ಆ್ಯಪ್ನಗರ

ಕೊಬ್ಬಿದ ಹೋರಿ ಮಾಂಸ ತಿಂದರೆ ಆರೋಗ್ಯಕ್ಕೆ ಒಳ್ಳೆಯದು: ಮಾಜಿ ಸಿಎಂ ಸಿದ್ದರಾಮಯ್ಯ

ನಾನು ಗೋಮಾಂಸ ತಿಂದಿದ್ದೇನೆ ಎಂದು ಎಲ್ಲಿಯೂ ಹೇಳಲಿಲ್ಲ. ನಾನು ಕೋಳಿ, ಕುರಿ, ಮೇಕೆ ತಿಂದಿದ್ದೇನೆ. ನನಗೆ ತಿನ್ನಬೇಕು ಎಂದು ಅನಿಸಿದರೆ ತಿನ್ನುತ್ತೇನೆ. ಅದನ್ನು ಕೇಳಲು ಇವರು ಯಾರು ಎಂದು ಕೇಳಿದ್ದೇನೆ. ಯಾವ ಆಹಾರ ತಿನ್ನಬೇಕು ಎಂದು ನಿರ್ಧರಿಸುವುದು ನನ್ನ ಹಕ್ಕು, ಎಂದು ಸಿದ್ಧರಾಮಯ್ಯು ಖಾರವಾಗಿ ಪ್ರಶ್ನಿಸಿದರು.

Vijaya Karnataka Web 14 Jan 2021, 6:36 am
ಮೈಸೂರು: ''ಕೊಬ್ಬಿದ ದನದ ಮಾಂಸ ತಿನ್ನಬೇಕು ಎನ್ನುವ ಶ್ಲೋಕ ಇದೆ. ಶ್ಲೋಕ ಬರೆದಿದ್ದು ನಾನಾ? ಸಂಸ್ಕೃತ ಗೊತ್ತಿದ್ದವರು ತಾನೆ ಬರೆದಿರುವುದು? ಚೆನ್ನಾಗಿ ಕೊಬ್ಬಿದ ಹೋರಿ ಮಾಂಸ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಈ ಶ್ಲೋಕ ಮರೆತು ಬಿಟ್ಟಿದ್ದೇನೆ. ಅದನ್ನು ಹೇಳಿದರೆ ವಿವಾದ ಮಾಡಿ ಹಾಕಿಬಿಡುತ್ತೀರಿ,'' ಎಂದು ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿದರು.
Vijaya Karnataka Web Siddaramaiah(1)
Former CM and leader of the opposition, Siddaramaiah


''ನಾನು ಗೋಮಾಂಸ ತಿಂದಿದ್ದೇನೆ ಎಂದು ಎಲ್ಲಿಯೂ ಹೇಳಲಿಲ್ಲ. ನಾನು ಕೋಳಿ, ಕುರಿ, ಮೇಕೆ ತಿಂದಿದ್ದೇನೆ. ನನಗೆ ತಿನ್ನಬೇಕು ಎಂದು ಅನಿಸಿದರೆ ತಿನ್ನುತ್ತೇನೆ. ಅದನ್ನು ಕೇಳಲು ಇವರು ಯಾರು ಎಂದು ಕೇಳಿದ್ದೇನೆ. ಯಾವ ಆಹಾರ ತಿನ್ನಬೇಕು ಎಂದು ನಿರ್ಧರಿಸುವುದು ನನ್ನ ಹಕ್ಕು,'' ಎಂದು ಖಾರವಾಗಿ ಪ್ರಶ್ನಿಸಿದರು.

ನಾನು ದನದ ಮಾಂಸವನ್ನು ತಿನ್ನುತ್ತೇನೆ. ಆಹಾರ ಪದ್ಧತಿ ನನ್ನ ಹಕ್ಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದರು. ಇದು ವಿವಾದ ಪಡೆಯುತ್ತಿದ್ದಂತೆ ನಾನು ಗೋ ಮಾಂಸ ತಿನ್ನುವುದಿಲ್ಲ, ಹಂದಿ ಮಾಂಸವು ತಿನ್ನುವುದಿಲ್ಲ ಎಲ್ಲವನ್ನು ನೀವು ವಿವಾದ ಮಾಡುತ್ತೀರಿ ಎಂದು ಕಿಡಿಕಾರಿದ್ದರು. ಇತ್ತೀಚೆಗೆ ಗೋ ಮಾಂಸಕ್ಕೆ ಸಂಬಂಧಪಟ್ಟಂತೆ ಸಿದ್ದರಾಮಯ್ಯ ಸಾಕಷ್ಟು ಹೇಳಿಕೆಗಳನ್ನು ನೀಡುತ್ತಿರುವುದು ಗಮನಿಸಬಹುದು.

ಚಾಮುಂಡೇಶ್ವರಿಯಲ್ಲೇ ಕೊನೆ ಸ್ಪರ್ಧೆ: ಸಿದ್ದರಾಮಯ್ಯ ಇಂಗಿತ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ