ಆ್ಯಪ್ನಗರ

ಮೈಸೂರು: ವಿವಾದಿತ ಸ್ಥಳದಲ್ಲಿ ನಡೆಯುತ್ತಿದ್ದ ಗೋರಿ ಪೂಜೆ ತಡೆದ ಸಂಸದ ಪ್ರತಾಪ್‌ ಸಿಂಹ!

ಈ ವಿವಾದಿತ ಜಮೀನು ವ್ಯಾಜ್ಯ ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೆ ಯಾವುದೇ ಕಾರ್ಯ ನಡೆಸದಂತೆ ಸ್ಥಳೀಯರಿಗೆ ಸೂಚಿಸಿ, ಗ್ರಾಮದಲ್ಲಿ ಸೌಹಾರ್ದತೆ ಕಾಪಾಡುವಂತೆ ಎಸ್‌ಐ ಶಿವಪ್ರಕಾಶ್‌ ಅವರಿಗೆ ಸೂಚಿಸಿದರು. ಈ ವೇಳೆ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗಾನಂದ ಕುಮಾರ್‌, ತಾಲೂಕು ಅಧ್ಯಕ್ಷ ಹಳ್ಳದ ಕೊಪ್ಪಲು ನಾಗಣ್ಣ, ರಾಜೇಂದ್ರ, ಅಪ್ಪಣ್ಣ, ಇದ್ರೀಸ್‌ ಅಹಮದ್‌ ಸೇರಿದಂತೆ ಅನೇಕರಿದ್ದರು.

Vijaya Karnataka Web 19 Jan 2021, 7:29 am
ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿಯ ವಿವಾದಿತ ಸ್ಥಳದಲ್ಲಿ ಭಾನುವಾರ ಖಾದ್ರಿ ಗೋರಿಗೆ ಪೂಜೆ, ಸಾಮೂಹಿಕ ಭೋಜನಕ್ಕೆ ತಯಾರಿ ನಡೆಸುತ್ತಿದ್ದ ಸ್ಥಳಕ್ಕೆ ಸಂಸದ ಪ್ರತಾಪ ಸಿಂಹ ದಿಢೀರ್‌ ಭೇಟಿ ನೀಡಿ ಇಲ್ಲಿ ಯಾವುದೇ ಧಾರ್ಮಿಕ ಕಾರ್ಯ ನಡೆಸದಂತೆ ತಾಕೀತು ಮಾಡಿದರು. ಹುಣಸೂರು ತಾಲೂಕಿನ ಕಟ್ಟೆಮಳಲವಾಡಿಯ ಸಿಡಿಯಮ್ಮ ದೇವಾಲಯದ ಮುಂಭಾಗದ ಸರ್ವೆ ನಂ.24ರಲ್ಲಿ 8.2 ಗುಂಟೆ ಜಮೀನನ್ನು 1964ರ ಮಂಜೂರಾತಿಯಂತೆ ಕಂದಾಯ ಇಲಾಖೆ 2018ರಲ್ಲಿ ವಕ್ಫ್ ಬೋರ್ಡ್‌ಗೆ ಖಾತೆ ಮಾಡಿತ್ತು.
Vijaya Karnataka Web pratap simha
ಪ್ರತಾಪ್‌ ಸಿಂಹ, ಸಂಸದ (ಸಂಗ್ರಹ ಚಿತ್ರ)


ಆದರೆ ಈ ಜಮೀನು ತಮ್ಮದೆಂದು ಸಿಡಿಯಮ್ಮ ದೇವಾಲಯ ಸಮಿತಿಯವರು ಗ್ರಾಮಸ್ಥರೊಡಗೂಡಿ ಹೋರಾಟ ನಡೆಸಿದ್ದರಲ್ಲದೆ, ಖಾತೆ ರದ್ದುಗೊಳಿಸಲು ಮನವಿ ಸಲ್ಲಿಸಿದ್ದರು. ಅದರಂತೆ ಖಾತೆ ಮಾಡಿದ್ದವರೇ ಹಿರಿಯ ಅಧಿಕಾರಿಗಳಿಗೆ ಖಾತೆ ರದ್ದುಗೊಳಿಸಲು ವರದಿ ನೀಡಿದ್ದರು. ಅಂದಿನಿಂದ ವಿವಾದಿತ ನಿವೇಶನದಲ್ಲಿ ಯಾವುದೇ ಕಾರ್ಯ ನಡೆಸದೆ ಯಥಾಸ್ಥಿತಿ ಕಾಯ್ದುಕೊಳ್ಳಲು ನ್ಯಾಯಾಲಯ ಸೂಚಿಸಿತ್ತು.

ಇದೀಗ ದಿಢೀರ್‌ ಆಗಿ ವಿವಾದಿತ ಸ್ಥಳದಲ್ಲಿದ್ದ ಖಾದ್ರಿಯವರ ಗೋರಿಗೆ ಸುಣ್ಣಬಣ್ಣ ಬಳಿದು, ಪೂಜೆ ಸಲ್ಲಿಸಿದ ಕೆಲವರು, ಶಾಮಿಯಾನ ಹಾಕಿ, ಸಾಮೂಹಿಕ ಭೋಜನಕ್ಕಾಗಿ ಅಡುಗೆ ತಯಾರಿಯಲ್ಲಿದ್ದರು. ಈ ವೇಳೆ ಸ್ಥಳೀಯ ಮುಖಂಡರು ಕಟ್ಟೆಮಳಲವಾಡಿ ಮಾರ್ಗದಲ್ಲಿ ತೆರಳುತ್ತಿದ್ದ ಸಂಸದರಿಗೆ ಮಾಹಿತಿ ನೀಡಿದರು.

ಬೆಮೆಲ್ ಸಂಸ್ಥೆಯ‌ ಖಾಸಗೀಕರಣಕ್ಕೆ ನೌಕರರಿಂದ ವಿರೋಧ

ತಕ್ಷಣ ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿದ ಸಂಸದ ಪ್ರತಾಪಸಿಂಹ, ಅಡುಗೆ ತಯಾರಿಯಲ್ಲಿದ್ದವರನ್ನು ತರಾಟೆಗೆ ತೆಗೆದುಕೊಂಡರು. ಈ ನಿವೇಶನದ ವಿವಾದವು ನ್ಯಾಯಾಲಯದಲ್ಲಿದ್ದು, ಯಾವುದೇ ಕಾರ್ಯ ನಡೆಸುವಂತಿಲ್ಲ. ಒಂದು ವೇಳೆ ನಡೆಸಿದರೆ ಅದು ನ್ಯಾಯಾಂಗ ನಿಂದನೆಯಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟರು. ನಂತರ ಸಂಘಟಕರು ಅಡುಗೆ ತಯಾರಿಯನ್ನು ಸ್ಥಗಿತಗೊಳಿಸಿ ಶಾಮಿಯಾನ ತೆರವುಗೊಳಿಸಿದರು.

ಎಸ್‌ಐಗೆ ಸೂಚನೆ! ಈ ವಿವಾದಿತ ಜಮೀನು ವ್ಯಾಜ್ಯ ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೆ ಯಾವುದೇ ಕಾರ್ಯ ನಡೆಸದಂತೆ ಸ್ಥಳೀಯರಿಗೆ ಸೂಚಿಸಿ, ಗ್ರಾಮದಲ್ಲಿ ಸೌಹಾರ್ದತೆ ಕಾಪಾಡುವಂತೆ ಎಸ್‌ಐ ಶಿವಪ್ರಕಾಶ್‌ ಅವರಿಗೆ ಸೂಚಿಸಿದರು. ಈ ವೇಳೆ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗಾನಂದ ಕುಮಾರ್‌, ತಾಲೂಕು ಅಧ್ಯಕ್ಷ ಹಳ್ಳದ ಕೊಪ್ಪಲು ನಾಗಣ್ಣ, ರಾಜೇಂದ್ರ, ಅಪ್ಪಣ್ಣ, ಇದ್ರೀಸ್‌ ಅಹಮದ್‌ ಸೇರಿದಂತೆ ಅನೇಕರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ