ಮೈಸೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಭಿಮಾನಿಯೊಬ್ಬರು ಚಾಮುಂಡಿ ತಾಯಿಗೆ ವಿಚಿತ್ರ ರೀತಿಯಲ್ಲಿ ಹರಕೆ ಸಲ್ಲಿಸಿದ್ದಾರೆ. ಸಿಎಂ ಯಡಿಯೂರಪ್ಪ ಹಾಗೂ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಕೊರೊನಾ ವೈರಸ್ ಸೋಂಕಿನಿಂದ ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿ, ಮೈಸೂರು ನಗರ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಕಾರ್ತಿಕ್ ಕುಮಾರ್ ಅವರು ಚಾಮುಂಡಿ ಬೆಟ್ಟದ ಮೆಟ್ಟಿಲುಗಳನ್ನು ಮಂಡಿಯ ಮೂಲಕ ಹತ್ತಿ ಸೇವೆ ಸಲ್ಲಿಸಿದರು.
ಇದಾದ ಬಳಿಕ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು, ಸಿಎಂ ಯಡಿಯೂರಪ್ಪನವರು ಗುಣಮುಖರಾಗುವವರೆಗೂ ಪಾದರಕ್ಷೆಯನ್ನು ತೊಡುವುದಿಲ್ಲವೆಂದು ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಶಪಥಗೈದರು.
ಸಿದ್ದರಾಮಯ್ಯ, ಯಡಿಯೂರಪ್ಪಗೆ ಕೋವಿಡ್; ಗುಣಮುಖರಾಗಲೆಂದು ಪೂಜೆ ಸಲ್ಲಿಸಿದ ಡಿಕೆಶಿ
ಬಳಿಕ ಮಾತನಾಡಿದ ಕಾರ್ತಿಕ್, ಯಡಿಯೂರಪ್ಪನವರು ಯೋಗ ವ್ಯಾಯಾಮಗಳಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡಿದ್ದಾರೆ. ಅವರಿಗೆ ಮನೋಬಲವು ಹೆಚ್ಚಾಗಲು ಕಾರಣ ಅವರಲ್ಲಿರುವ ದೈವೀ ಶಕ್ತಿ ಮತ್ತು ಜನರ ಹಾರೈಕೆ ಎಂದರು.
ಮಣಿಪಾಲ್ ಆಸ್ಪತ್ರೆಯ 11 ನೇ ಮಹಡಿಯಲ್ಲಿ ಹಾಲಿ, ಮಾಜಿ ಸಿಎಂಗಳಿಗೆ ಕೋವಿಡ್ ಚಿಕಿತ್ಸೆ
ಇದೇ ಕಾರಣಕ್ಕಾಗಿ ತಾವು ದೇವರ ಮೊರೆಹೋಗಿ ನಮ್ಮ ರಾಜ್ಯದ ಅಗ್ರಗಣ್ಯ ನಾಯಕರಿಗೆ ಹಾಗೂ ಕೊರೊನಾ ಸೋಂಕಿನಿಂದ ನರಳುತ್ತಿರುವ ದೇಶದ ಎಲ್ಲಾ ಕೊರೊನಾ ಸೋಂಕಿತರ ಒಳಿತಿಗಾಗಿ ದೇವರಲ್ಲಿ ಬೇಡಿಕೊಂಡಿದ್ದೇನೆ ಎಂದರು.
ಬಿಎಸ್ವೈ ಶೀಘ್ರ ಗುಣಮುಖರಾಗಲಿ: ಶೆಟ್ಟರ್ ಹಾರೈಕೆ
ಇದಾದ ಬಳಿಕ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು, ಸಿಎಂ ಯಡಿಯೂರಪ್ಪನವರು ಗುಣಮುಖರಾಗುವವರೆಗೂ ಪಾದರಕ್ಷೆಯನ್ನು ತೊಡುವುದಿಲ್ಲವೆಂದು ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಶಪಥಗೈದರು.
ಸಿದ್ದರಾಮಯ್ಯ, ಯಡಿಯೂರಪ್ಪಗೆ ಕೋವಿಡ್; ಗುಣಮುಖರಾಗಲೆಂದು ಪೂಜೆ ಸಲ್ಲಿಸಿದ ಡಿಕೆಶಿ
ಬಳಿಕ ಮಾತನಾಡಿದ ಕಾರ್ತಿಕ್, ಯಡಿಯೂರಪ್ಪನವರು ಯೋಗ ವ್ಯಾಯಾಮಗಳಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡಿದ್ದಾರೆ. ಅವರಿಗೆ ಮನೋಬಲವು ಹೆಚ್ಚಾಗಲು ಕಾರಣ ಅವರಲ್ಲಿರುವ ದೈವೀ ಶಕ್ತಿ ಮತ್ತು ಜನರ ಹಾರೈಕೆ ಎಂದರು.
ಮಣಿಪಾಲ್ ಆಸ್ಪತ್ರೆಯ 11 ನೇ ಮಹಡಿಯಲ್ಲಿ ಹಾಲಿ, ಮಾಜಿ ಸಿಎಂಗಳಿಗೆ ಕೋವಿಡ್ ಚಿಕಿತ್ಸೆ
ಇದೇ ಕಾರಣಕ್ಕಾಗಿ ತಾವು ದೇವರ ಮೊರೆಹೋಗಿ ನಮ್ಮ ರಾಜ್ಯದ ಅಗ್ರಗಣ್ಯ ನಾಯಕರಿಗೆ ಹಾಗೂ ಕೊರೊನಾ ಸೋಂಕಿನಿಂದ ನರಳುತ್ತಿರುವ ದೇಶದ ಎಲ್ಲಾ ಕೊರೊನಾ ಸೋಂಕಿತರ ಒಳಿತಿಗಾಗಿ ದೇವರಲ್ಲಿ ಬೇಡಿಕೊಂಡಿದ್ದೇನೆ ಎಂದರು.
ಬಿಎಸ್ವೈ ಶೀಘ್ರ ಗುಣಮುಖರಾಗಲಿ: ಶೆಟ್ಟರ್ ಹಾರೈಕೆ