ಆ್ಯಪ್ನಗರ

ಭಾರತಿ ವಿಷ್ಣುವರ್ಧನ್‌, ಕೀರ್ತಿ, ಅನಿರುದ್ಧ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ

ಶ್ರೀ ನಿಮಿಷಾಂಬಾ ಡಾನ್ಸ್‌ ಪ್ರಮೋಟರ್ಸ್‌ ವತಿಯಿಂದ ನಟಿ, ಪದ್ಮಶ್ರೀ ಡಾ.ಭಾರತಿ ವಿಷ್ಣುವರ್ಧನ್‌, ಕೀರ್ತಿ ಅನಿರುದ್ಧ್‌, ಅನಿರುದ್ಥ್‌ ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು.

Vijaya Karnataka 4 Feb 2019, 5:00 am
ಮೈಸೂರು: ಶ್ರೀ ನಿಮಿಷಾಂಬಾ ಡಾನ್ಸ್‌ ಪ್ರಮೋಟರ್ಸ್‌ ವತಿಯಿಂದ ನಟಿ, ಪದ್ಮಶ್ರೀ ಡಾ.ಭಾರತಿ ವಿಷ್ಣುವರ್ಧನ್‌, ಕೀರ್ತಿ ಅನಿರುದ್ಧ್‌, ಅನಿರುದ್ಥ್‌ ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
Vijaya Karnataka Web bharathi vishnuvardhan keerthi anirudh awarded karnataka ratna
ಭಾರತಿ ವಿಷ್ಣುವರ್ಧನ್‌, ಕೀರ್ತಿ, ಅನಿರುದ್ಧ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ


ನಗರದ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದ್ದ ಶ್ರೀ ನಿಮಿಷಾಂಬಾ ಡಾನ್ಸ್‌ ಪ್ರಮೋಟರ್ಸ್‌ನ 23ನೇ ವರ್ಷದ ಹೆಜ್ಜೆ, ಗೆಜ್ಜೆ ನೃತ್ಯ ಸಂಭ್ರಮೋತ್ಸವದಲ್ಲಿ ಮಾಜಿ ಶಾಸಕ ವಾಸು ಪ್ರಶಸ್ತಿ ಪ್ರದಾನ ಮಾಡಿದರು.

ಬಳಿಕ ಮಾತನಾಡಿದ ಅವರು, ''ಸಾಂಸ್ಕೃತಿಕ ನಗರಿಯಲ್ಲಿ ನೃತ್ಯವನ್ನು ಕಲಿಸುವ ಮೂಲಕ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕಾರ್ಯವನ್ನು ಶ್ರೀಧರ್‌ ಜೈನ್‌ ದಂಪತಿಗಳು ಮಾಡುತ್ತಿರುವುದು ಸಂತೋಷದ ವಿಷಯ. ಈ ರೀತಿ ಎಲ್ಲರನ್ನೂ ಒಳಗೊಂಡು ಕಲೆ, ಸಂಸ್ಕೃತಿಯನ್ನು ಬೆಳೆಸುವಂತಹ ಸಂಸ್ಥೆಗಳು ಶತಮಾನೋತ್ಸವ ಸಂಭ್ರಮವನ್ನು ಆಚರಿಸಲಿ,'' ಎಂದು ಹಾರೈಸಿದರು.

ಚಲನಚಿತ್ರ ನಿರ್ದೇಶಕ ಸುಧಾಕರ್‌ ಸಾಜಾ ಮಾತನಾಡಿ, ''ಚಿಕ್ಕದಾಗಿ ಆರಂಭಗೊಂಡ ಸಂಸ್ಥೆ ಇಂದು ತನ್ನ ಉತ್ತಮ ಸೇವೆಯ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ. ಪ್ರತಿ ಬಾರಿಯೂ ವಿಶೇಷತೆಯನ್ನು ಹೊತ್ತು ತರುವ ಈ ವೇದಿಕೆಯು ಈ ಬಾರಿ ಕೊಡಗು ಹಾಗೂ ಕೇರಳ ಪ್ರವಾಹ ಹೇಗಾಯಿತು, ಅದಕ್ಕೆ ಕಾರಣವೇನು ಎಂಬಿತ್ಯಾದಿ ಅಂಶಗಳನ್ನು ತಿಳಿಸುವ ವಿಶೇಷ ನೃತ್ಯವನ್ನ ಏರ್ಪಡಿಸಿರುವುದು ವಿಶೇಷ,'' ಎಂದು ನುಡಿದರು.

ಕೀರ್ತಿ ಅನಿರುದ್ಧ್‌ ಮಾತನಾಡಿ, ''ಪ್ರಸ್ತುತ ನಮ್ಮ ಸಂಸ್ಕೃತಿಯಲ್ಲಿ ಸಂಗೀತ, ನೃತ್ಯ ಕಲಿಯುವವರ ಸಂಖ್ಯೆ ಮರೆಯಾಗುತ್ತಿದೆ. ಕುಟುಂಬದಲ್ಲಿ ಒಬ್ಬರಾದರೂ ಕಲಾವಿದರು ಇರಬೇಕು. ಅದಕ್ಕೆ ಪ್ರತಿ ಮನೆಯಲ್ಲಿ ಮಕ್ಕಳನ್ನು ಆಸಕ್ತಿಯ ಸಂಗೀತ, ನೃತ್ಯ ಇತರೆ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುವುದು ಅವಶ್ಯಕ,'' ಎಂದರು.

ಸನ್ಮಾನ ಸ್ವೀಕರಿಸಿದ ಡಾ.ಭಾರತಿ ವಿಷ್ಣುವರ್ಧನ್‌ ಮಾತನಾಡಿ, ''ಕಲಾವಿದರಿಂದ ಕರೆಸಿಕೊಂಡು ಸನ್ಮಾನಿಸಿಕೊಂಡಿದ್ದು, ಹೆಚ್ಚು ಸಂತೋಷವನ್ನುಂಟು ಮಾಡಿದೆ. ಕೆಲಸ ಮಾಡುವುದನ್ನು ಬಹಳ ಇಷ್ಟಪಡುತ್ತೇನೆ. ನಮ್ಮ ಕೆಲಸವನ್ನು ನೋಡಿ ಬೇರೆಯವರು ಮಾತಾಡಬೇಕು ಎಂಬುದು ನನ್ನ ನಂಬಿಕೆ,'' ಎಂದು ಹೇಳಿದರು.

ವೇದಿಕೆ ಕಾರ್ಯಕ್ರಮದ ಬಳಿಕ ಶ್ರೀ ನಿಮಿಷಾಂಬಾ ಡಾನ್ಸ್‌ ಪ್ರಮೋಟರ್ಸ್‌ ತಂಡದ 350ಕ್ಕೂ ಹೆಚ್ಚು ಕಲಾವಿದರು ಮಡಿಕೇರಿ ಮತ್ತು ಕೇರಳ ಪ್ರವಾಹ ನೃತ್ಯ ರೂಪಕ ನಡೆಸಿಕೊಟ್ಟರು. ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ವಿಜೇತರಾದ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಟ ಅನಿರುದ್ಧ್‌, ಆಪ್ತ ಮಿತ್ರ ಖ್ಯಾತಿಯ ಶ್ರೀಧರ ಜೈನ್‌, ಸೌಮ್ಯಾ ಜೈನ್‌ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ