ಆ್ಯಪ್ನಗರ

ಬೌದ್ಧರಿಗೂ ಮರಗಳಿಗೂ ಅವಿನಾಭಾವ ಸಂಬಂಧ: ರತ್ನವಜ್ರ

ಬೌದ್ಧರಿಗೂ ಮರಗಳಿಗೂ ಅವಿನಾಭಾವ ಸಂಭಂದವಿದ್ದು ಪ್ರಕೃತಿಯನ್ನು ಉಳಿಸುವಲ್ಲಿ ಎಲ್ಲರೂ ಜವಾಬ್ದಾರಿಯಿಂದ ಮುಂದಾಗಬೇಕು ಎಂದು ಟಿಬೇಟಿಯನ್‌ ಹಿರಿಯ ಧರ್ಮಗುರು 42ನೇ ಯಾಬ್ಗೋನ್‌ ಗೋನ್ಮ ಟ್ರಿಜಿನ್‌ ರತ್ನವಜ್ರ ತಿಳಿಸಿದರು.

Vijaya Karnataka 14 Aug 2019, 5:00 am
ಪಿರಿಯಾಪಟ್ಟಣ : ಬೌದ್ಧರಿಗೂ ಮರಗಳಿಗೂ ಅವಿನಾಭಾವ ಸಂಭಂದವಿದ್ದು ಪ್ರಕೃತಿಯನ್ನು ಉಳಿಸುವಲ್ಲಿ ಎಲ್ಲರೂ ಜವಾಬ್ದಾರಿಯಿಂದ ಮುಂದಾಗಬೇಕು ಎಂದು ಟಿಬೇಟಿಯನ್‌ ಹಿರಿಯ ಧರ್ಮಗುರು 42ನೇ ಯಾಬ್ಗೋನ್‌ ಗೋನ್ಮ ಟ್ರಿಜಿನ್‌ ರತ್ನವಜ್ರ ತಿಳಿಸಿದರು.
Vijaya Karnataka Web MYR-MYS13PYP1


ತಾಲೂಕಿನ ಬೈಲುಕುಪ್ಪೆ ಟಿಬೇಟಿಯನ್‌ ನಿರಾಶ್ರಿತರ ಶಿಬಿರದ ಕಗ್ಯುನಳಂದ ಧರ್ಮಶಾಲೆಯ ಆವರಣದಲ್ಲಿ ನವಗ್ರಹ ವನ ನಿರ್ಮಾಣದ ಅಂಗವಾಗಿ ಗಿಡನೆಟ್ಟು ಅವರು ಮಾತನಾಡಿದರು.

ಪ್ರತಿಯೊಬ್ಬ ಮನುಷ್ಯನು ಪ್ರಕೃತಿಯ ಮೇಲೆ ಅಲಂಬಿತನಾಗಿದ್ದಾನೆ. ಬುದ್ಧನ ಅನುಯಾಯಿಗಳಾದ ನಾವು ಬೌದ್ಧ ಭಿಕ್ಕುಗಳು ಕೂಡ ಮರಗಳ ಮೇಲೆ ವಿಶೇಷ ಪ್ರೀತಿಯನ್ನು ಇರಿಸಿಕೊಂಡಿದ್ದೇವೆ. ಬುದ್ಧ ತಮ್ಮ ಮೊದಲ ಬೋಧನೆ ಮಾಡಿದ್ದು ಕಾಡಿನಲ್ಲಿ ಮರದ ಕೆಳಗೆ ಹಾಗೆ ಬುದ್ಧನಿಗೆ ಜ್ಞಾನೋದಯವಾಗಿದ್ದು ಮರದ ಅಡಿಯಲ್ಲಿಯೆ. ಅಲ್ಲದೆ ಬುದ್ಧ ಪರಿನಿರ್ವಾಣ ಹೊಂದಿದ್ದು ಕೂಡ ಎರಡು ಮರಗಳ ಮಧ್ಯದಲ್ಲೇ. ಆದ್ದರಿಂದ ಬೌದ್ಧರಾದ ನಾವು ಪ್ರಕೃತಿಯನ್ನು ಪ್ರೀತಿಯಿಂದ ಕಾಣುತ್ತೆವೆ ಎಂದರು.

ಕಗ್ಯುನಳಂದ ಧರ್ಮಶಾಲೆಯ ಆವರಣದಲ್ಲಿ ಉತ್ತಮವಾಗಿ ಮರಗಳನ್ನು ಬೆಳೆಸುವುದರ ಮೂಲಕ ಪ್ರಕೃತಿಗೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ. ಸಾವಿರಾರು ಮರಗಳನ್ನು ಬೌದ್ಧ ಭಿಕ್ಕುಗಳು ಬೆಳೆಸಿರುವುದು ಇತರರಿಗೆ ಮಾದರಿಯಾಗಿದ್ದು ಎಲ್ಲರೂ ಇದನ್ನು ಅನುಸರಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡಬೇಕು ಎಂದು ತಿಳಿಸಿದರು.

ಕರ್ಮರಿಂಪೂಚೆ ಮಾತನಾಡಿ, ಸ್ಥಳೀಯರ ಸಹಕಾರದಿಂದ ವನ ನಿರ್ಮಾಣ ಸಾಧ್ಯವಾಗಿದ್ದು ಮುಂದಿನ ದಿನಗಳಲ್ಲಿ ಹೀಗೆ ಮರಗಳನ್ನು ಹೆಚ್ಚು ಬೆಳವಣಿಗೆಯಾಗಿ ಮತ್ತಷ್ಟು ವನ ನಿರ್ಮಾಣವಾದರೆ ಕಾವೇರಿ ನದಿಗೆ ಇಲ್ಲಿಂದಲೆ 72 ಲಕ್ಷ ಲೀಟರ್‌ ನೀರು ಸರಬರಾಜಾಗುತ್ತದೆ. ಮರಗಳು ನೀರನ್ನು ಹಿಡಿದಿಟ್ಟುಕೊಂಡು ಭೂಮಿಗೆ ನೀಡುವುದರಿಂದ ಅಂತರ್‌ಜಲದ ಮಟ್ಟ ಹೆಚ್ಚಾಗುವುದರ ಜೊತೆಗೆ ಉತ್ತಮ ವಾತಾವರಣ ಹೆಚ್ಚಲಿದೆ ಎಂದರು.

ಸಾಂಪ್ರದಾಯಿಕ ಸ್ವಾಗತ

ಬೈಲುಕುಪ್ಪೆ ಶಿಬಿರದಲ್ಲಿ ಕೆಲವು ದಿನಗಳಿಂದ ಉಳಿದುಕೊಂಡಿರುವ ಹಿರಿಯ ಧರ್ಮಗುರು 42ನೇ ಯಾಬ್ಗೋನ್‌ ಗೋನ್ಮ ಟ್ರಿಜಿನ್‌ ರತ್ನವಜ್ರ ಅನೇಕ ಧಾರ್ಮಿಕ ಆಚರಣೆಗಳು ಮತ್ತು ಪ್ರವಚನ ಕಾರ್ಯಕ್ರಮಗಲ್ಲಿ ಭಾಗಿಯಾಗಿದ್ದು. ಕಗ್ಯುನಳಂದ ಧರ್ಮಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾಂಪ್ರದಾಯಿಕ ಸ್ವಾಗತ ಕೋರಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಅಲ್ಲದೆ ಗುರೂಜಿಗೆ ಕಗ್ಯುನಳಂದ ಧರ್ಮಶಾಲೆಯಲ್ಲಿ ವನ ನಿರ್ಮಾಣದ ವಿವಿಧ ಹಂತಗಳನ್ನು ವಿವರಿಸಲಾಯಿತು.

ಈ ಸಂದರ್ಭದಲ್ಲಿ ಕಗ್ಯೂನಳಂದ ಧರ್ಮಶಾಲೆಯ ಧರ್ಮಗುರುಗಳು, ಮಾಜಿ ರೋಟರಿ ಅಧ್ಯಕ್ಷ ಬಸವೇಗೌಡ, ಮುಖಂಡ ರವಿ ಸೇರಿದಂತೆ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ