ಆ್ಯಪ್ನಗರ

ಬಿಜೆಪಿ, ಅನರ್ಹರು ನಮ್ಮ ಟಾರ್ಗೆಟ್‌: ಸಿದ್ದರಾಮಯ್ಯ

ಉಪ ಚುನಾವಣೆಯಲ್ಲಿಅನರ್ಹ ಶಾಸಕರು ಹಾಗೂ ಬಿಜೆಪಿ ನಮ್ಮ ಟಾರ್ಗೆಟ್‌ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Vijaya Karnataka 18 Nov 2019, 5:00 am
ಮೈಸೂರು: ಉಪ ಚುನಾವಣೆಯಲ್ಲಿ ಅನರ್ಹ ಶಾಸಕರು ಹಾಗೂ ಬಿಜೆಪಿ ನಮ್ಮ ಟಾರ್ಗೆಟ್‌ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
Vijaya Karnataka Web Siddaramaiah6


ನಗರದಲ್ಲಿ ಭೋವಿ ಹಿತರಕ್ಷಣಾ ಸಮಿತಿಯ ಕಟ್ಟಡ ನಿರ್ಮಾಣ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭ ಸುದ್ದಿಗಾರ ರೊಂದಿಗೆ ಮಾತನಾಡಿದರು.

''ಅನರ್ಹ ಶಾಸಕರಲ್ಲಿ ಕೆಲವರು ನನ್ನ ಬಂಡವಾಳ ಬಿಚ್ಚಿಡುವುದಾಗಿ, ಈಗ ಟ್ರೈಲರ್‌ ಬಿಟ್ಟಿರುವುದಾಗಿ ಹೇಳುತ್ತಿದ್ದಾರೆ. ಅವರು ಇಷ್ಟು ವರ್ಷ ಏಕೆ ಬಿಚ್ಚಿಡಲಿಲ್ಲ? ಬಂಡವಾಳ ಇದ್ದರೆ ತಾನೆ ಬಿಚ್ಚಿಡುವುದು. ಅವರ ವಿರುದ್ಧ ಸ್ಪೀಕರ್‌ಗೆ ದೂರು ಕೊಟ್ಟು, ವಕೀಲರನ್ನು ಇಟ್ಟು ವಾದ ಮಾಡಿಸಿ ಅನರ್ಹ ಮಾಡಿದ್ದೇ ನಾನು. ಇದರಿಂದ ಅವರೆಲ್ಲಹತಾಶರಾಗಿದ್ದಾರೆ. ಬುದ್ಧಿ ಚಂಚಲವಾಗಿ ಏನೇನೋ ಮಾತನಾಡುತ್ತಿದ್ದಾರೆ. ಈ ಚುನಾವಣೆಯಲ್ಲಿನಮ್ಮ ಟಾರ್ಗೆಟ್‌ ಅನರ್ಹರು ಹಾಗೂ ಬಿಜೆಪಿ,'' ಎಂದು ಹೇಳಿದರು.

''ಗೆದ್ದಲ್ಲಿಮಂತ್ರಿಯಾಗಿ ಕ್ಷೇತ್ರದ ಅಭಿವೃದ್ಧಿ ಮಾಡುವುದಾಗಿ ಕೆಲವರು ಹೇಳುತ್ತಿದ್ದಾರೆ. ಅವರಿಗೆ ಮಾನ ಮರ್ಯಾದೆ ಇದ್ದಲ್ಲಿ ಈ ರೀತಿ ಹೇಳುತ್ತಾರಾ? ಸುಪ್ರೀಂಕೋರ್ಟ್‌ ಕೂಡ ಅನರ್ಹತೆಯನ್ನು ಎತ್ತಿಹಿಡಿದಿದೆ. ಇದೀಗ ಜನರು ತೀರ್ಮಾನ ಮಾಡುತ್ತಾರೆ. ಮುಂದೆ ಗೆದ್ದು ಕ್ಷೇತ್ರದ ಅಭಿವೃದ್ಧಿ ಮಾಡುತ್ತಾರಂತೆ. ಈ ಹಿಂದೆ ಏಕೆ ಅವರಿಗೆ ಅಭಿವೃದ್ಧಿ ಮಾಡಲು ಸಾಧ್ಯವಾಗಲಿಲ್ಲ. ವಿಶ್ವನಾಥ್‌ ಇದೀಗ ಹುಣಸೂರು ಜಿಲ್ಲೆಯ ಮಾತನಾಡುತ್ತಿದ್ದಾರೆ. ಈ ಹಿಂದಿನ ಚುನಾವಣೆಯಲ್ಲಿಏಕೆ ಅವರು ಜಿಲ್ಲೆಪ್ರಸ್ತಾಪಿಸಲಿಲ್ಲ. ಈಗ ಜಿಲ್ಲೆಯನ್ನು ಒಡೆಯುವ ಮಾತನಾಡು ತ್ತಿದ್ದಾರೆ. ಅನರ್ಹರ ಈ ನಾಟಕವನ್ನು ಜನರು ನಂಬುವುದಿಲ್ಲ,'' ಎಂದು ಹೇಳಿದರು.

ಈ ಚುನಾವಣೆಯನ್ನು ಕಾಂಗ್ರೆಸ್‌ ಸಾಮೂಹಿಕ ನಾಯಕತ್ವದಲ್ಲಿಎದುರಿಸಲಿದೆ. 15 ಸ್ಥಾನಗಳನ್ನು ಗೆಲ್ಲುವುದು ನಮ್ಮ ಗುರಿ. ಕನಿಷ್ಠ 12 ಕ್ಷೇತ್ರಗಳಲ್ಲಿಗೆದ್ದೇ ಗೆಲ್ಲುವ ವಿಶ್ವಾಸವಿದೆ. ನಮ್ಮ ಪಕ್ಷದಲ್ಲಿಯಾವುದೇ ಬಂಡಾಯ ಹಾಗೂ ಅಸಮಾಧಾನವಿಲ್ಲ,'' ಎಂದು ಸ್ಪಷ್ಟಪಡಿಸಿದರು. ''ಮಹಾರಾಷ್ಟ್ರದಲ್ಲಿಶಿವಸೇನೆ ಯೊಂದಿಗೆ ಕಾಂಗ್ರೆಸ್‌ ಮೈತ್ರಿಗೆ ಸಮ್ಮತಿ ಸುವ ಸಾಧ್ಯತೆ ಕುರಿತು ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ. ಆದರೆ, ನಾವು ಹಿಂದುತ್ವಕ್ಕೆ ವಿರುದ್ಧವಿಲ್ಲ. ಶಿವಸೇನೆ ಈಗ ಎನ್‌ಡಿಎನಲ್ಲಿಇಲ್ಲ. ಮೂರು ಪಕ್ಷಗಳು ಮೈತ್ರಿ ಮಾಡಿಕೊಂಡರೆ ತಪ್ಪೇನಿಲ್ಲ. ಶಿವಸೇನೆ ಹಾದಿ ತಪ್ಪಿದರೆ ನಾವು ಎಚ್ಚರಿಸಲು ಹಿಂಜರಿಯವು ದಿಲ್ಲ,'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ