದಿಸಿದಲ್ಲಿಪೊಟ್ಯಾಷಿಯಂ ಆಮದು ಮಾಡಿಕೊಳ್ಳುವಲ್ಲಿದೇಶಕ್ಕೆ ಆಗುತ್ತಿರುವ 500 ರಿಂದ 700 ಕೋಟಿ ರೂ.ವೆಚ್ಚ ತಪ್ಪಲಿದೆ ಎಂದು ಡಿಎಸ್‌ಐಆರ್‌ ಕಾರ್ಯದರ್ಶಿ ಶೇಖರ್‌ ಸಿ.ಮಂಡೆ ತಿಳಿಸಿದರು.

Vijaya Karnataka 15 Dec 2019, 5:00 am
ಅಹಮದಾಬಾದ್‌ನ ಡಿಸ್ಟಲರಿವೊಂದರಲ್ಲಿಯಶಸ್ವಿ ಪ್ರಯೋಗ | ಡಿಎಸ್‌ಐಆರ್‌ ಕಾರ್ಯದರ್ಶಿ ಶೇಖರ್‌ ಸಿ.ಮಂಡೆ ಮಾಹಿತಿ
Vijaya Karnataka Web benefits of potassium made from spent wash
ಸ್ಪೆಂಟ್‌ ವಾಶ್‌ನಿಂದ ಪೊಟ್ಯಾಷಿಯಂ ತಯಾರಿಸಿದರೆ ಲಾಭ


ಮೈಸೂರು: ಕಬ್ಬಿನ ತ್ಯಾಜ್ಯ, ಮದ್ಯ ಸಂಸ್ಕರಣೆ ಸಂದರ್ಭದಲ್ಲಿದೊರೆಯುವ ಸ್ಪೆಂಟ್‌ ವಾಶ್‌ ಎಂಬ ವಸ್ತುವಿನಿಂದ ಪೊಟ್ಯಾಷಿಯಂ ತಯಾರಿಸುವ ತಂತ್ರಜ್ಞಾನವು ಅಹಮದಾಬಾದ್‌ನ ಡಿಸ್ಟಲರಿವೊಂದರಲ್ಲಿಯಶಸ್ವಿಯಾಗಿ ಬಳಕೆಯಾಗುತ್ತಿದೆ. ಇದನ್ನು ದೊಡ್ಡ ಪ್ರಮಾಣದಲ್ಲಿಉತ್ಪಾದಿಸಿದಲ್ಲಿಪೊಟ್ಯಾಷಿಯಂ ಆಮದು ಮಾಡಿಕೊಳ್ಳುವಲ್ಲಿದೇಶಕ್ಕೆ ಆಗುತ್ತಿರುವ 500 ರಿಂದ 700 ಕೋಟಿ ರೂ.ವೆಚ್ಚ ತಪ್ಪಲಿದೆ ಎಂದು ಡಿಎಸ್‌ಐಆರ್‌ ಕಾರ್ಯದರ್ಶಿ ಶೇಖರ್‌ ಸಿ.ಮಂಡೆ ತಿಳಿಸಿದರು.

ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿಶನಿವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಕಬ್ಬಿನ ತ್ಯಾಜ್ಯ, ಮದ್ಯ ತಯಾರಿಸುವ ಡಿಸ್ಟಲರಿಗಳಲ್ಲಿಸಂಸ್ಕರಣೆಯಿಂದ ಸ್ಪೆಂಟ್‌ ವಾಶ್‌ ಎಂಬ ವಸ್ತು ಉತ್ಪತ್ತಿಯಾಗುತ್ತದೆ. ಈ ವಸ್ತುವು ಅತ್ಯಂತ ಮಾಲಿನ್ಯ ಕಾರಕ ವಸ್ತುವಾಗಿದೆ. ಆದರೆ ಈ ವಿಷಕಾರಿ ವಸ್ತುವಿನಿಂದ ಪೊಟ್ಯಾಷಿಯಂ ಉತ್ಪಾದನೆ ಮಾಡಬಹುದಾಗಿದೆ. ಇತ್ತೀಚೆಗೆ ಅಹಮದಾಬಾದ್‌ನಲ್ಲಿಒಂದು ಸಂಸ್ಥೆ ಪೊಟ್ಯಾಷಿಯಂ ಉತಾದನೆಯಲ್ಲಿತೊಡಗಿಸಿಕೊಂಡಿದೆ. ಈ ತಂತ್ರಜ್ಞಾನದಿಂದ 500 ರಿಂದ 700 ಕೋಟಿ ರೂ. ಮೌಲ್ಯದ ಪೊಟ್ಯಾಷಿಯಂ ಅನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವುದು ತಪ್ಪುತ್ತದೆ. ತನ್ಮೂಲಕ ತಂತ್ರಜ್ಞಾನ ದೇಶದ ಆರ್ಥಿಕತೆಯ ಸುಧಾರಣೆಯಾಗುತ್ತದೆ. ಹೀಗೆ ಮುಂದಿನ 10 ವರ್ಷಗಳಲ್ಲಿತಂತ್ರಜ್ಞಾನದಿಂದ ದೇಶದಲ್ಲಿಕ್ರಾಂತಿಕಾರಕ ಬದಲಾವಣೆಗಳಾಗಲಿದೆ ಎಂದರು.

ಕೈಗೆಟಕುವ ದರದಲ್ಲಿವಾಯುಯಾನ ಸಾಧ್ಯ

ಮುಂದಿನ 6-7 ವರ್ಷಗಳಲ್ಲಿವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವ 70 ಆಸನ ವ್ಯವಸ್ಥೆ ಇರುವ ಏರ್‌ಕ್ರಾಫ್ಟ್‌ಗಳು ನಮ್ಮ ದೇಶದಲ್ಲಿಯೇ ಉತ್ಪಾದನೆಯಾಗಲಿದೆ. ಹಾಗಾಗಿ ಭವಿಷ್ಯದಲ್ಲಿದೇಶದಾದ್ಯಂತ ಸಾಮಾನ್ಯರಿಗೂ ಕೈಗೆಟಕುವ ದರದಲ್ಲಿವಾಯುಯಾನ ಸೌಲಭ್ಯ ಲಭ್ಯವಾಗಲಿದೆ. ಸಿಎಸ್‌ಐಆರ್‌-ನ್ಯಾಷನಲ್‌ ಏರೊಸ್ಪೇಸ್‌ ಲ್ಯಾಬರೇಟರಿಸ್‌ನವರು ಏರ್‌ಕ್ರಾಫ್ಟ್‌ ತಯಾರಿಕೆಯಲ್ಲಿತೊಡಗಿಸಿಕೊಂಡಿದ್ದಾರೆ ಎಂದರು.

ವೈಜ್ಞಾನಿಕವಾಗಿ ಕೃಷಿ ಕೈಗೊಳ್ಳುವ ನಿಟ್ಟಿನಲ್ಲಿಆ್ಯಪ್‌ ಮುಖಾಂತರ ಬೆಳೆ ಪದ್ಧತಿ ಬಗ್ಗೆ ತಿಳಿದುಕೊಳ್ಳುವ ತಂತ್ರಜ್ಞಾನದ ಪ್ರಾಯೋಗಿಕ ಅನುಷ್ಠಾನಕ್ಕಾಗಿ ರಾಜ್ಯ ಸರಕಾರದ ಜತೆ ಮಾತುಕತೆ ನಡೆಸಲಾಗುತ್ತಿದೆ. ಇದರಲ್ಲಿರೈತರು ಮೊಬೈಲ್‌ ತಂತ್ರಾಂಶದ ಮೂಲಕ ತಮ್ಮ ಜಮೀನಿನ ಹವಾಮಾನ, ಮಣ್ಣಿನ ಗುಣಧರ್ಮಕ್ಕೆ ಅನುಗುಣವಾಗಿ ಯಾವ ಬೆಳೆ ಬೆಳೆಯಬಹುದು, ಅದಕ್ಕಾಗಿ ಯಾವ ವಿಧಾನ ಬಳಕೆ ಮಾಡಬೇಕು ಎಂಬ ವಿಚಾರಗಳನ್ನು ತಿಳಿದುಕೊಳ್ಳಬಹುದಾಗಿದೆ ಎಂದರು.

ದೇವಸ್ಥಾನಗಳಲ್ಲಿದೇವರಿಗೆ ಬಳಕೆ ಮಾಡುವ ಹೂವನ್ನು ಉಪಯೋಗಿಸಿಕೊಂಡು ಪರಿಮಳಯುಕ್ತ ವಸ್ತುಗಳನ್ನು ತಯಾರಿಸುವ ಯೋಜನೆ ಇದೆ. ಮೇಘಾಲಯದಲ್ಲಿಪೈನಾಪಲ್‌ ಬೆಳೆದ ರೈತ ಮೂರು ದಿನಗಳೊಳಗೆ ಮತ್ತೊಂದು ಕಡೆ ಸಾಗಿಸಲಾಗದೆ ನಷ್ಟ ಅನುಭವಿಸುತ್ತಿದ್ದಾನೆ. ಇದನ್ನು ತಪ್ಪಿಸಲು ಅಲ್ಲಿಪ್ರತಿಯೊಂದು ಜಿಲ್ಲೆಯಲ್ಲಿಯೂ ಪೈನಾಪಲ್‌ ಸಂಸ್ಕರಣೆ ಘಟಕ ಆರಂಭಿಸಲಾಗುತ್ತಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ