ಆ್ಯಪ್ನಗರ

Bharath Jodo Yatra - ಭಾರತ್ ಜೋಡೋ ಯಾತ್ರೆ ವಿರುದ್ಧ ಕಪ್ಪು ಬಾವುಟ ಪ್ರದರ್ಶನಕ್ಕೆ ಬಿಜೆಪಿ ಸಿದ್ಧತೆ: ಡಿಕೆಶಿ ಆರೋಪ

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ವಿರುದ್ಧ ಬಿಜೆಪಿ ಸೋಮವಾರ ಕಪ್ಪುಭಾವುಟ ಪ್ರದರ್ಶನಕ್ಕೆ ಸಿದ್ಧತೆ ನಡೆಸಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಬಿಜೆಪಿಗರಿಗೆ ಕಣ್ಣು, ಕಿವಿ, ಹೃದಯ ಇಲ್ಲ. ಕಪ್ಪು ಬಾವುಟ, ಮೊಟ್ಟೆ, ಕಲ್ಲು ಎಸೆಯುವುದು ಧಿಕ್ಕಾರ ಕೂಗುವುದು ಮಾಡಿ. ದೇಶಕ್ಕೆ ಪ್ರಾಣ ಕೊಟ್ಟ ಪಕ್ಷದ ನಾಯಕರು ನಾವು. ನೀವು ಮಾಡಿ ಅದಕ್ಕೆ ಫಲ ಮುಂದಕ್ಕೆ ತಿಳಿಸುತ್ತೇನೆ ಎಂದು ಬಿಜೆಪಿಗೆ ಅವರು ಎಚ್ಚರಿಕೆ ನೀಡಿದ್ದಾರೆ.

Authored byಇರ್ಷಾದ್ ಉಪ್ಪಿನಂಗಡಿ | Vijaya Karnataka Web 2 Oct 2022, 3:54 pm
ಮೈಸೂರು: ಭಾರತ್ ಜೋಡೋ ಯಾತ್ರೆಗೆ ವಿರೋಧ ವ್ಯಕ್ತಪಡಿಸಿ ಸೋಮವಾರ ಕಪ್ಪು ಬಾವುಟ ಪ್ರದರ್ಶನಕ್ಕೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಈ ಬಗ್ಗೆ ಭಾನುವಾರ ನಂಜನಗೂಡಿನ ಬದನವಾಳುನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನಾಳೆ ಕಪ್ಪು ಬಾವುಟ ಪ್ರದರ್ಶನಕ್ಕೆ ತಯಾರಿ ಮಾಡಿದ್ದಾರೆ ಎಂದರು.
Vijaya Karnataka Web DK Shivakumar | ಕನಕಪುರ: ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಸಿಬಿಐ ತಂಡ ದಾಳಿ, ಆಸ್ತಿ ದಾಖಲೆಗಳ ಪರಿಶೀಲನೆ
ಡಿ.ಕೆ.ಶಿವಕುಮಾರ್(ಸಂಗ್ರಹ ಚಿತ್ರ)


ಈ ಬಗ್ಗೆ ನಾನು ನಗರ ಪೊಲೀಸ್ ಕಮಿಷನರ್ ಗೆ ಮಾತನಾಡುತ್ತೇನೆ. ಆದರೆ ಕಪ್ಪು ಬಾವುಟ, ಮೊಟ್ಟೆ, ಕಲ್ಲು ಎಸೆಯುವುದು ಧಿಕ್ಕಾರ ಕೂಗುವುದು ಮಾಡಿ. ದೇಶಕ್ಕೆ ಪ್ರಾಣ ಕೊಟ್ಟ ಪಕ್ಷದ ನಾಯಕರು ನಾವು. ನೀವು ಮಾಡಿ ಅದಕ್ಕೆ ಫಲ ಮುಂದಕ್ಕೆ ತಿಳಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಕಪ್ಪು ಬಾವುಟ, ಮೊಟ್ಟೆ, ಕಲ್ಲು ಎಸೆಯುವುದು ಧಿಕ್ಕಾರ ಕೂಗುವುದು ಮಾಡಿ. ದೇಶಕ್ಕೆ ಪ್ರಾಣ ಕೊಟ್ಟ ಪಕ್ಷದ ನಾಯಕರು ನಾವು. ನೀವು ಮಾಡಿ ಅದಕ್ಕೆ ಫಲ ಮುಂದಕ್ಕೆ ತಿಳಿಸುತ್ತೇನೆ
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ಇದೇ ಸಂದರ್ಭದಲ್ಲಿ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ಹತಾಶರಾದವರಿಗೆ ನಾಲಗೆಯಲ್ಲಿ ಮೂಳೆ ಇಲ್ಲ. ರವಿಕುಮಾರ್ ಅಲ್ಲ, ಸಿಎಂ ಅವರಿಗೆ ಮಾತನಾಡಲು ಹೇಳಿ ಉತ್ತರ ಕೊಡುತ್ತೇನೆ ಎಂದರು‌.
ರಾಹುಲ್ ಗಾಂಧಿಗೆ ಪ್ರಶ್ನೆ ಬಿಡುಗಡೆ ಮಾಡಲಿ ಉತ್ತರ ಕೊಡುತ್ತೇವೆ. ನಾವು ದಿನಾ ಪ್ರಶ್ನೆ ಕೇಳುತ್ತಿದ್ದೇವೆ ಅವರಿಗೆ, ಮೊದಲು ಅದಕ್ಕೆ ಉತ್ತರ ಕೊಡಲಿ ಎಂದರು.

ಚಾಮರಾಜನಗರ ದುರಂತದ ಸಂತ್ರಸ್ತರ ಜೊತೆಗೆ ಸಂವಾದದ ಸಂದರ್ಭದಲ್ಲಿ ನಾನು ಕಣ್ಣೀರು ಹಾಕಿದ್ದಕ್ಕೆ ವ್ಯಂಗ್ಯ ಮಾಡಲಿ, ಅವರಿಗೆ ಹೃದಯ ಮಾನವೀಯತೆ ಇದ್ದರೆ ತಾನೇ? ಅವರಿಗೆ ನಾಚಿಕೆ ಆಗಬೇಕು. ಚಾಮರಾಜನಗರ ಆಕ್ಸಿಜನ್ ದುರಂತ ಆದಾಗ ಜಿಲ್ಲಾ ಉಸ್ತುವಾರಿ, ಆರೋಗ್ಯ ಸಚಿವರು ಸೌಜನ್ಯಕ್ಕಾಗಿ ಸಂತ್ರಸ್ತರನ್ನು ಭೇಟಿ ಮಾಡಿಲ್ಲ ಎಂದು ಆರೋಪಿಸಿದರು.

ಬಿಜೆಪಿಗರಿಗೆ ಕಣ್ಣು, ಕಿವಿ, ಹೃದಯ ಇಲ್ಲ
ಸಿದ್ದರಾಮಯ್ಯ ಹಾಗೂ ನಾನು ಭೇಟಿ ಮಾಡಿ ಮಾತುಕತೆ ನಡೆಸಿದ್ವಿ, ಅವರ ಸಾವಿನ ಬಗ್ಗೆ ನಮ್ಮಲ್ಲಿ ದಾಖಲೆ ಇದೆ. ಪ್ರತಿ ಮನೆಯಲ್ಲಿ ಕುಳಿತು ಮಾತನಾಡಿದ್ದೇನೆ. ಆ ನೋವು ನನಗೆ ಗೊತ್ತಿದೆ. ಆ ಹೆತ್ತ ತಾಯಿ, ಆ ಮಕ್ಕಳ ಕನಸು ಏನು ಎಂದು ಗೊತ್ತಿದೆ. ಬಿಜೆಪಿಗರಿಗೆ ಕಣ್ಣು ಕಿವಿ ಹೃದಯ ಇಲ್ಲ.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ