ಆ್ಯಪ್ನಗರ

ಲಂಚ: ಎಸಿಬಿ ಬಲೆಗೆ ಎಫ್‌ಡಿಎ

ಪ್ಯಾರಾ ಮಾಸ್ಟರ್ಸ್‌ ಟೂರ್ನಿಯಲ್ಲಿ ಪದಕ ಗೆದ್ದ ಹಿನ್ನೆಲೆಯಲ್ಲಿ ಪಾಲಿಕೆಯಿಂದ ನೀಡಲಾಗುವ ಪ್ರೋತ್ಸಾಹ ಧನ ಬಿಡುಗಡೆಗೆ ಲಂಚದ ಬೇಡಿಕೆ ಇಟ್ಟ ಪ್ರಥಮ ದರ್ಜೆ ಸಹಾಯಕನನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.

Vijaya Karnataka 11 Aug 2018, 5:00 am
ಮೈಸೂರು: ಪ್ಯಾರಾ ಮಾಸ್ಟರ್ಸ್‌ ಟೂರ್ನಿಯಲ್ಲಿ ಪದಕ ಗೆದ್ದ ಹಿನ್ನೆಲೆಯಲ್ಲಿ ಪಾಲಿಕೆಯಿಂದ ನೀಡಲಾಗುವ ಪ್ರೋತ್ಸಾಹ ಧನ ಬಿಡುಗಡೆಗೆ ಲಂಚದ ಬೇಡಿಕೆ ಇಟ್ಟ ಪ್ರಥಮ ದರ್ಜೆ ಸಹಾಯಕನನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web bribery acb trap fda
ಲಂಚ: ಎಸಿಬಿ ಬಲೆಗೆ ಎಫ್‌ಡಿಎ


ನಗರ ಪಾಲಿಕೆಯ ಎಫ್‌ಡಿಎ ತೇಜ್‌ ಕುಮಾರ್‌ ಎಸಿಬಿ ಬಲೆಗೆ ಬಿದ್ದ ನೌಕರ. ಈತ ಪ್ಯಾರಾ ಮಾಸ್ಟರ್ಸ್‌ ಟೂರ್ನಿಯಲ್ಲಿ ಪದಕ ಗೆದ್ದವರಿಗೆ ಪಾಲಿಕೆಯಿಂದ ನೀಡಲಾಗುವ ಪ್ರೋತ್ಸಾಹ ಧನ ಬಿಡುಗಡೆಗೆ ಪ್ರಭುಸ್ವಾಮಿ, ಸಿಂಚನಾ ಎನ್ನುವವರಿಂದ 4,500 ರೂ.ಗಳ ಲಂಚದ ಬೇಡಿಕೆ ಇಟ್ಟಿದ್ದ. ಈ ಸಂಬಂಧ ಪ್ರಭುಸ್ವಾಮಿ ಎಸಿಬಿಗೆ ದೂರು ನೀಡಿದ್ದರು.

''ಪ್ರಭುಸ್ವಾಮಿ ಅವರು ನೀಡಿದ ದೂರಿನನ್ವಯ ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿ ಎಫ್‌ಡಿಎ ತೇಜ್‌ಕುಮಾರ್‌ನನ್ನು ಬಂಧಿಸಲಾಗಿದೆ'' ಎಂದು ಎಸಿಬಿ ಎಸ್ಪಿ ಡಾ.ಎಚ್‌.ಟಿ.ಶೇಖರ್‌ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಎಸಿಬಿ ಡಿವೈಎಸ್ಪಿ ಉಮೇಶ್‌ ಜಿ ಸೇಠ್‌, ಇನ್ಸ್‌ಪೆಕ್ಟರ್‌ ವಿನಯ್‌ ಭಾಗಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ