ಆ್ಯಪ್ನಗರ

ಬಿಟ್‌ ಕಾಯಿನ್‌ ಹಗರಣ; ಆರೋಪಿ ಶ್ರೀಕಿಗೆ ನಳಿನ್‌ ಕುಮಾರ್‌, ಸಿಎಂ ಆಪ್ತನಿಂದ ಜಾಮೀನು! ಏನಿದು ಗಂಭೀರ ಆರೋಪ?

‘ಗೃಹಸಚಿವರು ಹಗರಣವನ್ನು ಸಿಬಿಐಗೆ ವಹಿಸಿದ್ದೇವೆ ಎಂದರೆ, ಬೊಮ್ಮಾಯಿ ಜಾರಿ ನಿರ್ದೇಶನಾಲಯಕ್ಕೆ ವಹಿಸಿದ್ದೇವೆ ಎನ್ನುತ್ತಾರೆ. ಈ ಕುರಿತು ಸ್ಪಷ್ಟನೆ ನೀಡಬೇಕು. ಬೊಮ್ಮಾಯಿ ಅವರು ತಮಗೆ ಸಂಬಂಧಪಡದ ಈ ವಿಚಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸಿದ್ದು ಏಕೆ?’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಗಂಭೀರ ಆರೋಪ ಮಾಡಿದ್ದಾರೆ.

Vijaya Karnataka 14 Nov 2021, 11:26 am
ಮೈಸೂರು: ಬಿಟ್‌ ಕಾಯಿನ್‌ ಹಗರಣದ ಆರೋಪಿ ಹ್ಯಾಕರ್‌ ಶ್ರೀಕೃಷ್ಣನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮುಖ್ಯಮಂತ್ರಿಗಳ ಆಪ್ತ ಜಾಮೀನು ಕೊಡಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಗಂಭೀರ ಆರೋಪ ಮಾಡಿದ್ದಾರೆ.
Vijaya Karnataka Web bitcoin agen.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಈ ಹಿಂದೆ ಐಪಿಎಲ್‌ ಹಗರಣದಲ್ಲಿ ಸಿಕ್ಕಿಬಿದ್ದಾಗ ಪ್ರಸಿದ್ಧ್‌ ಶೆಟ್ಟಿ ಎಂಬಾತ ತನಗೆ ಜಾಮೀನು ಕೊಡಿಸಿದ್ದ ಎಂದು ಬಿಟ್‌ ಕಾಯಿನ್‌ ಹಗರಣದ ಆರೋಪಿ ಶ್ರೀಕೃಷ್ಣ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದ್ದಾನೆ. ಈ ಪ್ರಸಿದ್ಧ್‌ ಶೆಟ್ಟಿ, ನಳಿನ್‌ ಕುಮಾರ್‌ ಕಟೀಲ್‌, ಬಸವರಾಜ ಬೊಮ್ಮಾಯಿ ಅವರಿಗೆ ಆಪ್ತ ಎಂದು ಸಚಿನ್‌ ಮಿಯಾಮಿ ಎಂಬಾತ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದಾರೆ’ ಎಂದು ಶನಿವಾರ ಪತ್ರದ ಪ್ರತಿಗಳನ್ನು ಬಿಡುಗಡೆ ಮಾಡಿದರು.
ಹ್ಯಾಕರ್‌ ಶ್ರೀಕಿ ಮೂಲಕ ಅಕ್ರಮವಾಗಿ ಬಿಟ್‌ ಕಾಯಿನ್‌ ವರ್ಗಾವಣೆ ಆಗಿಲ್ಲ; ಸಚಿವ ಸುಧಾಕರ್‌ ಸಮರ್ಥನೆ!
‘ಬೊಮ್ಮಾಯಿ ಅವರು ತಮಗೆ ಸಂಬಂಧಪಡದ ಈ ವಿಚಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸಿದ್ದು ಏಕೆ?’ ಎಂದು ಪ್ರಶ್ನಿಸಿದ ಅವರು, ‘ಗೃಹಸಚಿವರು ಹಗರಣವನ್ನು ಸಿಬಿಐಗೆ ವಹಿಸಿದ್ದೇವೆ ಎಂದರೆ, ಬೊಮ್ಮಾಯಿ ಜಾರಿ ನಿರ್ದೇಶನಾಲಯಕ್ಕೆ ವಹಿಸಿದ್ದೇವೆ ಎನ್ನುತ್ತಾರೆ. ಈ ಕುರಿತು ಸ್ಪಷ್ಟನೆ ನೀಡಬೇಕು’ ಎಂದು ಒತ್ತಾಯಿಸಿದರು. ಅಲ್ಲದೇ, ‘ಆರೋಪಿ ಶ್ರೀಕೃಷ್ಣ ಜನಧನ್‌ ಖಾತೆಯಿಂದ ಹಣ ಕದ್ದು, ಸುಮಾರು 8 ಸಾವಿರ ಕೋಟಿಯನ್ನು 150 ಮಂದಿ ಖಾತೆಗೆ ವರ್ಗಾವಣೆ ಮಾಡಿದ್ದಾನೆ ಎಂಬ ಆರೋಪ ಕುರಿತು ಸಮಗ್ರ ತನಿಖೆ ನಡೆಯಬೇಕು. ಆರೋಪಿ ಕೇವಲ ಕೂಲಿಕಾರ, ಈತನನ್ನು ಪ್ರಭಾವಿಗಳು ಬಳಸಿಕೊಂಡು ಹ್ಯಾಕ್‌ ಮಾಡಿಸಿ ಹಣ ದೋಚಿದ್ದಾರೆ. ಈತನಿಗೆ ಮಾದಕ ದ್ರವ್ಯಗಳನ್ನು ನೀಡುವ ಮೂಲಕ ಬಲಿಪಶು ಮಾಡಿದ್ದಾರೆ. ಒಂದೊಂದು ತಿಂಗಳು ಈತನನ್ನು ಪ್ರಭಾವಿಗಳು ಬಳಕೆ ಮಾಡಿಕೊಂಡಿದ್ದಾರೆ. ಈತನಿಂದ ಈ ಕೆಲಸಗಳನ್ನು ಮಾಡಿಸಿದವರ ವಿವರ ಬಹಿರಂಗಗೊಳ್ಳಬೇಕು ಎಂದು ಆಗ್ರಹಿಸಿದರು.
ಶ್ರೀಕಿ ಖಾತೆಯಿಂದ ಸಚಿವರು-ಅಧಿಕಾರಿಗಳಿಗೂ ಪಾಲು ಹೋಗಿದ್ಯಾ? ಪೊಲೀಸ್‌ ಅಧಿಕಾರಿಗಳಿಬ್ಬರ ಫೋನ್‌ ಸಂಭಾಷಣೆ ವೈರಲ್‌!
ಕಾಂಗ್ರೆಸ್‌, ಬಿಜೆಪಿ ಯಾವ ಪಕ್ಷದವರೇ ಆಗಲಿ ಹಗರಣದಲ್ಲಿ ಭಾಗಿಯಾಗಿದ್ದವರ ಹೆಸರು ಬಹಿರಂಗಗೊಳಿಸಬೇಕು. ಬಿಟ್‌ ಕಾಯಿನ್‌ ಹಗರಣವನ್ನು ಸುಪ್ರೀಂಕೋರ್ಟ್‌ ಹಾಲಿ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕು. ಉನ್ನತ ಐಪಿಎಸ್‌ ಅಧಿಕಾರಿಯೊಬ್ಬರ ಅಳಿಯನ ಹೆಸರೂ ಈ ಹಗರಣದಲ್ಲಿ ಕೇಳಿ ಬಂದಿದೆ. ಹಾಗಾಗಿ, ಪೊಲೀಸ್‌ ತನಿಖೆಯಿಂದ ಸತ್ಯ ಗೊತ್ತಾಗುವುದು ಕಷ್ಟ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಮೆರಿಕದ ಅಧ್ಯಕ್ಷರೇ ಆರೋಪಿ ಕುರಿತು ಮಾಹಿತಿ ನೀಡಿದ್ದರಿಂದ ಈ ಪ್ರಕರಣ ಬೆಳಕಿಗೆ ಬಂತು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ